..**ನಿಧನ**..ಶ್ರೀ ಆಸ್ಕರ್ ಫೆರ್ನಾಂಡಿಸ್ ರವರು ಇಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಮ್ಮನ್ನಗಲಿದ್ದಾರೆ
1 min read
……..*ನಿಧನ*……
ಐದು ಬಾರಿ ಕೇಂದ್ರದ ಲೋಕಸಭಾ ಸದಸ್ಯರಾಗಿ ,ಎರಡು ಬಾರಿ ರಾಜ್ಯಸಭಾ ಸದಸ್ಯರಾಗಿ ಯಶಸ್ವಿಯಾಗಿ ಅಧಿಕಾರ ನಿರ್ವಹಿಸಿದ್ದ ಸನ್ಮಾನ್ಯ ಶ್ರೀ ಆಸ್ಕರ್ ಫೆರ್ನಾಂಡಿಸ್ ರವರು ಇಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಮ್ಮನ್ನಗಲಿದ್ದಾರೆ .
ಶ್ರೀಯುತರು ಆಗಿನ ಪ್ರಧಾನ ಮಂತ್ರಿ ಸನ್ಮಾನ್ಯ ಮನಮೋಹನ್ ಸಿಂಗ್ ಅವಧಿಯಲ್ಲಿ ಕೇಂದ್ರ ಮಂತ್ರಿಗಳಾಗಿ,
ಸನ್ಮಾನ್ಯ ರಾಜೀವ್ ಗಾಂಧಿ ಪ್ರದಾನ ಮಂತ್ರಿಯಾಗಿದ್ದ ಸಮಯದಲ್ಲಿ ಎ ಐ ಸಿ ಸಿ ಜನರಲ್ ಸೆಕ್ರೆಟರಿ ಆಗಿ ಅಧಿಕಾರ ನಿರ್ವಹಿಸಿದ್ದರು .ಜೊತೆಗೆ ಸನ್ಮಾನ್ಯ ರಾಜೀವ್ ಗಾಂಧಿ ಯವರಿಗೆ ಆತ್ಮೀಯರಾಗಿದ್ದರು .
ಕಳೆದ ಕೆಲ ದಿನಗಳ ಹಿಂದೆ ಶ್ರೀ ಆಸ್ಕರ್ ಫರ್ನಾಂಡಿಸ್ ರವರು ಮನೆಯಲ್ಲಿ ಬಿದ್ದು , ಪ್ರಜ್ಞೆ ತಪ್ಪಿದ್ದರು .
ಇವರು ಈ ಹಿಂದೆ ಕಾಫಿ ಬೆಳೆಗಾರರಿಗೆ
1/3 ಪ್ಯಾಕೇಜ್ ,
ಸಿ ಡಿ ಆರ್ ಪಿ ಪ್ಯಾಕೇಜ್ ,
ವಿಧರ್ಭ ಪ್ಯಾಕೆಜ್ ,
ಕೊಡಿಸುವಲ್ಲಿ ಮಹತ್ವವಾದ ಕಾರ್ಯ ನಿರ್ವಹಿಸಿರುತ್ತಾರೆ .
ಒಕ್ಕೂಟದ ನಿಯೋಗವನ್ನು ಕೇಂದ್ರ ಸರ್ಕಾರಕ್ಕೆ ಕರೆದೊಯ್ದು ಬೆಳೆಗಾರರ ಸಮಸ್ಯೆಗಳನ್ನು ಬಗೆಹರಿಸಿಕೊಡುವಲ್ಲಿ ಅಮೂಲ್ಯ ಸಹಕಾರ ನೀಡಿರುತ್ತಾರೆ .
ಕರ್ನಾಟಕ ಬೆಳೆಗಾರರ ಒಕ್ಕೂಟದ ವಾರ್ಷಿಕ ಮಹಾಸಭೆಯಲ್ಲೂ ಸಹಾ ಭಾಗವಹಿಸಿರುತ್ತಾರೆ .
ಮೃತರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತಾ ,ಶ್ರೀಯುತರ ಕುಟುಂಬದವರಿಗೆ ದು:ಖವನ್ನು ಭರಿಸುವ ಶಕ್ತಿಯನ್ನು ಆ ಭಗವಂತ ಕರುಣಿಸಲಿ ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟದ ವತಿಯಿಂದ ಪ್ರಾರ್ಥಿಸಿಕೊಳ್ಳುತ್ತೇವೆ .
ಜಯರಾಂ.
ಮಾಜಿ ಅಧ್ಯಕ್ಷರು.
ಕರ್ನಾಟಕ ಬೆಳೆಗಾರರ ಸಂಘ.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.