लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
23/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಸಂಸ್ಥಾನ ಕಾಲದ ಬೇಡಿಕೆಗೆ ಮತ್ತೇ ಭುಗಿಲೆದ್ದ ಜನ ರಾಜ್ಯದ ೩೧ನೇ ರಾಜ್ಯ ಸಚಿವ ಸಂಪುಟದಲ್ಲಿ ಆದೇಶಿಸಿದೆ. #avintvcom

1 min read
Featured Video Play Icon

ಜಮಖಂಡಿ ಜಿಲ್ಲೆಗಾಗಿ ಒಕ್ಕೊರಲಿನ ಧ್ವನಿ.
ಸಂಸ್ಥಾನ ಕಾಲದ ಬೇಡಿಕೆಗೆ ಇದೀಗ ಮತ್ತೇ ಭುಗಿಲೆದ್ದ ಜನ
ರಾಜ್ಯದ ೩೧ನೇ ಜಿಲ್ಲೆ ವಿಜಯನಗರವನ್ನಾಗಿ ರಾಜ್ಯ ಸಚಿವ ಸಂಪುಟದಲ್ಲಿ ಆದೇಶಿಸಿದೆ. ಆದರೆ ಜಮಖಂಡಿ ಜಿಲ್ಲೆಯಾಗಬೇಕೆನ್ನುವದು ಪಟವರ್ಧನ ಸಂಸ್ಥಾನ ಕಾಲದ ಬೇಡಿಕೆ. ರಾಜ್ಯದಲ್ಲಿ ಹೊಸ ಜಿಲ್ಲೆಗಾಗಿ ಕೂಗು ಎದ್ದಾಗ ಜಮಖಂಡಿ ಹೊಸ ಜಿಲ್ಲೆ ಕೂಗು ಕೇಳಿ ಬರುತ್ತದೆ. ಆದರೆ ಬೇಡಿಕೆ ಹಲವು ದಶಕದ್ದಾದರೂ ಇದೀಗ ಹೊಸ ಜಿಲ್ಲೆ ರಚನೆಯಾಗಲು ರಬಕವಿ-ಬನಹಟ್ಟಿ, ಮಹಾಲಿಂಗಪೂರ, ತೇರದಾಳ ಭಾಗದಿಂದ ಒಕ್ಕೊರಲಿನ ಕೂಗಿಗೆ ಮಹತ್ವದ ಸಭೆಯೊಂದು ಕಾರಣವಾಯಿತು.
ಬನಹಟ್ಟಿಯ ಲೋಕೋಪಯೋಗಿ ವಿಶ್ರಾಂತಿ ಗೃಹದಲ್ಲಿ ನೂರಾರು ಪ್ರಮುಖ ಮುಖಂಡರ ಮಹತ್ವದ ಸಭೆಯ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಸಿದ್ಧರಾಜ ಪೂಜಾರಿ ಮಾತನಾಡಿ, ಕೇವಲ ಮನವಿ ಸಲ್ಲಿಸುವದರಿಂದ ಹೊಸ ಜಿಲ್ಲೆ ಬೇಡಿಕೆ ಈಡೇರದು, ಇದು ಎಲ್ಲರಿಗೂ ಗೊತ್ತಿರುವ ಸಂಗತಿ. ಹಲವು ದಶಕಗಳಿಂದ ಮನವಿ, ಬೇಡಿಕೆ ಸಲ್ಲಿಸುವದರಲ್ಲಿಯೇ ಕಾಲಹರಣವಾಗಿದೆ ಹೊಸ ಜಿಲ್ಲೆಯ ಬೇಡಿಕೆಯೊಂದಿಗೆ ರಾಜಕೀಯ ಒತ್ತಡ ಬಹಳ ಮುಖ್ಯ. ರಾಜಕೀಯ ಇಚ್ಛಾಶಕ್ತಿಯೊಂದಿಗೆ ಮುಖ್ಯಮಂತ್ರಿಗಳ ಮೇಲೆ ಒತ್ತಡ ತರುವಲ್ಲಿ ನಾವೆಲ್ಲ ಪಕ್ಷಾತೀತವಾಗಿ ಸನ್ನದ್ಧರಾಗಬೇಕೆಂದು ಹಿರಿಯ ಹಿತಿ ಸಿದ್ಧರಾಜ ಪೂಜಾರಿ ಹೇಳಿದರು.
೧೯೯೭ ರಲ್ಲಿ ಬಾಗಲಕೋಟೆ, ವಿಜಯಪುರ ಅವಿಭಿಜಿತ ಜಿಲ್ಲೆ ಜಿಲ್ಲೆ ಮಾಡುವ ವೇಳೆ ಜಮಖಂಡಿ ಜಿಲ್ಲೆಯ ಕೂಗು ಬಲವಾಗಿತ್ತು. ವಿಜಯಪುರದಿಂದ ವಿಭಜನೆಗೊಂಡು ಬಾಗಲಕೋಟೆ ನೂತನ ಜಿಲ್ಲೆಯಾಯಿತು. ಅದೇ ವರ್ಷ ಅಸ್ತಿತ್ವಕ್ಕೆ ಬಂದ ಜಮಖಂಡಿ ಜಿಲ್ಲಾ ಹೋರಾಟ ಸಮಿತಿಯ ಅಧ್ಯಕ್ಷರಾಗಿ ನ್ಯಾಯವಾದಿ ಡಾ. ತಾತಾಸಾಹೇಬ ಬಾಂಗಿ ಓಲೇಮಠದ ಚಂದ್ರಶೇಖರ ಸ್ವಾಮೀಜಿ ಸೇರಿದಂತೆ ಅಂದಿನ ದಿ.ಶಾಸಕ ರಾಮಣ್ಣ ಕಲೂತಿ, ಮಾಜಿ ಕೇಂದ್ರ ಸಚಿವ ದಿ. ಸಿದ್ದು ನ್ಯಾಮಗೌಡ, ತೇರದಾಳ ಶಾಸಕ ಸಿದ್ದು ಸವದಿ, ಮಾಜಿ ಶಾಸಕರಾದ ಜಿ.ಎಚ್. ನ್ಯಾಮಗೌಡ, ಶ್ರೀಕಾಂತ ಕುಲಕರ್ಣಿ ಸೇರಿದಂತೆ ಅನೇಕ ರಾಜಕಾರಣಗಳು ಹೋರಾಟಕ್ಕೆ ಸಾಥ್ ನೀಡಿದ್ದರು.
ಇದೀಗ ಮತ್ತೊಮ್ಮೆ ಜಮಖಂಡಿಯನ್ನು ಜಿಲ್ಲಾ ಮಾಡುವಲ್ಲಿ ಕಾಲ ಪಕ್ವವಾಗಿದ್ದು, ಈ ಕುರಿತು ಹೋರಾಟ ನಿರಂತರವಾಗಿದೆ ಎಂದು ಬಿಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಭೀಮಶಿ ಮಗದುಮ್ ಹೇಳಿದರು.
ಹಿರಿಯ ಸಾಹಿತಿ ಮಲ್ಲಿಕಾರ್ಜುನ ಹುಲಗಬಾಳಿ, ಜಿ.ಎಸ್. ವಡಗಾಂವಿ, ಪ್ರೊ. ಬಸವರಾಜ ಕೊಣ್ಣೂರ, ಪ್ರೊ. ಎಂ.ಎಸ್. ಬದಾಮಿ, ಡಾ. ಎಂ.ಎಸ್. ದಾನಿಗೊಂಡ, ರಾಮಣ್ಣ ಹುಲಕುಂದ, ಮಹಾಲಿಂಗಪೂರದ ಮನೋಹರ ಶಿರೋಳ ಮಾತನಾಡಿದರು.
ಸಭೆಯಲ್ಲಿ ಸಿದ್ದನಗೌಡ ಪಾಟೀಲ, ಮಲ್ಲಣ್ಣ ಕಕಮರಿ, ಶಂಕರ ಜುಂಜಪ್ಪನವರ, ಶಂಕರ ಜಾಲಿಗಿಡದ, ಶ್ರೀಶೈಲ ಬೀಳಗಿ, ಧರೆಪ್ಪ ಉಳ್ಳಾಗಡ್ಡಿ, ಶಿವಾನಂದ ಬಾಗಲಕೋಟಮಠ, ನೀಲಕಂಠ ಮುತ್ತೂರ, ಬಸವರಾಜ ತೆಗ್ಗಿ, ಶಂಕರ ಸೊರಗಾಂವಿ, ಈಶ್ವರ ಕಾಡದೇವರ, ಮಹಾದೇವ ದೂಪದಾಳ, ಬಸವರಾಜ ದಲಾಲ, ಈಶ್ವರ ಕಾಡದೇವರ, ಮಲ್ಲಿಕಾರ್ಜುನ ಬಾಣಕಾರ, ಈಶ್ವರ ನಾಗರಾಳ, ರಾಜು ಭದ್ರನ್ನವರ, ಸಂಜು ತೆಗ್ಗಿ ತೇರದಾಳ, ಮಹಾಲಿಂಗಪುರ ಹಾಗೂ ರಬಕವಿ-ಬನಹಟ್ಟಿ ತಾಲೂಕಿನ ಅನೇಕ ಹಿರಿಯರು ಉಪಸ್ಥಿತರಿದ್ದರು.
ವರದಿ:

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author