ಕಳಸದಲ್ಲಿ ರಂಜಿಸಿದ ಯಕ್ಷಗಾನ…ಶ್ರಿ ದೇವಿ ಮಹಾತ್ಮೆ ಎಂಬ ಪುಣ್ಯ ಕಥಾ ಬಾಗವನ್ನು ಆಡಿ ತೋರಿಸಿದರು. #avintvcom
1 min read
ಕಳಸ ಕಾರ್ಯಕ್ರಮದ ವರದಿ.
ಕಳಸದಲ್ಲಿ ರಂಜಿಸಿದ ಯಕ್ಷಗಾನ……..
ಮೂಡಿಗೆರೆ ತಾಲೂಕಿನ ಕಳಸಾದಲ್ಲಿ ಕರಾವಳಿಯ ಗಂಡು ಕಲೆ ತೊಂಕು ತಿಟ್ಟಿನ ಪ್ರಸಿದ್ಧ ಮೆಳ ಶ್ರಿ ಜ್ನಾನಶಕ್ತಿ ಸುಬ್ರಮಣ್ಯ ಸ್ವಾಮಿ ಕೃಪಾ ಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಪಾವಂಜೆ ಇವರು ಕಾಲಮಿತಿ ಯಕ್ಷಗಾನ ವಾಗಿ ಶ್ರಿ ದೇವಿ ಮಹಾತ್ಮೆ ಎಂಬ ಪುಣ್ಯ ಕಥಾ ಬಾಗವನ್ನು ಆಡಿ ತೋರಿಸಿದರು.
ಮೇಳದ ಸಂಚಾಲಕರಾದ ಯಕ್ಷದೃವ ಸತೀಷ್ ಶೆಟ್ಟಿ ಯವರ ಕನಸಿನ ಕೂಸು ಪಟ್ಲ ಫೌಂಡೆಶನ್ ಇದರ ಕಳಸ ಘಟಕದ ಐದನೆ ವರ್ಷದ ಕಾರ್ಯಕ್ರಮವನ್ನು ಕಳಸ ಘಟಕದ ಗೌರವ ಅಧ್ಯಕ್ಷರಾದ ಟಿ.ಎನ್.ವಿಜೇಂದ್ರ.ಯಕ್ಷಗಾನ ಹಿರಿಯ ಕಲಾವಿದ.ವಹಿಸಿದ್ದರು.
ಯಕ್ಷಗಾನದ ಹಿರಿಯ ಸ್ತ್ರಿವೇಷದಾರಿ ಹಾಗೂ ಪ್ರಸಂಗಕರ್ತ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಎಂ.ಕೆ.ರಮೇಶ್ ಆಚಾರ್ಯ. ಬಡಗು ತಿಟ್ಟಿನ ಹೆಸರಾಂತ ಹಿರಿಯ ಕಲಾವಿದ ಚಂದ್ರಶೇಖರ ಉಡುಪ,
ಮೂಡಿಗೆರೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಗ್ಗಲಮಕ್ಕಿಗಣೇಶ,
ಹೆಸರಾಂತ ಬಾಗವತ ಪಟ್ಲ ಸತೀಶ್ ಶೆಟ್ಟಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಎಂ.ಕೆ.ರಮೇಶ್ ಆಚಾರ್ಯ ಹಾಗು ಚಂದ್ರಶೇಖರ ಉಡುಪರನ್ನು ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.
ಕಳಸ ಪಟ್ಲ ಫೌಂಡೆಶನ್ ಘಟಕದ ಕಾಫ಼ಿ ಬೆಳೆಗಾರರು, ಉದ್ಯಮಿಗಳು,
ಚಲನಚಿತ್ರ ನಿರ್ಮಾಪಕರು ಆದ ರವಿರೈ ಉಪಸ್ತಿತರಿದ್ದರು.