*ವಿಷೇಶವಾಗಿ ಗೌರಿ, ಗಣೇಶ ಹಬ್ಬದ ಬದಲಿಗೆ ಬುದ್ದ.ಅಂಬೇಡ್ಕರ್ ಹಬ್ಬ*
1 min read
*ವಿಷೇಶವಾಗಿ ಗೌರಿ, ಗಣೇಶ ಹಬ್ಬದ ಬದಲಿಗೆ ಬುದ್ದ.ಅಂಬೇಡ್ಕರ್ ಹಬ್ಬ*
ಮೂಡಿಗೆರೆ ತಾಲೂಕಿನ,
ಹಳಿಕೆ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಗಣಪತಿ ಕುರಿಸುವ ಬದಲಿಗೆ,
ಬುದ್ಧ ಅಂಬೇಡ್ಕರ್ ಪೋಟಕ್ಕೆ ಪುಷ್ಪ ಹಾಕುವುದರ ಮೂಲಕ ವಿನೂತನ ರೀತಿಯಲ್ಲಿಕಾರ್ಯಕ್ರಮ ಆಯೋಜಿಸಲಾಯಿತು.
ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಸ್ಲೇಟ್. ಪುಸ್ತಕ. ನೋಟು ಪುಸ್ತಕ. ಪೆನ್ನು. ಬಳಪ. ಪೆನ್ಸಿಲ್ ಅಂಗನವಾಡಿ ಮಕ್ಕಳಿಂದ 1ರಿಂದ 10ನೇ ತಗತಿಯಲ್ಲಿ ಪಾಸಾದ ಮಕ್ಕಳಿಗೆ ಬಿ ಎ ಬಿಕಾಂ ಓದುವ ಮಕ್ಕಳಿಗೂ ಹಂಚಲಾಯಿತು. ಎಸ್ ಎಸ್ ಎಲ್ ಸಿ ಪಾಸಾದ ಮಕ್ಕಳಿಗೆ ಸನ್ಮಾನಿಸಲಾಯಿತು.
ಮತ್ತೆ ಮಹಿಳೆಯರಿಗೆ ಬಾಗಿನ ಕೊಡಲಾಯಿತು.
ಈ ಸಭೆಯನ್ನು ಮೂಡಿಗೆರೆ ಶಾಸಕರಾ ಎಂ. ಪಿ. ಕುಮಾರಸ್ವಾಮಿ ಉದ್ಘಾಟನೆ ಮಾಡಿದರು. ಈ ರೀತಿಯ ಕಾರ್ಯಕ್ರಮಗಳಿಗೆ ನನ್ನ ಸಹಕಾರ ಇದೆ.
ನಮ್ಮ ಸಂಸ್ಕುತಿ ಉಳಿಸುವ ವಿದ್ಯಾರ್ಥಿಗಳಿಗೆ ಪ್ರೊಸ್ತಾಹಿಸುವ ಗ್ರಾಮದ ಜನರು ಈ ರೀತಿ ಒಟ್ಟಿಗೆ ಸೇರಿ ಗ್ರಾಮದ ಅಭಿರುದ್ದಿಗೆ ಸಹಕರಿಸಿ ಎಂದರು.
ಹಳಿಕೆ ಊರಿಗೆ ಒಂದು ಸಮುದಾಯ ಭವನ, ದೇವಸ್ಥಾನ ರಿಪೇರಿ,
ರೈತರ ಜಮೀನಿಗೆ ಹೋಗುವ ರಸ್ತೆ ಮಾಡಿಸಿ ಕೊಡುತ್ತೆನೆ ಅಂದರು.
ಮತ್ತೆ ಮುಖ್ಯ ಭಾಷಣ ಮಾಡಿದ ಪಿ ಕೆ ಮಂಜುನಾಥ ಮಾತನಾಡುತ್ತಾ ಅಂಬೇಡ್ಕರ್ ಮತ್ತು ಬುದ್ದನಿಗೆ ಪೂಜೆ ಮಾಡುವುದರ ಮುಕಾಂತರ ರಾಜ್ಯದಲ್ಲೇ ವಿನೂತನ ರೀತಿಯಲ್ಲಿ ಮಹಿಳೆಯರಿಗೆ ಬಾಗಿನ, ಶಾಲಾ ಮಕ್ಕಳಿಗೆ ನೋಟು ಬುಕ್ಕು ವಿತರಣೆ ಇಡೀ ರಾಜ್ಯಕ್ಕೆ ಮಾದರಿ. ಕಳೆದ ಬಾರಿನೂ ಬಹಳ ಸೊಗಸಾಗಿ ಮಾಡಿದ್ದರು.
ಈ ಬಾರಿನೂ ಬಹಳ ಅಚ್ಚುಕಟ್ಟಾಗಿ ಮಾಡಿದ್ದಾರೆ. ಮುಂದೆ ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸ ಮಾಡಿ ಊರಿಗೆ ಕೀರ್ತಿ ತಂದು,
ಉದ್ಯೋಗ ಪಡೆದು ಕೊಳ್ಳಬೇಕು ಎಂದು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ಅಣ್ಣಪ್ಪ ವಹಿಸಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸುಶೀಲ ಲಕ್ಷ್ಮಣ್ಣ.
ಮಾಜಿ ಅದ್ಯಕ್ಷರಾದ ವಸಂತ ಕುಮಾರ್ .ಮತ್ತು ಊರಿನ ಕಮಿಟಿ ನಾಯಕರಾದ ಸುಧೀರ್,
ಕೃಷ್ಣ್ನ,
ಲಕ್ಷಣ ದೊಡ್ಡಯ್ಯ ಮಂಜುನಾಥ. ಮಹೇಶ,ಪದ್ಮಯ, ಸತೀಶ್ ಎಸ್ ಡಿ ಎಂ ಸಿ ಅಧ್ಯಕ್ಷ ರಾದ ಸುರೇಂದ್ರ, ನಾಗೇಶ,ಮಹಿಳೆಯರಾದ ಶಾರದಮ್ಮ ಕಾರ್ಯಕ್ರಮ ದ ಸ್ವಾಗತವನ್ನು,
ಲಕ್ಷ್ಮಣ ದೊಡ್ಡಯ್ಯ ಮಾಡಿದರು ನಿರೂಪಣೆಯನ್ನು ಅಂಗನವಾಡಿ ಕಾರ್ಯಕರ್ತೆಯಾದ ಗೌರಮ್ಮಮಾಡಿದರು ವಂದನೆಯನ್ನು ಪರಮೇಶ ಮಾಡಿದರು.
ಕಾರ್ಯಕ್ರಮದ ಕೊನೆಯಲ್ಲಿ ಎಲ್ಲ ಅತಿಥಿ ಗಣ್ಯರಿಗೂ ಲಘು ಉಪಹಾರ ವಿತರಿಸಿದರು.