ಸಂಸ್ಥಾನ ಕಾಲದ ಬೇಡಿಕೆಗೆ ಮತ್ತೇ ಭುಗಿಲೆದ್ದ ಜನ ರಾಜ್ಯದ ೩೧ನೇ ರಾಜ್ಯ ಸಚಿವ ಸಂಪುಟದಲ್ಲಿ ಆದೇಶಿಸಿದೆ. #avintvcom
1 min read
ಜಮಖಂಡಿ ಜಿಲ್ಲೆಗಾಗಿ ಒಕ್ಕೊರಲಿನ ಧ್ವನಿ.
ಸಂಸ್ಥಾನ ಕಾಲದ ಬೇಡಿಕೆಗೆ ಇದೀಗ ಮತ್ತೇ ಭುಗಿಲೆದ್ದ ಜನ
ರಾಜ್ಯದ ೩೧ನೇ ಜಿಲ್ಲೆ ವಿಜಯನಗರವನ್ನಾಗಿ ರಾಜ್ಯ ಸಚಿವ ಸಂಪುಟದಲ್ಲಿ ಆದೇಶಿಸಿದೆ. ಆದರೆ ಜಮಖಂಡಿ ಜಿಲ್ಲೆಯಾಗಬೇಕೆನ್ನುವದು ಪಟವರ್ಧನ ಸಂಸ್ಥಾನ ಕಾಲದ ಬೇಡಿಕೆ. ರಾಜ್ಯದಲ್ಲಿ ಹೊಸ ಜಿಲ್ಲೆಗಾಗಿ ಕೂಗು ಎದ್ದಾಗ ಜಮಖಂಡಿ ಹೊಸ ಜಿಲ್ಲೆ ಕೂಗು ಕೇಳಿ ಬರುತ್ತದೆ. ಆದರೆ ಬೇಡಿಕೆ ಹಲವು ದಶಕದ್ದಾದರೂ ಇದೀಗ ಹೊಸ ಜಿಲ್ಲೆ ರಚನೆಯಾಗಲು ರಬಕವಿ-ಬನಹಟ್ಟಿ, ಮಹಾಲಿಂಗಪೂರ, ತೇರದಾಳ ಭಾಗದಿಂದ ಒಕ್ಕೊರಲಿನ ಕೂಗಿಗೆ ಮಹತ್ವದ ಸಭೆಯೊಂದು ಕಾರಣವಾಯಿತು.
ಬನಹಟ್ಟಿಯ ಲೋಕೋಪಯೋಗಿ ವಿಶ್ರಾಂತಿ ಗೃಹದಲ್ಲಿ ನೂರಾರು ಪ್ರಮುಖ ಮುಖಂಡರ ಮಹತ್ವದ ಸಭೆಯ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಸಿದ್ಧರಾಜ ಪೂಜಾರಿ ಮಾತನಾಡಿ, ಕೇವಲ ಮನವಿ ಸಲ್ಲಿಸುವದರಿಂದ ಹೊಸ ಜಿಲ್ಲೆ ಬೇಡಿಕೆ ಈಡೇರದು, ಇದು ಎಲ್ಲರಿಗೂ ಗೊತ್ತಿರುವ ಸಂಗತಿ. ಹಲವು ದಶಕಗಳಿಂದ ಮನವಿ, ಬೇಡಿಕೆ ಸಲ್ಲಿಸುವದರಲ್ಲಿಯೇ ಕಾಲಹರಣವಾಗಿದೆ ಹೊಸ ಜಿಲ್ಲೆಯ ಬೇಡಿಕೆಯೊಂದಿಗೆ ರಾಜಕೀಯ ಒತ್ತಡ ಬಹಳ ಮುಖ್ಯ. ರಾಜಕೀಯ ಇಚ್ಛಾಶಕ್ತಿಯೊಂದಿಗೆ ಮುಖ್ಯಮಂತ್ರಿಗಳ ಮೇಲೆ ಒತ್ತಡ ತರುವಲ್ಲಿ ನಾವೆಲ್ಲ ಪಕ್ಷಾತೀತವಾಗಿ ಸನ್ನದ್ಧರಾಗಬೇಕೆಂದು ಹಿರಿಯ ಹಿತಿ ಸಿದ್ಧರಾಜ ಪೂಜಾರಿ ಹೇಳಿದರು.
೧೯೯೭ ರಲ್ಲಿ ಬಾಗಲಕೋಟೆ, ವಿಜಯಪುರ ಅವಿಭಿಜಿತ ಜಿಲ್ಲೆ ಜಿಲ್ಲೆ ಮಾಡುವ ವೇಳೆ ಜಮಖಂಡಿ ಜಿಲ್ಲೆಯ ಕೂಗು ಬಲವಾಗಿತ್ತು. ವಿಜಯಪುರದಿಂದ ವಿಭಜನೆಗೊಂಡು ಬಾಗಲಕೋಟೆ ನೂತನ ಜಿಲ್ಲೆಯಾಯಿತು. ಅದೇ ವರ್ಷ ಅಸ್ತಿತ್ವಕ್ಕೆ ಬಂದ ಜಮಖಂಡಿ ಜಿಲ್ಲಾ ಹೋರಾಟ ಸಮಿತಿಯ ಅಧ್ಯಕ್ಷರಾಗಿ ನ್ಯಾಯವಾದಿ ಡಾ. ತಾತಾಸಾಹೇಬ ಬಾಂಗಿ ಓಲೇಮಠದ ಚಂದ್ರಶೇಖರ ಸ್ವಾಮೀಜಿ ಸೇರಿದಂತೆ ಅಂದಿನ ದಿ.ಶಾಸಕ ರಾಮಣ್ಣ ಕಲೂತಿ, ಮಾಜಿ ಕೇಂದ್ರ ಸಚಿವ ದಿ. ಸಿದ್ದು ನ್ಯಾಮಗೌಡ, ತೇರದಾಳ ಶಾಸಕ ಸಿದ್ದು ಸವದಿ, ಮಾಜಿ ಶಾಸಕರಾದ ಜಿ.ಎಚ್. ನ್ಯಾಮಗೌಡ, ಶ್ರೀಕಾಂತ ಕುಲಕರ್ಣಿ ಸೇರಿದಂತೆ ಅನೇಕ ರಾಜಕಾರಣಗಳು ಹೋರಾಟಕ್ಕೆ ಸಾಥ್ ನೀಡಿದ್ದರು.
ಇದೀಗ ಮತ್ತೊಮ್ಮೆ ಜಮಖಂಡಿಯನ್ನು ಜಿಲ್ಲಾ ಮಾಡುವಲ್ಲಿ ಕಾಲ ಪಕ್ವವಾಗಿದ್ದು, ಈ ಕುರಿತು ಹೋರಾಟ ನಿರಂತರವಾಗಿದೆ ಎಂದು ಬಿಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಭೀಮಶಿ ಮಗದುಮ್ ಹೇಳಿದರು.
ಹಿರಿಯ ಸಾಹಿತಿ ಮಲ್ಲಿಕಾರ್ಜುನ ಹುಲಗಬಾಳಿ, ಜಿ.ಎಸ್. ವಡಗಾಂವಿ, ಪ್ರೊ. ಬಸವರಾಜ ಕೊಣ್ಣೂರ, ಪ್ರೊ. ಎಂ.ಎಸ್. ಬದಾಮಿ, ಡಾ. ಎಂ.ಎಸ್. ದಾನಿಗೊಂಡ, ರಾಮಣ್ಣ ಹುಲಕುಂದ, ಮಹಾಲಿಂಗಪೂರದ ಮನೋಹರ ಶಿರೋಳ ಮಾತನಾಡಿದರು.
ಸಭೆಯಲ್ಲಿ ಸಿದ್ದನಗೌಡ ಪಾಟೀಲ, ಮಲ್ಲಣ್ಣ ಕಕಮರಿ, ಶಂಕರ ಜುಂಜಪ್ಪನವರ, ಶಂಕರ ಜಾಲಿಗಿಡದ, ಶ್ರೀಶೈಲ ಬೀಳಗಿ, ಧರೆಪ್ಪ ಉಳ್ಳಾಗಡ್ಡಿ, ಶಿವಾನಂದ ಬಾಗಲಕೋಟಮಠ, ನೀಲಕಂಠ ಮುತ್ತೂರ, ಬಸವರಾಜ ತೆಗ್ಗಿ, ಶಂಕರ ಸೊರಗಾಂವಿ, ಈಶ್ವರ ಕಾಡದೇವರ, ಮಹಾದೇವ ದೂಪದಾಳ, ಬಸವರಾಜ ದಲಾಲ, ಈಶ್ವರ ಕಾಡದೇವರ, ಮಲ್ಲಿಕಾರ್ಜುನ ಬಾಣಕಾರ, ಈಶ್ವರ ನಾಗರಾಳ, ರಾಜು ಭದ್ರನ್ನವರ, ಸಂಜು ತೆಗ್ಗಿ ತೇರದಾಳ, ಮಹಾಲಿಂಗಪುರ ಹಾಗೂ ರಬಕವಿ-ಬನಹಟ್ಟಿ ತಾಲೂಕಿನ ಅನೇಕ ಹಿರಿಯರು ಉಪಸ್ಥಿತರಿದ್ದರು.
ವರದಿ: