ಕೋವಿಡ್ ಲಾಕ್ ಡೌನ್ ಬಳಿಕ ರಾಜ್ಯಾದ್ಯಂತ ಇಂದು ವಿದ್ಯಾಗಮನ ಆರಂಭವಾಗಿದೆ. #avintvcom
1 min read
ಕಲ್ಯಾಣ ಕರ್ನಾಟಕದ ಗಡಿನಾಡು ಬೀದರ ಜಿಲ್ಲೆಯಲ್ಲಿ ಸರ್ಕಾರದ ನಿಯಮದಂತೆ ಕೋವಿಡ್ ಲಾಕ್ ಡೌನ್ ಬಳಿಕ ರಾಜ್ಯಾದ್ಯಂತ ಇಂದು ವಿದ್ಯಾಗಮನ ಆರಂಭವಾಗಿದೆ. ಗಡಿನಾಡು ಬೀದರ್ ಜಿಲ್ಲೆಯ ಮೈಲೂರಿನ ಸರ್ಕಾರಿ ಪ್ರಾಥಮಿಕ ಶಾಲೆಗೆ ಇಂದು ವಿದ್ಯಾರ್ಥಿಗಳು ಆಗಮಿಸಿದರು.. ಶಾಲೆಯ ಮುಖ್ಯ ಗುರುಗಳು ಸೇರಿದಂತೆ ಶಿಕ್ಷಕ ವೃಂದದವರು ಚಪ್ಪಾಳೆ ಬಾರಿಸುವ ಮೂಲಕ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ತುಂಬು ಹೃದಯದಿಂದ ಬರಮಾಡಿಕೊಂಡರು.. ವಿದ್ಯಾರ್ಥಿಗಳು ಖುಷಿ ಖುಷಿಯಂದ ಶಾಲೆಗೆ ಅಗಮಿಸಿದರು.ದಿನ ಕಳೆದಂತೆ ಪರಿಕ್ಷೆಗಳು ಹತ್ತಿರವಾಗುತ್ತಿದ್ದು ಪರಿಕ್ಷೇಯಲ್ಲಿ ಎನು ಬರಿಯಬೇಕು ಅನ್ನೊದು ಭಯ ಕಾಡುತ್ತಿತ್ತು,ಈಗ ಸರ್ಕಾರ ವಿದ್ಯಾಗಮನ ಮತ್ತು ಶಾಲೆ ಆರಂಭಮಾಡಿದ್ದಕ್ಕೆ ನಮಗೆ ಇದ್ದ ಭಯ ದೂರವಾಗಿದೆ.
ಪರಿಕ್ಷೇಯಲ್ಲಿ ಉತ್ತಮ ಅಂಕಗಳಿಸುವ ಭರವಸೆ ಇದೆ ಎಂದು ವಿದ್ಯಾರ್ಥಿನಿಯೊಬ್ಬಳು ತಮ್ಮ ಖುಷಿ ಹಂಚಿಕೊಂಡರು. ಇನ್ನು ಸ್ಯಾನಿಟೈಸರ್ ಸಹ ಶಾಲೆಯಲ್ಲಿ ಮಾಡಿದ್ದು ಮಾಸ್ಕ್ ಕಡ್ಡಾಯವಾಗಿ ಧರಿಸಿ ಕೋವಿಡೊ ನಿಯಮಾವಳಿಗಳನ್ನ ಪಾಲಿಸುತ್ತಾ ಶಾಲೆಗೆ ಆಗಮಿಸುತ್ತೆವೆ ಎಂದು ಹೇಳಿದರು..