ನಿಪ್ಪಾಣಿ ಮತಕ್ಷೇತ್ರದ ಹಂಚಿನಾಳದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ನಿರ್ಮಾಣ #avintvcom
1 min read
ಹಂಚಿನಾಳ
ಭವ್ಯ ಭಾರತದ ಸತ್ರ್ಪಜೆಗಳಿಗಾಗಿ ವಿದ್ಯಾದೇಗಲ ನಿರ್ಮಾಣ
ನಿಪ್ಪಾಣಿ ಮತಕ್ಷೇತ್ರದ ಹಂಚಿನಾಳದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿರುವ ಹಿನ್ನಲೆ ಸ್ಥಳಕ್ಕೆ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಹಾಗೂ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರು ಭೇಟಿ ನೀಡಿ ಅಲ್ಲಿನ ಕಾಮಗಾರಿಯ ಗುಣಮಟ್ಟ, ಮೂಲಸೌಕರ್ಯಗಳ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಸುಮಾರು 17 ಕೋಟಿ ರೂ. ವೆಚ್ಚದಲ್ಲಿ ಈ ವಸತಿ ಶಾಲೆ ನಿರ್ಮಾಣವಾಗಿದ್ದು, 1 ಶಾಲಾ ಕೊಠಡಿ, 2 ವಸತಿ ಗೃಹಗಳು, 1 ಕ್ಯಾಂಟೀನ್, 3 ಬೋಧಕೇತರ ವಸತಿ ನಿಲಯಗಳು ಹಾಗೂ 1 ಸಭಾಭವನ ನಿರ್ಮಾಣವಾಗಿದೆ.
ಭವ್ಯ ಭಾರತದ ಸತ್ಪ್ರಜೆಗಳಾಗಲಿರುವ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ವಿದ್ಯಾದೇಗುಲದಲ್ಲಿ ಮೌಲ್ಯಯುತ ಶಿಕ್ಷಣದ ಜತೆಗೆ ಗುಣಮಟ್ಟದ ಮೂಲಸೌಕರ್ಯ ಒದಗಿಸುವುದು ನಮ್ಮ ಜವಾಬ್ದಾರಿ. ಹೀಗಾಗಿ ಕ್ಷೇತ್ರದಲ್ಲಿ ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗೆ ನಮ್ಮ ಶ್ರಮ ಅವಿರತ. ಪ್ರಸ್ತುತ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಕಾಮಗಾರಿ ಸಂಪೂರ್ಣವಾಗಿದೆ. ಇದೇ ತಿಂಗಳೊಳಗಾಗಿ ಉದ್ಘಾಟನೆ ಮಾಡುವ ಮೂಲಕ ವಿದ್ಯಾರ್ಥಿಗಳ ಮೌಲ್ಯಯುತ ಶಿಕ್ಷಣಕ್ಕೆ ಅನುವು ಮಾಡಿಕೊಡಲಾಗುವುದು ಎಂದು ಹೇಳಿದರು.
भव्य भारताच्या विद्यार्थ्यांसाठी विद्यामंदिर निर्माण.
निपाणी मतदारसंघातील हंचिनाळ येथे कित्तूर राणी चेन्नम्मा वसतीशाळेच्या बांधकाम पूर्ण झालेल्या पार्श्वभूमीवर निवास शाळेला राज्य महिला व बालविकास विभाग,अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी(वहिनी) आणि चिक्कोडी लोकसभेचे खासदार माननीय श्री अण्णासाहेब जोल्ले,जी यांनी भेट देऊन पायाभूत सुविधांच्या गुणवत्तेची पाहणी केली. सुमारे 17 कोटी रुपयांचा निधीतून 1 शाळा इमारत, 2 वसतिगृहे, 1 कँटीन, 3 कर्मचारी निवासस्थाने आणि 1 व्यासपिठ निर्माण करण्यात आली आहेत.
महान भारतातील विद्यार्थ्यांच्या भविष्य निर्माण करणाऱ्या विध्यामंदिरामध्ये मौल्यवान शिक्षणासह दर्जेदार मूलभूत सुविधा पुरविणे ही आपली जबाबदारी आहे. अशाप्रकारे मतदारसंघात शैक्षणिक क्षेत्राच्या विकास करण्याचा प्रयत्न आहे. सध्या कित्तूर राणी चेन्नम्मा निवासी शाळेचे काम पूर्ण झाले आहे. याच महिन्याभरात उद्घाटन करून विद्यार्थ्यांना मौल्यवान शिक्षण दिले जाईल असे सांगितले.