ಬಣಕಲ್ ಹೋಬಳಿ ಕೆಂಪೇಗೌಡ ಒಕ್ಕಲಿಗರ ವೇದಿಕೆ….
1 min read
21/06/2025ರಂದು ಬಂಕೆನಹಳ್ಳಿ ಹೋಮ್ ಸ್ಟೇ ನಲ್ಲಿ ಬಣಕಲ್ ಹೋಬಳಿ ಕೆಂಪೇಗೌಡ ಒಕ್ಕಲಿಗರ ವೇದಿಕೆ (ರಿ )ಸಭೆ ನಡೆಸಲಾಯಿತು ಈ ಸಭೆಯ ಅಧ್ಯಕ್ಷತೆ ಚಂದನ್ ಗೌಡ ಹೋಬಳಿ ಅಧ್ಯಕ್ಷರ ಘನ ಅಧ್ಯಕ್ಷತೆ ವಹಿಸಿದ್ದರು ತಾಲ್ಲೂಕು ಅಧ್ಯಕ್ಷರಾದ ಬ್ರಿಜೇಶ್ ಗೌಡ, ಪ್ರಧಾನ ಕಾರ್ಯದರ್ಶಿ ಪ್ರಸಾದ್ ಗೌಡ, ಸಂಘಟನಾ ಕಾರ್ಯದರ್ಶಿ ಪ್ರೀತಮ್ ಗೌಡ ಮಾಡ್ಕಲ್, ಕಾರ್ಯದರ್ಶಿ ಪವನ್ ಗೌಡ ಪಟ್ಟದೂರು, ಉಸ್ತುವಾರಿ ಆದರ್ಶ್ ಗೌಡ ತರುವೆ, ಹಿರಿಯರಾದ ಸತೀಶ್ ಗೌಡ, ವಿಕ್ರಮ್ ಗೌಡ, ಭರತ್ ಗೌಡ, ಸುಂದ್ರೇಶ್ ಗೌಡ ಕುಂದೂರು, ಸುಬ್ರಮಣ್ಯ ತ್ರಿಪುರ, ಪುಟ್ಟಣ್ಣ ಪಟ್ಟದೂರು,ಸಂದೇಶ್ ಗೌಡ ಹೊರಟ್ಟಿ ಇನ್ನು ಒಕ್ಕಲಿಗ ಹಿರಿಯಕಿರಿಯ ಹೋಬಳಿಯ ಸರ್ವ ಸದಸ್ಯರ ಉಪ ಸ್ಥಿತಿಯಲ್ಲಿ ಸಭೆಯನ್ನು ನಡೆಸಲಾಯಿತು, ಬಣಕಲ್ ಹೋಬಳಿಯ ನೂತನ ಅಧ್ಯಕ್ಷರನ್ನಾಗಿ ಅಭಿಲಾಷ್ ಗೌಡ (ಅಭಿ ) ಅತ್ತಿಗೆರೆ ಹಾಗೂ ಪ್ರಧಾನ ಕಾರ್ಯಧರ್ಶಿ ಆರ್ಯನ್ ಗೌಡ ಬಗ್ಗಸಗೂಡು ಇವರನ್ನು ಆಯ್ಕೆ ಮಾಡಲಾಯಿತು, ಸಭೆಯನ್ನು ಉದ್ದೇಶಿಸಿ ಮಾತನಾಡಿದ ತಾಲೂಕು ಅಧ್ಯಕ್ಷರಾದ ಬ್ರಿಜೇಶ್ ಗೌಡ ಕಡಿದಾಳು, ಮುಂಬರುವ ನಮ್ಮ ಒಕ್ಕಲಿಗ ಪೀಳಿಗೆಗೋಸ್ಕರ ನಮ್ಮ ಈಸಂಘಟನೆಯನ್ನು ಬಲಪಡಿಸಬೇಕಾಗಿದ್ದು ಹಾಗೂ ಒಕ್ಕಲಿಗರ ಹಿತಾಸಕ್ತಿ ಕಾಪಾಡಿಕೊಳ್ಳುವುದು ಇದರ ಉದ್ದೇಶವೇ ವಿನಹ ಬೇರೆ ಯಾವ ಜಾತಿ ಪಂತಗಳ ವಿರುದ್ಧ ಹೊರಡುವ ಮನೋಭಾವನೆ ಯಾರಿಗೂ ಇಲ್ಲಾ, ಜನಗಣತಿಯಲ್ಲಿ ಒಕ್ಕಲಿಗರನ್ನು ಹಿಂದಿಡುವ ಕೆಲಸ ನಡೆಯುತ್ತಿದೆ ಹಾಗಾಗಿ ನಾವು ಜಾಗೃತರಾಗಬೇಕು ಎಂದು ತಿಳಿಸಿ ಸಂಘಟನೆ ಯನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳಬಾರದು ಎಂದು ಎಚ್ಚರಿಸಿದರು, ಮತ್ತು ನೂತನವಾಗಿ ಆಯ್ಕೆ ಆದ ಬಣಕಲ್ ಹೋಬಳಿಯ ಪದಾಧಿಕಾರಿಗಳಿಗೆ ಶುಭಹಾರೈಸಿದರು ಬಣಕಲ್ ಹೋಬಳಿಯ ಉಸ್ತುವಾರಿಗಳಾದ ಆದರ್ಶ್ ತರುವೆ ಶುಭಹಾರೈಸಿ ಜನಾಂಗದ ಏಳಿಗೆಗಾಗಿ ಎಲ್ಲರೂ ಒಟ್ಟಾಗಿ ಶ್ರಮಿಸೋಣ ಎಂದರು, ಈ ಸಭೆಯ ಅಧ್ಯಕ್ಷತೆ ವಹಿಸಿದ್ದ ಹಾಲಿ ಅಧ್ಯಕ್ಷರಾದ ಚಂದನ್ ಗೌಡ ಅವರು ನನಗೆ ನೀಡಿದ ಸಹಕಾರ ಸಲಹೆಯನ್ನು ನೂತನ ಅಧ್ಯಕ್ಷರಿಗೆ ಹಾಗೂ ಕಾರ್ಯದರ್ಶಿಗಳಿಗೆ ನೀಡಬೇಕೆಂದು ನೆರೆದಿದ್ದ ಒಕ್ಕಲಿಗ ನಾಯಕರುಗಳಿಗೆ ಮನವಿ ಮಾಡಿದರು, ನೂತನ ಅಧ್ಯಕ್ಷರಾದ ಅಭಿಲಾಷ್ ಗೌಡ ಅತ್ತಿಗೆರೆ ಮಾತನಾಡಿ ಹೋಬಳಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಕೆಂಪೇಗೌಡ ಒಕ್ಕಲಿಗರ ವೇದಿಕೆಯ ಸರ್ವ ಸದಸ್ಯರಿಗೂ ಧನ್ಯವಾದಗಳನ್ನು ತಿಳಿಸಿ ಮುಂದಿನ ದಿನಗಳಲ್ಲಿ ಜನಾಂಗದ ಏಳಿಗೆಗಾಗಿ ದುಡಿಯುವುದಾಗಿ ತಿಳಿಸಿದರು. ಆರ್ಯನ ಗೌಡ ಮಾತನಾಡಿ ಆಯ್ಕೆ ಮಾಡಿದ ಎಲ್ಲರಿಗೂ ಧನ್ಯವಾದಗಳು ತಿಳಿಸಿದರು, ಒಕ್ಕಲಿಗ ಜನಾಂಗದ ಹಿರಿಯರು ಮಾತನಾಡಿ ನೂತನ ಅಧ್ಯಕ್ಷರು ಹಾಗೂ ಕಾರ್ಯದರ್ಶಿ ಗಳಿಗೆ ಶುಭಹಾರೈಸಿ ಸಂಘದ ಸಾಧನೆ ಹಾಗೂ ಮೊನ್ನೆ ಚಿಕ್ಕಮಗಳೂರಿನಲ್ಲಿ ನೆಡೆದ ಬೆಳೆಗಾರರ ಸಮಾವೇಶಕ್ಕೆ ಮೂಡಿಗೆರೆಯ ಬೆಳೆಗಾರರನ್ನು ಒಟ್ಟು ಗೂಡಿಸುವಲ್ಲಿ ಸಂಘದ ಪಾತ್ರ ಅತಿ ಮುಖ್ಯವಾಗಿತ್ತು ಎಂದು ಪ್ರಶಂಸಿಸಿ ನಮ್ಮ ಈ ಸಂಘಟನೆಯ ಏಳಿಗೆಗೆ ಸದಾ ಕೈಜೋಡಿಸುವುದಾಗಿ ತಿಳಿಸಿದರು