ಅವಿನ್ ಟಿವಿಯ ರಾಜ್ಯದ ಸ್ಥಾನಿಕ ಸಂಪಾದಕರಾಗಿ ಆಯ್ಕೆಯಾದ ಮಗ್ಗಲಮಕ್ಕಿ ಗಣೇಶ್ #avintvcom
1 min read
ಅವಿನ್ ಟಿವಿಯ ರಾಜ್ಯದ ಸ್ಥಾನಿಕ ಸಂಪಾದಕರಾಗಿ ಆಯ್ಕೆಯಾದ ಮಗ್ಗಲಮಕ್ಕಿ ಗಣೇಶ್ ಅವರಿಗೆ ಅವಿನ್ ಟಿವಿಯ ಮುಖ್ಯಸ್ಥರಾದ ಮನೋಜ್ ಕೆಂಬತ್ ಮಕ್ಕಿ ಅವರು ಅವಿನ್ ಟಿವಿಯ ಲೋಗೋ ಮತ್ತು ನೇಮಕ ಪತ್ರವನ್ನು ಹಸ್ತಾಂತರಿಸಿದರು. ಮಗ್ಗಲಮಕ್ಕಿಗಣೇಶ ವಿದ್ಯಾರ್ಥಿ ಜೀವನದಲ್ಲಿ ನಾಯಕತ್ವದ ಗುಣವನ್ನು ಬೆಳೆಸಿಕೊಂಡು ಮೂಡಿಗೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಎರಡು ವರ್ಷಗಳ ಕಾಲ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ, ಕರ್ನಾಟಕ ರಾಜ್ಯ ರೈತ ಸಂಘದಲ್ಲಿ ಹೋರಾಟ ಮಾಡಿ ಸೆರಮನೆ ವಾಸ ಅನುಭವವಿಸಿದ್ದಾರೆ. ಮೂಡಿಗೆರೆ ಜೆಸಿಐ ನ ಅಧ್ಯಕ್ಷರಾಗಿ, ವಲಯ ನಿರ್ದೆಶಕರಾಗಿ,ಸೇವೆ ಸಲ್ಲಿಸಿದ್ದಾರೆ.ಇಗ ಜೆಸಿಐ ನ ವಲಯ ತರಬೇತುದಾರರಾಗಿದ್ದಾರೆ. 2002.ರಲ್ಲಿ ಶಾಂತಿ ವ್ಯಸನ ಮುಕ್ತಿ ಕೇಂದ್ರ ಸ್ಥಾಪಿಸಿ ಸಾವಿರಾರು ಮದ್ಯ ವ್ಯಸನಿಗಳಿಗೆ ಮದ್ಯಪಾನ ವ್ಯಸನ ತ್ಯಜಿಸಲು ಸಹಾಯಕವಾಗಿದ್ದಾರೆ. 2008.ರಲ್ಲಿ ಆಸರೆ ಅನಾಥ ಮಕ್ಕಳ ಆಶ್ರಯ ಸ್ಥಾಪಿಸಿ 500.ರಕ್ಕೂ ಹೆಚ್ಚು ಮಕ್ಕಳಿಗೆ ವಿದ್ಯಬ್ಯಾಸ ನೀಡಿ ಸಮಾಜದ ಮುಖ್ಯ ವಾಹಿನಿಗೆ ತಂದಿದ್ದಾರೆ. 2012.ರಲ್ಲಿ ಮಾನಸಿಕ ರೋಗಿಗಳಿಗೆ ಹಗಲು ಆರೈಕ ಕೆಂದ್ರವನ್ನು ಸ್ಥಾಪಿಸಿ ಜಿಲ್ಲೆಯಲ್ಲಿ 300.ಕ್ಕೂ ಅದಿಕ ಮಾನಸಿಕವಾಗಿ ನೊಂದವರಿಗೆ ಬೆಳಕು ತೋರಿಸಿದ್ದಾರೆ. ಹಾಲಿ ತಾ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಅಧ್ಯಕ್ಷರಾಗಿರುತ್ತಾರೆ. ಇಂತಹ ಸಮಾಜ ಮುಖಿ ಕೆಲಸ ಮಾಡಿ ನಾಯಕತ್ವ ಬೆಳೆಸಿಕೊಂಡಿರುವ ಮಗ್ಗಲಮಕ್ಕಿಗಣೇಶರವರು ನಮ್ಮ ಅವಿನ್ ಟಿವಿ ಚಾನಲ್ಲ್ ನ ಸ್ಥಾನಿಕ ಸಂಪಾದಕರಾಗಿರುವುದು ನಮ್ಮ ಹೆಮ್ಮೆ ಎಂದು ಮುಖ್ಯಸ್ಥ ಮನೊಜ್ ಕೆಂಬತ್ ಮಕ್ಕಿ ತಿಳಿಸಿದರು. ಸಮಾಜ ಸೇವಕ ಬಣಕಲ್ ಅರಿಫ಼್ ಜೊತೆಯಲ್ಲಿದ್ದರು. ಕೊಟ್ಟಿಗೆಹಾರ ಬಾಗದ ಪತ್ರಕರ್ತರು ಬಾಗವಹಿಸಿದ್ದರು.