ಎಸ್ ಎಸ್ ಇಲ್ ಸಿಯ ಪರೀಕ್ಷೆ ಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ *ಪ್ರತಿಭಾ ಪುರಸ್ಕಾರ**
1 min read*ಪ್ರತಿಬಾ ಪುರಸ್ಕಾರ*
ಆಶ್ರಯ ಸಾಮಾಜಿಕ ಸೇವಾ ಸಂಸ್ಥೆ ಮೂಡಿಗೆರೆ, ಬ್ಲಾಕ್ ಕಾಂಗ್ರೆಸ್ ಸಮಿತಿ ಮೂಡಿಗೆರೆ ಹಾಗೂ ಯುವ ಕಾಂಗ್ರೆಸ್ ಸಮಿತಿ ಮೂಡಿಗೆರೆ ಇವರ ಸಹಯೋಗದಲ್ಲಿ
ದಿನಾಂಖ 06.09.2021.ರ ಸೋಮವಾರ ಸಂಜೆ 3.30ಕ್ಕೆ
ಮೂಡಿಗೆರೆ ಕೆ.ಎಂ ರಸ್ತೆಯಲ್ಲಿರುವ *ಬಂಟರ ಸಭಾ ಭವನದಲ್ಲಿ ಇ ಬಾರಿ ಎಸ್ ಎಸ್ ಇಲ್ ಸಿಯ ಪರೀಕ್ಷೆ ಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ *ಪ್ರತಿಭಾ ಪುರಸ್ಕಾರ** ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಆಶ್ರಯ ಸಾಮಾಜಿಕ ಸೇವಾ ಸಂಸ್ಥೆಯ ಅಧ್ಯಕ್ಷರು ಹಾಗೂ ಮಾಜಿ ಸಚಿವರು ಆದ ಶ್ರೀಮತಿ ಮೋಟಮ್ಮ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ HG ಸುರೇಂದ್ರ,ಯುವ ಕಾಂಗ್ರೆಸ್ ಅಧ್ಯಕ್ಷ ಕಣಚೂರು ದೀಕ್ಷಿತ್, ಬೆಳೆಗಾರ ಒಕ್ಕೂಟ ಮಾಜಿ ಅಧ್ಯಕ್ಷ BS ಜಯರಾಮ್,ಸಂಸ್ಥೆಯ ನಿರ್ದೇಶಕರಾದ ನಯನ ಮೋಟಮ್ಮ, ಎಂ ಎಸ್ ಅನಂತ್,ಕಾರ್ಯದರ್ಶಿ ಹೊಸ್ಕೆರೆ ರಮೇಶ್ ಮುಖಂಡರಾದ HP ರೇವಣ್ಣ ಗೌಡ,BK ಜಯಮ್ಮ, ಎಂ ಎನ್ ಅಶ್ವಥ್,ಪ. ಪಂ ಸದಸ್ಯ ಹಂಝ ಉಪಸ್ಥಿತರಿದ್ದರು.
ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಮೋಟಮ್ಮ ಮಾತನಾಡಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
ಸಾಧನೆಗೆ ಬಡತನ ಅಡ್ಡಿಯಾಗಬಾರದು, ತಂದೆ-ತಾಯಿ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಕಷ್ಟ ಪಟ್ಟು ದುಡಿದು ಮಕ್ಕಳನ್ನು ಓದಿಸುತ್ತಾರೆ. ಮಕ್ಕಳೂ ಕೂಡ ಅದೇ ಪ್ರತಿಫಲವನ್ನು ತಂದೆ ತಾಯಿಗಳಿಗೆ ನೀಡಿದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ.
ಸದಾ ತಮ್ಮ ತಮ್ಮ ಭವಿಷ್ಯದ ಬಗ್ಗೆ ಚಿಂತನೆ ಇಟ್ಟುಕೊಂಡು ವ್ಯಾಸಂಗ ಮುಂದುವರಿಸಬೇಕು. ಹೆತ್ತವರಿಗೆ, ಊರಿಗೆ ಕೀರ್ತಿ ತರಬೇಕು ಎಂದು ಕಿವಿಮಾತು ಹೇಳಿದರು.
ಸಂಸ್ಥೆಯ ನಿರ್ದೇಶಕಿ ನಯನಮೋಟಮ್ಮ ಮಾತನಾಡಿ ಮುಂದಿನದಿನಗಳಲ್ಲಿ ಉನ್ನತ ಶಿಕ್ಷಣ ಬಯಸುವ, ಕಾನೂನು ಪದವಿ ವ್ಯಾಸಂಗ ಮಾಡಲು ಉದ್ದೇಶವಿರುವ ವಿದ್ಯಾರ್ಥಿಗಳಿಗೆ ಪ್ರವೇಶ ಪರೀಕ್ಷೆಗೆ ತಯಾರಿ ನಡೆಸಲು ನುರಿತ ತಜ್ಞರಿಂದ ತರಬೇತಿ ಕೊಡಿಸಲು ಚಿಂತಿಸಲಾಗಿದೆ. ಇದರ ಸದುಪಯೋಗವನ್ನು ನಮ್ಮ ಗ್ರಾಮೀಣ ಭಾಗದ ಮಕ್ಕಳು ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ 22ವಿದ್ಯಾರ್ಥಿಗಳಿಗೆ ತಲಾ ರೂ.5000/-ರೂ ನಗದು ಪ್ರೋತ್ಸಾಹ ಧನ ಹಾಗೂ ನೆನಪಿನ ಕಾಣಿಕೆಯನ್ನು ನೀಡಲಾಯಿತು
ಇದೇ ಸಂಧರ್ಭದಲ್ಲಿ ಮೂಡಿಗೆರೆಯ ವ್ಯಾಪಾರೋದ್ಯಮಿ ಮನಮೋಹನ್ ಶೆಟ್ಟಿ ದಂಪತಿಗಳ ಸುಪುತ್ರ ವರುಣ ಶೆಟ್ಟಿಯವರನ್ನು ಸನ್ಮಾನಿಸಲಾಯಿತು.
HG ಸುರೇಂದ್ರ, BS ಜಯರಾಮ್ ಮಾತನಾಡಿದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್