AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಇಲಾಖೆ ನಿವೇಶನಕ್ಕೆ ಬೇಲಿ ಹಾಕಿ ಭದ್ರಪಡಿಸಿದ ಪೊಲೀಸ್ ಇಲಾಖೆ…

1 min read
  1. ಇಲಾಖೆ ನಿವೇಶನಕ್ಕೆ ಬೇಲಿ ಹಾಕಿ ಭದ್ರಪಡಿಸಿದ ಪೊಲೀಸ್ ಇಲಾಖೆ

ಆಲ್ದೂರು: ಪೊಲೀಸ್ ಇಲಾಖೆ ವತಿಯಿಂದ ನಾರಾಯಣ ಗುರು ಸಮುದಾಯ ಭವನದ ಪಕ್ಕದಲ್ಲಿರುವ ಇಲಾಖೆ ಅಧೀನದ ನಿವೇಶನಕ್ಕೆ ಗುರುವಾರ ಬೇಲಿ ಹಾಕಿ ಭದ್ರ ಪಡಿಸಲಾಯಿತು.

ಸರ್ಕಲ್ ಇನ್ಸ್ಪೆಕ್ಟರ್ ಪಿಪಿ ಸೋಮೇಗೌಡ ಪ್ರತಿಕ್ರಿಯೆ ನೀಡಿ ಆಲ್ದೂರು ಪೊಲೀಸ್ ಇಲಾಖೆಯ ವ್ಯಾಪ್ತಿಯಲ್ಲಿ 158 / 2 ಸರ್ವೇ ನಂಬರ್ ನಲ್ಲಿ 1 ಎಕರೆ 8 ಗುಂಟೆ,
159/2 ಸರ್ವೇ ನಂಬರ್ ನಲ್ಲಿ 1 ಎಕರೆ 32 ಗುಂಟೆ ನಿವೇಶನ ಜಮೀನು ಇದ್ದು,
ಇಲಾಖೆಯ ನಿವೇಶನವನ್ನು ಒತ್ತುವರಿ ಮಾಡುವ ಅವಕಾಶಗಳನ್ನು ತಪ್ಪಿಸುವ ಮತ್ತು ಭದ್ರಪಡಿಸುವ ನಿಟ್ಟಿನಲ್ಲಿ ತಂತಿ ಬೇಲಿ ಹಾಕಿಸಿ ಬಂದೋಬಸ್ತ್ ಮಾಡಲಾಗಿದೆ ಎಂದು ತಿಳಿಸಿದರು.
ಪಿ ಎಸ್ ಐ ರವಿ ಜಿ ಎ, ಪೊಲೀಸ್ ಸಿಬ್ಬಂದಿಗಳು ಇದ್ದರು.

About Author

Leave a Reply

Your email address will not be published. Required fields are marked *

You may have missed