1.5 ಲಕ್ಷ ರೂಪಾಯಿ ವ್ಯಕ್ತಿಗೆ ಹಣ ನಗದಿಕರಿಸಿದ್ದಾರೆ ಎಂದು ಹಣ ಕಳೆದುಕೊಂಡ ವ್ಯಕ್ತಿ ಆರೋಪ ಮಾಡಿದ್ದಾರೆ .#avintvcom
1 min read
ಹರಿಹರ :ನಗರದ ಪಿಬಿ ರಸ್ತೆಗೆ ಇರುವ ಪ್ರತಿಷ್ಠಿತ ಎಸ್ ಬಿಐ ಬ್ಯಾಂಕ್ ನವರು ರಾಜು ಎಸ್ ಎಂ ರವರ ಉಳಿತಾಯ ಖಾತೆಯಿಂದ ಒಂದೂವರೆ ಲಕ್ಷ ರೂಪಾಯಿಗಳನ್ನು ಅಪರಿಚಿತ ವ್ಯಕ್ತಿಗೆ ಹಣ ನಗದಿಕರಿಸಿದ್ದಾರೆ ಎಂದು ಹಣ ಕಳೆದುಕೊಂಡ ವ್ಯಕ್ತಿ ಆರೋಪ ಮಾಡಿದ್ದಾರೆ .
ನಗರದ ವಿದ್ಯಾನಗರ ನಿವಾಸಿಯಾದ ರಾಜು ಎಸ್ ಎಂ ಇವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹರಿಹರ ಶಾಖೆಯ ಗ್ರಾಹಕನಾಗಿದ್ದು ದಿನಾಂಕ 9/10/2020 ರಂದು ಅವರ ಖಾತೆಯ ಚೆಕ್ ನಂಬರ್ 740076 ರಲ್ಲಿ ಒಂದೂವರೆ ಲಕ್ಷ ರೂಪಾಯಿಗಳನ್ನು ಯಾರೋ ಅಪರಿಚಿತ ವ್ಯಕ್ತಿ ರಾಜುರವರ ಸಹಿಯನ್ನೇ ಫೊರ್ಜರಿ ಮಾಡಿ ಹಣ ಡ್ರಾ ಮಾಡಿದ್ದಾರೆ .
ಆದರೆ ಬೇರೆ ಯಾವುದೇ ವ್ಯಕ್ತಿ ಬೇರೆಯವರ ಖಾತೆಯಿಂದ ಹಣ ಡ್ರಾ ಮಾಡುವಾಗ ಈ ಮೊತ್ತಕ್ಕೆ ತನ್ನ ಗುರುತಿನ ದಾಖಲೆ ತೋರಿಸಬೇಕು ಹಾಗೂ ಚೆಕ್ ನ ಹಿಂಬದಿಯಲ್ಲಿ ಸಹಿ ಮತ್ತು ಮೊಬೈಲ್ ಸಂಖ್ಯೆ ನಮೂದು ಮಾಡಬೇಕು ಈ ಯಾವುದೇ ಪ್ರಕ್ರಿಯೆ ಮಾಡದೆ ಅಪರಿಚಿತ ವ್ಯಕ್ತಿಗೆ ಬ್ಯಾಂಕಿನವರ ಬೇಜವಾಬ್ದಾರಿಯಿಂದ ಹಣ ಡ್ರಾ ಮಾಡಲಾಗಿದೆ ಎಂದು ಬ್ಯಾಂಕಿನ ವಿರುದ್ಧ ಜಯಕರ್ನಾಟಕ ಸಂಘಟನೆಯ ತಾಲ್ಲೂಕು ಅಧ್ಯಕ್ಷ ಎಸ್ ಗೋವಿಂದ ಹರಿಹಾಯ್ದರು .
ಇದರ ಬಗ್ಗೆ ಬ್ಯಾಂಕಿನ ವ್ಯವಸ್ಥಾಪಕರ ಗಮನಕ್ಕೆ ತಂದಾಗ 1ವಾರದ ಒಳಗೆ ಬಗೆಹರಿಸಿ ಕೊಡುತ್ತೇವೆ ಎಂದು ಹೇಳಿದ್ದರು, ಆದರೂ ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಆದ್ದರಿಂದ ಬ್ಯಾಂಕಿನ ವಿರುದ್ಧ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಇಂದು ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಂದು ಜಯಕರ್ನಾಟಕ ಸಂಘಟನೆಯ ತಾಲ್ಲೂಕು ಅಧ್ಯಕ್ಷ ಎಸ್ ಗೋವಿಂದ ತಹಶೀಲ್ದಾರ ಕೆ ಬಿ ರಾಮಚಂದ್ರಪ್ಪ ಇವರಿಗೆ ಬ್ಯಾಂಕಿನ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಮತ್ತು ಹಣ ಕಳೆದುಕೊಂಡವರಿಗೆ ನ್ಯಾಯ ಒದಗಿಸಿಕೊಡುವಂತೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಜಯ ಕರ್ನಾಟಕ ಸಂಘಟನೆಯ ಕಾರ್ಯಕರ್ತರು ಹಾಜರಿದ್ದರು .