ಪಾವಗಡ ತಾಲೂಕು ಕೊಡಮೊಡಗು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಮಲಕುಂಟೆ #avintvcom
1 min read
ಜನತಾ ದಳ ಬೆಂಬಲಿತ ಗೆದ್ದ ಅಭ್ಯರ್ಥಿಗಳಿಗೆ ಅಭಿನಂದನೆ
ಪಾವಗಡ ತಾಲೂಕು ಕೊಡಮೊಡಗು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಮಲಕುಂಟೆ ,ಕೊಡಮೊಡಗು ಮತ್ತು ಜಾಜೂರಾಯನಹಳ್ಳಿ ಕ್ಷೇತ್ರಗಳಿಂದ ಆಯ್ಕೆಯಾದ ಮಾದವರಾಜು, ತಿಮ್ಮಪ್ಪ, ನರಸಮ್ಮ, ಮೀನಾಕುಮಾರಿ, ಗಂಗಮ್ಮ ಮತ್ತು ನವೀನ್ ಕುಮಾರ್ ರವರುಗಳನ್ನು ಜಿಲ್ಲಾ ಜೆಡಿಎಸ್ ಅಧ್ಯಕ್ಷರಾದ ಆರ್.ಸಿ.ಅಂಜಿನಪ್ಪರವರು ಅಭಿನಂದಿಸಿದರು
ಈ ಸಂದರ್ಭದಲ್ಲಿ ಮಾತನಾಡಿದ ಆರ್ ಸಿ ಅಂಜಿನಪ್ಪ ರವರು ಕೊಡಮೊಡಗು ಗ್ರಾಮ ಪಂಚಾಯಿತಿಯಲ್ಲಿ ನಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಬಹಳ ಶ್ರಮ ಪಟ್ಟು ಗೆದ್ದು ಬಂದಿರುವುದು ನನಗೆ ಬಹಳ ಸಂತೋಷವಾಗಿದೆ, ಪಾರ್ಲಿಮೆಂಟ್ ಚುನಾವಣೆಯಲ್ಲಿ ಗೆದ್ದು ಬರಬಹುದು ಪಂಚಾಯತ್ ಚುನಾವಣೆಯಲ್ಲಿ ಗೆದ್ದು ಬರುವುದು ಬಹಳ ಕಷ್ಟ ಎಂಬ ಮಾತಿದೆ, ಅಂತಹ ಚುನಾವಣೆಯಲ್ಲಿ ತಾವುಗಳು ಜನರ ಆಶೀರ್ವಾದದಿಂದ ಗೆದ್ದು ಬಂದಿದ್ದೀರಿ ತಾವುಗಳು ಜನರ ಪ್ರೀತಿ ವಿಶ್ವಾಸವನ್ನು ಹೀಗೆಯೇ ಐದು ವರ್ಷಗಳ ಕಾಲ ಮುಂದುವರೆಸಿಕೊಂಡು ಹೋಗಬೇಕು ಜನರ ಮತ್ತು ಗ್ರಾಮದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ತಿಳಿಸಿದರು
ಈ ಸಂದರ್ಭದಲ್ಲಿ ಕಡಮಲಕುಂಟೆ ಗ್ರಾಮದ ಮುಖಂಡ ಜಯರಾಮಪ್ಪ ಸೇರಿದಂತೆ ಹಲವಾರು ಗಣ್ಯರು ಕಾರ್ಯಕರ್ತರು ಹಾಜರಿದ್ದರು