**ಬಾಂಧವ್ಯ ಜೆಸಿ ಸಪ್ತಾಹ** 5ನೇ ದಿನವಾದ ಇಂದು ಆರೋಗ್ಯ ಮಾಹಿತಿ ಶಿಬಿರ ಹಾಗೂ ಸ್ವಚ್ಛತಾ ಅಭಿಯಾನ
1 min read
*ಬಾಂಧವ್ಯ ಜೆಸಿ ಸಪ್ತಾಹ*
2021 5ನೇ ದಿನವಾದ ಇಂದು ಆರೋಗ್ಯ ಮಾಹಿತಿ ಶಿಬಿರ ಹಾಗೂ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿ ಅಧ್ಯಕ್ಷರಾದ ಜೆಸಿ ಚಂದ್ರಶೇಖರ್ ಕುನ್ನಹಳ್ಳಿ ವಹಿಸಿದರು.
ನಿಕಟಪೂರ್ವ ಅಧ್ಯಕ್ಷರಾದ ಜೆಸಿ ರವಿಕುಮಾರ್ ಸ್ವಾಗತಿಸಿದರು.
ಮುಖ್ಯ ಅತಿಥಿಗಳಾಗಿ ಜೆಸಿ ಪೂರ್ವ ಅಧ್ಯಕ್ಷರಾದ ಡಾಕ್ಟರ್ ರಾಮಚರಣ್ ಅಡ್ಯಂತಾಯ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ಕೆ.ಸಿ ರತನ್ , ಮೂಡಿಗೆರೆ ಎಂ.ಜಿ.ಎಂ ಆಸ್ಪತ್ರೆ ವೈದ್ಯರಾದ ಡಾಕ್ಟರ್ ನೀಲಿಮ್ .ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ಜೆಸಿರೇಟ್ ಅಧ್ಯಕ್ಷರಾದ ಸುಧಾ ಚಂದ್ರಶೇಖರ್ ,ಜೆಸಿರೆಟ್ ಕಾರ್ಯದರ್ಶಿ ಕೃತಿ ಪ್ರದೀಪ್, ಬಾಂಧವ್ಯ ಜೇಸಿ ಸಪ್ತಾಹದ ಮಹಾನಿರ್ದೇಶಕರಾದ ಜೆಸಿ ಹಮೀದ್ ಸಬ್ಬೇನಹಳ್ಳಿ ,
ಈ ದಿನದಪ್ರಾಜೆಕ್ಟ ಡೈರೆಕ್ಟರ್ ಸುದೀಪ್ ಅವರು,
ಜೆಸಿ ಕಾರ್ಯದರ್ಶಿ ಶ್ರೇಷ್ಟಿ ಅವರು ವಂದಿಸಿದರು. ಕಾರ್ಯಕ್ರಮದಲ್ಲಿ ಇಂದು ಭಾರತದ ರಾಷ್ಟ್ರೀಯ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ,
ಜೇಸಿ ಪೂರ್ವಅಧ್ಯಕ್ಷರಾದ ಅಶೋಕ್ ಹಾಗೂ ದಿವ್ಯ ಸುಪ್ರೀತ್ಅವರಿಗೆ ಜೆಸಿ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಲಾಯಿತು.
ಅದಾದ ನಂತರ ಮೂಡಿಗೆರೆ ಡಾಕ್ಟರ್ ನೀಲಿಮ್ಅವರಿಂದ ಆರೋಗ್ಯದ ಬಗ್ಗೆ ಮಾಹಿತಿಯನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ಜೆಸಿ ಜೆಸಿರೇಟ್ ಪೂರ್ವ ಧ್ಯಕ್ಷರು ಜೆಸಿ ಜೆಸಿರೆಟ್ ಸದಸ್ಯರು ಹಾಜರಿದ್ದರು.
ಮಧ್ಯಾಹ್ನ 3:00 ಗಂಟೆಗೆ ಜೆಸಿ ಭವನದ ಮುಂಭಾಗದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೆವು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.