“ಸರ್ಕಾರಿ ಪ್ರೌಢಶಾಲೆಗೆ ಬಂದ ನಾಗರ.”??
1 min read
ಬಣಕಲ್ : ದಿನಾಂಕ 15/07/2026ರ ಬುಧವಾರ ಮಧ್ಯಾಹ್ನ ಶಾಲಾ ಊಟದ ಸಮಯಕ್ಕೆ ಸರಿಯಾಗಿ ನಾಗರ ಹಾವೊಂದು ಕಾಣಿಸಿಕೊಂಡಿದೆ.

ತಕ್ಷಣ ಎಚ್ಚೆತ್ತ ಸರ್ಕಾರಿ ಅನುದಾನಿತ ಬಣಕಲ್ ಪ್ರೌಢಶಾಲೆಯ ಶಿಕ್ಷಕ ವೃಂದ ಬಣಕಲ್ ಸಮೀಪದ ಉರಗ ಪ್ರೇಮಿ ಆರೀಫ್ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದು,ಕರೆಗೆ ಸ್ಪಂದಿಸಿದ ಅವರು ನಾಗರ ಹಾವನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ.
ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕರಾದ ಜಿ.ಹೆಚ್.ಶ್ರೀನಿವಾಸ್,ಪಿ.ವಾಸುದೇವ್ ಹಾಗೂ ಶಿಕ್ಷಕ ವೃಂದ ಸ್ಥಳದಲ್ಲಿದ್ದರು.
✍🏻ಬರಹ ಕೃಪೆ.✍🏻

ಸಿದ್ದಿಕ್ ಚಕ್ಕಮಕ್ಕಿ.
ನ್ಯೂಸ್ ಬ್ಯೂರೋ,ಅವಿನ್ ಟಿವಿ.
🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.
ಸ್ಥಾನಿಕ ಸಂಪಾದಕರು.
ನ್ಯೂಸ್ ಬ್ಯೂರೋ,ಅವಿನ್ ಟಿವಿ.

