**ಸಮಾರೋಪ ಸಮಾರಂಭ**”ಬಾಂಧವ್ಯ”ಜೆಸಿ ಸಪ್ತಾಹ 2021 7ನೇ ದಿನವಾದ ಕಾರ್ಯಕ್ರಮ
1 min read
*ಸಮಾರೋಪ ಸಮಾರಂಭ*
ಮೂಡಿಗೆರೆ ಜೇಸಿ ವತಿಯಿಂದ 07-09-2021 ರಂದು ಮಂಗಳವಾರ “ಬಾಂಧವ್ಯ”ಜೆಸಿ ಸಪ್ತಾಹ 2021
7ನೇ ದಿನವಾದ ಇಂದು ಸಂಜೆ 5 ಗಂಟೆಗೆ ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಧ್ಯಕ್ಷರಾದ ಚಂದ್ರಶೇಖರ್ ಕುನ್ನಹಳ್ಳಿ ವಹಿಸಿದ್ದರು. ಸ್ವಾಗತವನ್ನು ನಿಕಟಪೂರ್ವ ಅಧ್ಯಕ್ಷರಾದ ರವಿ ಕುಮಾರ್ ಸ್ವಾಗತಿಸಿದರು.
ಮುಖ್ಯ ಅತಿಥಿಗಳಾಗಿ, ಶ್ರೀ ಗಿರೀಶ್ ನಂದನ್ ಚೀಪ್ ಅಡ್ಮಿನಿಸ್ಟ್ರೇಷನ್ ಆಫೀಸರ್ , ಹಾಸನ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ , ಹಾಗೂ ವಲಯ 14 ರ ಅಧ್ಯಕ್ಷರಾದ ಶ್ರೀಯುತ ಭರತ್ ಎನ್ ಆಚಾರ್ಯ, ವಲಯ 14ರ ಉಪಾಧ್ಯಕ್ಷರಾದ ಬಾಬು ಗೌಡ ಮುಖ್ಯ ಅತಿಥಿಗಳಾಗಿದ್ದರು, ಸಭಾಕಾರ್ಯಕ್ರಮದಲ್ಲಿ ಜೆಸಿರೆಟ್ ಅಧ್ಯಕ್ಷರಾದ ಸುಧಾ ಚಂದ್ರಶೇಖರ್, ಜೇಸಿರೇಟ್ ಕಾರ್ಯದರ್ಶಿ ಕೃತಿಪ್ರದೀಪ್ , ಬಾಂಧವ್ಯ ಜೇಸಿ ಸಪ್ತಾಹದ ಮಹಾನಿರ್ದೇಶಕರಾದ ಜೆಸಿ ಹಮೀದ್ ಸಬ್ಬೇನಹಳ್ಳಿ, ಜೆಜೆಸಿ ಅಧ್ಯಕ್ಷರಾದ ರಾಣಿ ಚಂದ್ರಶೇಖರ್, ಜೆಜೆಸಿ ಕಾರ್ಯದರ್ಶಿಯಾದ ಆದಿತಿ ಪ್ರಸಾದ್, ಇದ್ದರು. ಕಾರ್ಯಕ್ರಮದಲ್ಲಿ ಜೆಸಿ ಕಮಲ ಪತ್ರ ಪ್ರಧಾನ ವನ್ನು ಜೆಸಿ ಮಣಿಕಂಠ ರವರಿಗೆ ನೀಡಿ ಗೌರವಿಸಲಾಯಿತು. ಮೂಡಿಗೆರೆ ತಾಲೂಕಿನ ಕುನ್ನಹಳ್ಳಿ ಗ್ರಾಮದ K.S.ಕೃಷ್ಣೇಗೌಡರು ತಾಲೂಕಿನ ಕೃಷಿ ಸಾಧಕರೆಂದು ಸನ್ಮಾನಿಸಲಾಯಿತು. ಅಬ್ದುಲ್ ರಹಿಮಾನ್ ಬಿಳಗೊಳ ಅವರಿಗೂ ಸಹ ಜೆಸಿ ವತಿಯಿಂದ ಸನ್ಮಾನ ಮಾಡಿ ಗೌರವಿಸಲಾಯಿತು, ಯುವ ಪ್ರತಿಭೆಗಳಿಗೆ ಸಹ ಸನ್ಮಾನ ಮಾಡಲಾಯಿತು. ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಮೂಡಿಗೆರೆ ತಾಲೂಕಿನಲ್ಲಿ ಕನ್ನಡ ಮಾಧ್ಯಮದಲ್ಲಿ ಪ್ರಥಮ ಸ್ಥಾನ ಗಳಿಸಿರುವ 625ಕ್ಕೆ 605 ಅಂಕವನ್ನು ಗಳಿಸಿದಂತ ಬಿ .ನಿಧಿ ಮೂಡಿಗೆರೆ ಇವರಿಗೆ ಜೇಸಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ವರುಣ್ ಶೆಟ್ಟಿ, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಡಿಸೈನ್( ಏಮ್. ಡೆಸ್) ಪ್ರವೇಶ ಪರೀಕ್ಷೆಯ ಆಲ್ ಇಂಡಿಯಾ ಶ್ರೇಣಿಯಲ್ಲಿ ಮೂರನೇ ಮೂರನೇ ಸ್ಥಾನ,ಓಬಿಸಿ ಕೆಟಗರಿಗೆ ಪ್ರಥಮ ರಾಂಕ್ ಗಳಿಸಿದ್ದಾರೆ.
ಇವರಿಗೆ ಮೂಡಿಗೆರೆ ಜೆಸಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ನಂತರ ನೂತನ ಸದಸ್ಯರ ಸೇರ್ಪಡೆ ಮಾಡಲಾಯಿತು. ಸಭೆಯಲ್ಲಿ ಜೆಸಿ ಜೇಶಿರೆಟ್ ಪೂರ್ವಅಧ್ಯಕ್ಷರು, ಜೇಸಿ ಸದಸ್ಯರುಗಳು, ಸಂಘ-ಸಂಸ್ಥೆಗಳ ಅಧ್ಯಕ್ಷರು ಪದಾಧಿಕಾರಿಗಳು ,ಹಾಗೂ ಸಾರ್ವಜನಿಕ ಬಂಧುಗಳು ಪತ್ರಿಕಾ ಮಿತ್ರರು ಆಗಮಿಸಿದರು.
ಜೆಸಿ ಕಾರ್ಯದರ್ಶಿ ಜೇಸಿ ಶ್ರೇಷ್ಠಿ ವಂದಿಸಿದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.