*ಬೆಳೆಗಳಿಗೆ ಮೂಷಿಕನ ಕಾಟ* ನಿವಾರಿಸುವಂತೆ ಗಣೇಶನಿಗೆ ಮೂಷಿಕನನ್ನು ಅರ್ಪಿಸಿದ ಭಕ್ತ.
1 min read
*ಬೆಳೆಗಳಿಗೆ ಮೂಷಿಕನ ಕಾಟ* ನಿವಾರಿಸುವಂತೆ ಗಣೇಶನಿಗೆ ಮೂಷಿಕನನ್ನು ಅರ್ಪಿಸಿದ ಭಕ್ತ.
ಮೂಡಿಗೆರೆ ತಾಲ್ಲೂಕಿನ ಮರ್ಕಲ್ ಗ್ರಾಮದಲ್ಲಿ ಯುವಕನೊಬ್ಬ ತಮ್ಮ ಕೃಷಿಪ್ರದೇಶದ ಬೆಳೆಗಳಿಗೆ ಮೂಷಿಕಗಳಿಂದ ಆಗುತ್ತಿರುವ ಬೆಳೆಹಾನಿಯಿಂದ ಬೇಸತ್ತು ಗಣೇಶನಿಗೆ ಮೂಷಿಕ ಅರ್ಪಿಸಿ ಬೆಳೆಹಾನಿ ತಪ್ಪಿಸುವಂತೆ ಬೇಡಿಕೊಂಡ ಘಟನೆ ಶುಕ್ರವಾರ ನಡೆದಿದೆ.
ಗಣೇಶನ ಹಬ್ಬವಾದ ಶುಕ್ರವಾರ ಮರ್ಕಲ್ ಗ್ರಾಮದಲ್ಲಿ ಗಣೇಶನ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದ್ದು ಮರ್ಕಲ್ ಗ್ರಾಮದ ಯುವಕ ನಿತನ್ ಮೂಷಿಕಗಳಿಂದ ಬೆಳೆಗಳನ್ನು ರಕ್ಷಿಸುವಂತೆ ಮೂಷಿಕಯೊಂದನ್ನು ಹಿಡಿದು ತಂದು ಗಣೇಶನಿಗೆ ಅರ್ಪಿಸಿ ಪ್ರಾರ್ಥನೆ ಸಲ್ಲಿಸಿದ್ದಾನೆ. ಮೂಷಿಕವೊಂದನ್ನು ಗಣೇಶನ ವಿಗ್ರಹದ ಬಳಿ ಬಿಡುತ್ತಿದ್ದಂತೆ ಮೂಷಿಕ ಬದುಕಿದೆ ಬಡ ಜೀವ ಎಂದು ಕಾಲಿಗೆ ಬುದ್ದಿ ಹೇಳಿದೆ.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.