ಸರ್ಕಾರದ ನಿಯಮಾವಳಿಗಳ ಪ್ರಕಾರ ವಿದ್ಯಾ ಗಮ ಕಾರ್ಯಕ್ರಮವನ್ನು ಪ್ರಾರಂಭಿಸಿದರು #avintvcom
1 min read
ವಿದ್ಯಾಗಮ ಕಾರ್ಯಕ್ರಮ ಪ್ರಾರಂಭೋತ್ಸವ .
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಪರಮಾನಂದವಾಡಿ
ಗ್ರಾಮದಲ್ಲಿ ಶುಕ್ರವಾರ ದಿನ ೧/೧/೨೦೨೧ ರಂದು ಸರಕಾರದ ಸುತ್ತೋಲೆಗಳ ಪ್ರಕಾರ ಹಾಗೂ ಸರ್ಕಾರದ ನಿಯಮಾವಳಿಗಳ ಪ್ರಕಾರ ವಿದ್ಯಾ ಗಮ ಕಾರ್ಯಕ್ರಮವನ್ನು ಪ್ರಾರಂಭಿಸಿದರು .ಶಾಲೆಯ ಕೋಣೆಗಳನ್ನು ತೊಳೆಯುವುದರೊಂದಿಗೆ ಸ್ಯಾನಿಟೈಸರ್ ಮಾಡಿಸಿ ಪ್ರತಿ ಒಬ್ಬ ಶಿಕ್ಷಕರಿಗೆ ಹದಿನೈದು ವಿದ್ಯಾರ್ಥಿಗಳಂತೆ ಕ್ಲಾಸುಗಳನ್ನೂ ವಿಂಗಡಿಸಿಕೊಂಡು ತರಗತಿಗಳನ್ನಾಗಿ ಮಾಡಿ ಬೋಧನೆಯನ್ನು ಪ್ರಾರಂಭಿಸಿದರು .
ಎಸ್ ಡಿಎಂಸಿ ಅಧ್ಯಕ್ಷರಾದ ಶ್ರೀ ಸುರೇಶ್ ಜಕಾತೆ . ರವರು ಮಾತನಾಡಿ ವಿದ್ಯಾರ್ಥಿಗಳ ಮುಂಜಾಗ್ರತಾ ಕ್ರಮಗಳ ಬಗ್ಗೆ ತಿಳಿಸಿದರು .ಸ್ಯಾನಿಟೈಸರ್,
ಮಾಸ್ಕ್ ,ಥರ್ಮಲ್ ಸ್ಕ್ರೀನಿಂಗ್ ಮತ್ತು ವಿದ್ಯಾರ್ಥಿಗಳ ಮಧ್ಯೆ ಅಂತರ ಕುರಿತು ವಿದ್ಯಾರ್ಥಿಗಳಿಗೆ ಮುಂಜಾಗ್ರತಾ ಕ್ರಮಗಳನ್ನು ತಿಳಿಸಿ ಹೇಳಿದರು.
ಈ ಕಾರ್ಯಕ್ರಮದಲ್ಲಿ
ಶ್ರೀ ಪಿ ಎಸ್ ಕಾಂಬ್ಳೆ ಸಹಶಿಕ್ಷಕರು .
ಶ್ರೀ ಆರ್ ಎಂ ಕಾಂಬ್ಳೆ ಮುಖ್ಯ ಉಪಾಧ್ಯಯರು .
ಶ್ರೀ ಎಚ್ ಎನ್ ಯಲ್ಲಟ್ಟಿ
ದೈಹಿಕ ಶಿಕ್ಷಕರು .ಶ್ರೀಮತಿ ಜ್ಯೋತಿ ವಿಜ್ಞಾನ ಶಿಕ್ಷಕಿ .ಶ್ರೀ ಜಪ್ರುಲ್ ಮುಲ್ಲಾ ಅತಿಥಿ ಶಿಕ್ಷಕರು .ಕುಮಾರಿ ಪೂನಂ ಶೇಡಬಾಳೆ ಅತಿಥಿ ಶಿಕ್ಷಕರು ಉಪಸ್ಥಿತರಿದ್ದರು .
ವರದಿ ಪೀರು ನಂದೇಶ್ವರ್