ಅತೀಯಾದ ಮಳೆಯಿಂದ ಮಲೆನಾಡು ಭಾಗದಲ್ಲಿ ಹಲವಾರು ಸಮಸ್ಯೆಗಳು ದಿನೇದಿನೆ ಉಲ್ಬಣಗೊಳ್ಳುತ್ತಿವೆ.
1 min read
ಕಳೆದ ಎರಡು ತಿಂಗಳುಗಳಿAದ ಮಲೆನಾಡಿನ ಭಾಗಗಳಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯು ದೊಡ್ಡ ಅವಾಂತರವನ್ನೇ
ಸೃಷ್ಟಿಸಿದೆ. ಇಲ್ಲಿನ ಜನ ಜೀವನ ಸಂಪೂರ್ಣವಾಗಿ ಅಸ್ಥವ್ಯಸ್ಥಗೊಂಡಿದೆ. ಅತೀಯಾದ ಮಳೆಯಿಂದ ಮಲೆನಾಡು ಭಾಗದಲ್ಲಿ
ಹಲವಾರು ಸಮಸ್ಯೆಗಳು ದಿನೇದಿನೆ ಉಲ್ಬಣಗೊಳ್ಳುತ್ತಿವೆ. ಇಲ್ಲಿಯ ಕೃಷಿ ಭೂಮಿಯಲ್ಲಿರುವ ಕಾಫಿ ಬೆಳೆಯು ಬಹುಪಾಲು
ಪ್ರದೇಶಗಳಲ್ಲಿ ಶೇಕಡ ೭೦-೮೦ ರಷ್ಟು ನಾಶವಾಗಿದೆ. ಅತೀಯಾದ ಗಾಳಿ ಮಳೆಯಿಂದ ಕಾಫಿ ಗಿಡಗಳು ಎಲೆ ಉದುರಿ ಬೋಳಾಗಿ
ನಿಂತಿವೆ. ಇದರ ಪರಿಣಾಮ ಮುಂದಿನ ಬೆಳೆಯೂ ಕುಂಟಿತವಾಗಲಿದೆ. ಹವಾಮಾನ ವೈಪರೀತ್ಯದಿಂದ ಸೆಪ್ಟೆಂಬರ್ ತಿಂಗಳಿನಲ್ಲಿ
ಸುರಿಯುತ್ತಿರುವ ಅತೀಯಾದ ಶೀತದಿಂದ ಕೂಡಿದ ಮಳೆಯಿಂದ ಕಾಫಿಯು ನೆಲಕ್ಕುದುರುತ್ತಿದೆ. ಅರೇಬಿಕಾ ಕಾಫಿ ಕಟಾವಿಗೆ
ಬರುವ ಸಮಯ ಸನ್ನಿಹಿತವಾಗಿದ್ದು, ಈಗ ಸುರಿಯುತ್ತಿರುವ ಮಳೆಯಿಂದ ಹಣ್ಣಾದ ಅಲ್ಪ ಸ್ವಲ್ಪ ಕಾಫಿಯೂ ನೆಲಕ್ಕುದುರುತ್ತಿದೆ.
ಕಾಫಿಯ ಜೊತೆಯಲ್ಲಿ ಕಾಳುಮೆಣಸಿನ ಬಳ್ಳಿಗಳು ಸಹ ಕೊಳೆರೋಗಕ್ಕೆ ತುತ್ತಾಗಿದ್ದು, ಅಪಾರ ಪ್ರಮಾಣದಲ್ಲಿ ಫಸಲು
ನೆಲಕ್ಕುದುರುತ್ತಿದೆ ಮತ್ತು ಬಳ್ಳಿಗಳು ನಶಿಸಿಹೋಗುವ ಹಂತ ತಲುಪಿವೆ ಕಾಫಿ, ಕಾಳುಮೆಣಸಿನ ಜೊತೆಗೆ ಅಡಿಕೆ ಫಸಲು ಸಹ
ಕೊಳೆರೋಗಕ್ಕೆ ತುತ್ತಾಗಿ ಉದುರುತ್ತಿದೆ. ಇದರೊಂದಿಗೆ ಕಾಫಿ ಮತ್ತು ಕಾಳುಮೆಣಸಿನ ಧಾರಣೆಯೂ ಗಣನೀಯವಾಗಿ
ಇಳಿಮುಖವಾಗಿದೆ.
ಹವಾಮಾನ ವೈಪರೀತ್ಯದ ಜೊತೆಗೆ ಕಾಡಾನೆ ಮತ್ತು ಕಾಡುಪ್ರಾಣಿಗಳ ಹಾವಳಿಯು ಸಹ ಇಲ್ಲಿನ ರೈತ/ಬೆಳೆಗಾರರಿಗೆ ಅಪಾರವಾದ
ಬೆಳೆ ನಷ್ಟ ಉಂಟುಮಾಡುತ್ತಿವೆ. ಕೆಲವು ಮಾನವ ಪ್ರಾಣ ಹಾನಿಯು ಸಹ ಸಂಭವಿಸಿರುವುದು ತಿಳಿದ ವಿಷಯ. ಬಹುತೇಕ
ಬೆಳೆಗಾರರು ಕಾಡುಪ್ರಾಣಿಗಳ ಹಾವಳಿಯಿಂದ ತಮ್ಮ ಕೃಷಿ ಭೂಮಿಯನ್ನು ಪಾಳು ಬಿಟ್ಟಿದ್ದಾರೆ.
ಅತೀವೃಷ್ಟಿ ಹಾನಿಗೆ ಸರ್ಕಾರಗಳು ಈ ಹಿಂದೆ ಪರಿಹಾರ ನೀಡಿದ್ದರೂ ಸಹ ಎಲ್ಲಾ ಬೆಳೆಗಾರರಿಗೂ ಸಮರ್ಪಕವಾಗಿ ಪರಿಹಾರ
ದೊರೆತಿರುವುದಿಲ್ಲ. ಪ್ರಧಾನಮಂತ್ರಿಯವರ ಫಸಲ್ಭಿಮಾ ಯೋಜನೆಯ ಸೌಲಭ್ಯವು ಸಹ ಎಲ್ಲಾ ಬೆಳೆಗಾರರಿಗೆ
ದೊರೆತಿರುವುದಿಲ್ಲ.
ದೇಶದ ಬೆನ್ನೆಲುಬಾಗಿರುವ ರೈತ ಬೆಳೆಗಾರರ ನೆರವಿಗೆ ಸರ್ಕಾರ ಧಾವಿಸಬೇಕಾಗಿದೆ. ತೋಟಗಾರಿಕಾ ಇಲಾಖೆ, ಕೃಷಿ ಇಲಾಖೆ,
ಕಾಫಿ ಮಂಡಳಿ ಹಾಗೂ ಕಂದಾಯ ಇಲಾಖೆಗಳು ಜಂಟಿಯಾಗಿ ಸರ್ವೆಕಾರ್ಯ ನೆಡೆಸಿ ನಷ್ಟಕ್ಕೆ ಸೂಕ್ತ ಪರಿಹಾರ
ಒದಗಿಸಿಕೊಡಬೇಕು. ಜೊತೆಗೆ ಶೇಕಡ ೩ ರ ಬಡ್ಡಿ ದರದಲ್ಲಿ ಸರಳ ಸಾಲ ದೊರಕಿಸಿಟ್ಟು,
ವಂದನೆಗಳೊAದಿಗೆ
http://nisargacare.com/career/
http://nisargacare.com/navachaithanya-old-age-home/