लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
23/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

..**ನಿಧನ**..ಶ್ರೀ ಆಸ್ಕರ್ ಫೆರ್ನಾಂಡಿಸ್ ರವರು ಇಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಮ್ಮನ್ನಗಲಿದ್ದಾರೆ

1 min read
Featured Video Play Icon

……..*ನಿಧನ*……

ಐದು ಬಾರಿ ಕೇಂದ್ರದ ಲೋಕಸಭಾ ಸದಸ್ಯರಾಗಿ ,ಎರಡು ಬಾರಿ ರಾಜ್ಯಸಭಾ ಸದಸ್ಯರಾಗಿ ಯಶಸ್ವಿಯಾಗಿ ಅಧಿಕಾರ ನಿರ್ವಹಿಸಿದ್ದ ಸನ್ಮಾನ್ಯ ಶ್ರೀ ಆಸ್ಕರ್ ಫೆರ್ನಾಂಡಿಸ್ ರವರು ಇಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಮ್ಮನ್ನಗಲಿದ್ದಾರೆ .

ಶ್ರೀಯುತರು ಆಗಿನ ಪ್ರಧಾನ ಮಂತ್ರಿ ಸನ್ಮಾನ್ಯ ಮನಮೋಹನ್ ಸಿಂಗ್ ಅವಧಿಯಲ್ಲಿ ಕೇಂದ್ರ ಮಂತ್ರಿಗಳಾಗಿ,

ಸನ್ಮಾನ್ಯ ರಾಜೀವ್ ಗಾಂಧಿ ಪ್ರದಾನ ಮಂತ್ರಿಯಾಗಿದ್ದ ಸಮಯದಲ್ಲಿ ಎ ಐ ಸಿ ಸಿ ಜನರಲ್ ಸೆಕ್ರೆಟರಿ ಆಗಿ ಅಧಿಕಾರ ನಿರ್ವಹಿಸಿದ್ದರು .ಜೊತೆಗೆ ಸನ್ಮಾನ್ಯ ರಾಜೀವ್ ಗಾಂಧಿ ಯವರಿಗೆ ಆತ್ಮೀಯರಾಗಿದ್ದರು .

ಕಳೆದ ಕೆಲ ದಿನಗಳ ಹಿಂದೆ ಶ್ರೀ ಆಸ್ಕರ್ ಫರ್ನಾಂಡಿಸ್ ರವರು ಮನೆಯಲ್ಲಿ ಬಿದ್ದು , ಪ್ರಜ್ಞೆ ತಪ್ಪಿದ್ದರು .

ಇವರು ಈ ಹಿಂದೆ ಕಾಫಿ ಬೆಳೆಗಾರರಿಗೆ
1/3 ಪ್ಯಾಕೇಜ್ ,
ಸಿ ಡಿ ಆರ್ ಪಿ ಪ್ಯಾಕೇಜ್ ,
ವಿಧರ್ಭ ಪ್ಯಾಕೆಜ್ ,
ಕೊಡಿಸುವಲ್ಲಿ ಮಹತ್ವವಾದ ಕಾರ್ಯ ನಿರ್ವಹಿಸಿರುತ್ತಾರೆ .

ಒಕ್ಕೂಟದ ನಿಯೋಗವನ್ನು ಕೇಂದ್ರ ಸರ್ಕಾರಕ್ಕೆ ಕರೆದೊಯ್ದು ಬೆಳೆಗಾರರ ಸಮಸ್ಯೆಗಳನ್ನು ಬಗೆಹರಿಸಿಕೊಡುವಲ್ಲಿ ಅಮೂಲ್ಯ ಸಹಕಾರ ನೀಡಿರುತ್ತಾರೆ .

ಕರ್ನಾಟಕ ಬೆಳೆಗಾರರ ಒಕ್ಕೂಟದ ವಾರ್ಷಿಕ ಮಹಾಸಭೆಯಲ್ಲೂ ಸಹಾ ಭಾಗವಹಿಸಿರುತ್ತಾರೆ .

ಮೃತರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತಾ ,ಶ್ರೀಯುತರ ಕುಟುಂಬದವರಿಗೆ ದು:ಖವನ್ನು ಭರಿಸುವ ಶಕ್ತಿಯನ್ನು ಆ ಭಗವಂತ ಕರುಣಿಸಲಿ ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟದ ವತಿಯಿಂದ ಪ್ರಾರ್ಥಿಸಿಕೊಳ್ಳುತ್ತೇವೆ .

ಜಯರಾಂ.
ಮಾಜಿ ಅಧ್ಯಕ್ಷರು.
ಕರ್ನಾಟಕ ಬೆಳೆಗಾರರ ಸಂಘ.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Career | job

Navachaitanya Old Age Home

About Author