“ಆಲ್ದೂರಿನಲ್ಲಿ ಕಸಾಪ ವತಿಯಿಂದ ಚೆನ್ನಮ್ಮ ದೇವೇಗೌಡರಿಗೆ ಭಾವಪೂರ್ಣ ಶ್ರದ್ಧಾಂಜಲಿ.”
1 min read
oplus_140509184
ಆಲ್ದೂರು: ಕನ್ನಡ ಸಾಹಿತ್ಯ ಪರಿಷತ್ತು ಹೋಬಳಿ ಘಟಕದಿಂದ ಮಂಗಳವಾರ ಅಗಲಿದ ಚೆನ್ನಮ್ಮ ದೇವೇಗೌಡ ರವರಿಗೆ ಶ್ರದ್ಧಾಂಜಲಿ ಸಭೆಯನ್ನು ಆಯೋಜಿಸಲಾಗಿತ್ತು.

ಸಭೆಯಲ್ಲಿ ಮಾತನಾಡಿದ ಸಾಹಿತಿ ಡಿ.ಬಿ.ಈಶ್ವರ್ ಗೌಡ,ಮಾಜಿ ಪ್ರಧಾನಿ ದೇವೇಗೌಡರವರ ಧರ್ಮಪತ್ನಿ ಚೆನ್ನಮ್ಮನವರು ಕುಟುಂಬದ ಶಕ್ತಿಯಾಗಿ ಮಾದರಿಯಾಗಿದ್ದು ದೊಡ್ಡ ಕುಟುಂಬದ ಜವಾಬ್ದಾರಿಯನ್ನು ನಿಭಾಯಿಸಿ,ಈ ದೇಶದ ರಾಜಕೀಯ ವ್ಯವಸ್ಥೆಗೆ ಪ್ರಧಾನಿಯನ್ನು,ಮಾಜಿ ಮುಖ್ಯಮಂತ್ರಿಯನ್ನು ಸಚಿವರನ್ನು ಕೊಡುಗೆಯಾಗಿ ನೀಡಿದ ಮಹಾತಾಯಿಯಾಗಿದ್ದು,ಮನೆಯ ನೊಗವನ್ನು ಹೊತ್ತುಕೊಳ್ಳುವ ಹೊಣೆಯನ್ನು ಗೊತ್ತಿದ್ದರಿಂದಲೇ,ನಮಗೆ ಕುಟುಂಬದಿಂದ ದೇಶ ಸೇವೆಗೆ ಪ್ರಧಾನಿಯನ್ನು ಪಡೆಯುವಂತಾಯಿತು.ಕೊನೆಯ ದಿನಗಳಲ್ಲಿ ದೇವೇಗೌಡ ಮತ್ತು ಚೆನ್ನಮ್ಮನವರ ನಡುವೆ ಇದ್ದ ದಾಂಪತ್ಯದ ಅನ್ಯೋನ್ಯತೆ ಯುವಜನತೆ ಅಳವಡಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ತಿಳಿಸಿದರು.
ವಿಶ್ವಕರ್ಮ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ನಾರಾಯಣ ಆಚಾರ್ಯ,ರಾಜ್ಯದ ಅತಿ ದೊಡ್ಡ ಕುಟುಂಬವನ್ನು ಕಟ್ಟಿ ಬೆಳೆಸಿದ ಶಕ್ತಿ ಚೆನ್ನಮ್ಮ ದೇವೇಗೌಡರವರು,ಅವರಲ್ಲಿದ್ದ ತಾಳ್ಮೆ ಸಂಸ್ಕಾರ ಕುಟುಂಬದಿಂದ ಉತ್ತಮ ನಾಯಕರುಗಳು ಉದಯವಾಗಲು ಕಾರಣವಾಯಿತು ಅವರ ಅಗಲಿಕೆ ದೈಹಿಕವಾಗಿ ಅಂತ್ಯವಾಗಿರಬಹುದು ಪ್ರತಿ ಮನೆ ಮನದಲ್ಲಿ ಮಾರ್ಗವಾಗಿ ಹಚ್ಚ ಹಸಿರಾಗಿ ಉಳಿಯುತ್ತದೆ ಎಂದು ಅಭಿಪ್ರಾಯ ಹಂಚಿಕೊಂಡರು.
ಕನ್ನಡ ಸಾಹಿತ್ಯ ಪರಿಷತ್ತು ಹೋಬಳಿ ಘಟಕದ ಅಧ್ಯಕ್ಷ ನೂರ್ ಮಹಮ್ಮದ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.ಸಭೆಯಲ್ಲಿ ಚೆನ್ನಮ್ಮನವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಮೌನಚರಣೆ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು.
ನಗೀನ ನೂರ್,ಯು.ಎಂ.ಜ್ಯೋತಿ,ಕಾಂಗ್ರೆಸ್ ಬ್ಲಾಕ್ ಪ್ರಧಾನ ಕಾರ್ಯದರ್ಶಿ ಸುರೇಶ್.ಎಚ್.ಎಸ್, ಕನ್ನಡ ಸಾಹಿತ್ಯ ಪರಿಷತ್ತು ಪದಾಧಿಕಾರಿಗಳಾದ ಗೋಪಾಲಗೌಡ, ಮಂಜುನಾಥಗೌಡ,ಆನಂದ್,ಮೂರ್ತಿ,ಭಾಗವಹಿಸಿದ್ದರು.
🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.
ಸ್ಥಾನಿಕ ಸಂಪಾದಕರು.
ನ್ಯೂಸ್ ಬ್ಯೂರೋ,ಅವಿನ್ ಟಿವಿ.

