*ಬಕ್ಕಿ ಗ್ರಾಮದ ಸ.ಹಿ.ಪ್ರಾ.ಶಾಲೆಯಲ್ಲಿ ಬೀಳ್ಕೊಡಿಗೆ ಸಮಾರಂಭ ಹಾಗೂ ಅಭಿನಂದನಾ ಕಾರ್ಯಕ್ರಮ*
1 min read
*ಅಭಿನಂದನಾ ಕಾರ್ಯಕ್ರಮ*
*ಬಕ್ಕಿ ಗ್ರಾಮದ ಸ.ಹಿ.ಪ್ರಾ.ಶಾಲೆಯಲ್ಲಿ ಬೀಳ್ಕೊಡಿಗೆ ಸಮಾರಂಭ ಹಾಗೂ ಅಭಿನಂದನಾ ಕಾರ್ಯಕ್ರಮ*
ಮೂಡಿಗೆರೆ ತಾ,ಬಕ್ಕಿ ಗ್ರಾಮದ ಸ.ಹಿ.ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸಿದ ಶಿವಪ್ಪ ,ಹಾಗೂ ಬೇರೆ ಬೇರೆ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಹಾಗೂ ಸಾಧಕರನ್ನು ಸನ್ಮಾನ ಮಾಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿ ಎಂ ಸಿ ಅಧ್ಯಕ್ಷ ಪ್ರಕಾಶ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯರು ದೇವರಾಜ್,
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಮವತಿ ದೇವರಾಜ್,
ಅವಿನ್ ಟಿ ವಿ ಸಂಪಾದಕ ಮಗ್ಗಲಮಕ್ಕಿ ಗಣೇಶ್, ಶಿವಪ್ಪ, ಪುಟ್ಟೇಗೌಡ, ವಿಪತ್ತು ನಿರ್ವಹಣಾ ತಂಡದ ಬಣಕಲ್ ಹೋಬಳಿ ಸಂಯೋಜಕರು ರವಿ,
ಬಕ್ಕಿಮಂಜುನಾಥ್,
ಪ್ರಸಾದ್,ರವೀಂದ್ರ,
ಮುಖ್ಯ ಶಿಕ್ಷಕಿ ವಿಜಯಲಕ್ಷ್ಮಿ,
ಯಮುನಾ,ಮೋಹನ್,
ಬಾಲರಾಜ್,ಶೈಲ, ಗೌರಮ್ಮ ಆಶಾ ಕಾರ್ಯಕರ್ತೆ ಲಕ್ಷ್ಮಿ ಮುಂತಾದವರು ಭಾಗವಹಿಸಿದ್ದರು.
ಕಾರ್ಯಕ್ರಮ ಉದ್ಘಾಟಿಸಿ ಗ್ರಾಮದ ಹಿರಿಯರು ಆದ ಪುಟ್ಟೇಗೌಡ ಮಾತನಾಡಿ ಕಳೆದ 5 ದಶಕಗಳಿಂದ ಈ ಶಾಲೆಯು ತನ್ನದೇ ಆದ ವೈಶಿಷ್ಟ್ಯತೆ ಹಾಗೂ ಉತ್ತಮ ಸಾಧಕರನ್ನಾಗಿ ಹೊರ ಹೊಮ್ಮಿಸಿದ ಕೀರ್ತಿ ನಮ್ಮ ಶಾಲೆಯದು ಇಲ್ಲಿಗೆ ಬರುವಂತ ಎಲ್ಲ ಶಿಕ್ಷಕರು ಆದರ್ಶ ಶಿಕ್ಷಕರಾಗಿ ಕಂಡುಬರುವುದು ಈ ಊರಿನ ಹೆಮ್ಮೆ ಎಂದರು.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಮಗ್ಗಲಮಕ್ಕಿ ಗಣೇಶ್,ಯಾವುದೇ ಒಂದು ಗ್ರಾಮದ ಅಭಿರುದ್ದಿ ಅಲ್ಲಿಯ ಶೈಕ್ಷಣಿಕ ಪ್ರಗತಿ ಹಾಗೂ ಸಾಂಸೃತಿಕ ವಾತಾವರಣದಿಂದಲೇ ಸಾಧ್ಯ ಎಂಬುದು ಈ ಊರಿನ ಪ್ರತಿಭೆಗಳ ಮೂಲಕ ಗೊತ್ತಾಗಿದೆ ಎಂದರು.
ಶಿಕ್ಷಕ ಶಿವಪ್ಪ ಮಾತನಾಡಿ-ಬಕ್ಕಿ ಗ್ರಾಮದಲ್ಲಿ ನನ್ನ ಶಿಕ್ಷಕ ವೃತ್ತಿಯಲ್ಲಿನ ದಿನಗಳನ್ನ ನಾ ಎಂದು ಮರೆಯಲಾಗದು,
ಈ ಗ್ರಾಮದ ಜನತೆಯ ಸಹಕಾರದಿಂದ ನನ್ನ ವೃತ್ತಿಯಲ್ಲಿ ನಾನು ತುಂಬು ಉತ್ಸಾಹದಿಂದ ಕಾರ್ಯ ನಿರ್ವಹಿಸಲು ಸಾಧ್ಯವಾಯಿತು ಹಾಗಾಗಿ ಎಲ್ಲ ಜನತೆಗೆ ನನ್ನ ತುಂಬು ಹೃದಯದ ಧನ್ಯವಾದಗಳು ಎಂದರು.
ಬಕ್ಕಿ ಮಂಜುನಾಥ್ ಮಾತನಾಡಿ-ಪೋಷಕರು ಮಕ್ಕಳಲ್ಲಿ ಇರುವಂತ ಕಲೆಯನ್ನು ಗುರುತಿಸಿ ಅದಕ್ಕೆ ಪೂರಕವಾದ ಸಹಕಾರ ನೀಡಬೇಕೆ ವಿನಹ ಕೇವಲ ಅಂಕ ಗಳಿಸುವ ಒತ್ತಡ ಹೇರಬಾರದು. ಶೈಕ್ಷಣಿಕವಾಗಿ ರಾಜಕೀಯವಾಗಿ ಕ್ರೀಡೆ ಎಲ್ಲ ಕ್ಷೇತ್ರದಲ್ಲೂ ಬಕ್ಕಿ ಗ್ರಾಮವು ತನ್ನದೇ ಆದ ಛಾಪು ಮೂಡಿಸುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪ್ರಕಾಶ್-ನಮ್ಮೂರಲ್ಲಿ ಏನೇ ಸಣ್ಣ ಪುಟ್ಟ ಕಾರ್ಯಕ್ರಮ ಮಾಡಿದರು ಕೂಡ ಅದ್ಭುತವಾಗಿ ಮೂಡಿ ಬರಲು ಕಾರಣ ನಮ್ಮೂರಿನ ಜನತೆಯ ಸಹಕಾರ ನಾ ಎಂದು ಮರೆಯುವುದಿಲ್ಲ. ಕೋವಿಡ್ ಹಾಗೂ ವಿಪತ್ತು ಸಂದರ್ಭದಲ್ಲಿ ಕಾರ್ಯ ನಿರ್ವಹಿಸಿದ ಆಶಾ ಕಾರ್ಯಕರ್ತೆಯರನ್ನು ಜೊತೆಗೆ ನಮ್ಮ ಹೋಬಳಿ ವಿಪತ್ತು ನಿರ್ವಹಣಾ ತಂಡದ ಕಾರ್ಯ ಶ್ಲಾಘನೀಯ ಅದನ್ನು ಗುರುತಿಸಿ ಗೌರವಿಸುವುದು ನಮ್ಮೆಲ್ಲರ ಹೆಮ್ಮೆ ಎಂದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.