ಸಾಹಸ ಸಿಂಹ ಡಾ.ವಿಷ್ಣುವರ್ಧನ್ ರವರ ಪುತ್ಥಳಿಯನ್ನು (ಕಿಡಿಗೇಡಿಗಳು ಭಗ್ನಗೊಳಿಸಿ ರುವುದನ್ನು ಖಂಡಿಸಿ) “ಕನ್ನಡ ಕ್ರಾಂತಿದಳ”, ವತಿಯಿಂದ #ಪ್ರತಿಭಟನೆಯನ್ನು
1 min read
“ಬೆಂಗಳೂರಿನ ಮಾಗಡಿ ರಸ್ತೆ ಬಳಿ ನಿರ್ಮಿಸಲಾಗಿದ್ದ” ಮೈಸೂರು ರತ್ನ , ಸಾಹಸ ಸಿಂಹ ಡಾ.ವಿಷ್ಣುವರ್ಧನ್ ರವರ ಪುತ್ಥಳಿಯನ್ನು (ಕಿಡಿಗೇಡಿಗಳು ಭಗ್ನಗೊಳಿಸಿ ರುವುದನ್ನು ಖಂಡಿಸಿ) “ಕನ್ನಡ ಕ್ರಾಂತಿದಳ”, “ವಿಷ್ಣು ಅಭಿಮಾನಿಗಳ ಬಳಗ” ಮತ್ತು “ಕನ್ನಡ ಸೇನೆ” ವತಿಯಿಂದ #ಪ್ರತಿಭಟನೆಯನ್ನು# “ಮೈಸೂರು ನಗರದ ಅಗ್ರಹಾರ ವೃತ್ತದಲ್ಲಿ” •ಕನ್ನಡ ಕ್ರಾಂತಿದಳ• “ಅಧ್ಯಕ್ಷರಾದ ಸನ್ಮಾನ್ಯ ಶ್ರೀ ತೇಜಸ್ವಿ ಕುಮಾರ್ ಪಾಟೀಲ್” ರವರ ‘ನೇತೃತ್ವದಲ್ಲಿ’ “ಪ್ರತಿಭಟನೆ” ‘ಹಮ್ಮಿ ಕೊಳ್ಳಲಾಗಿತ್ತು’. ಈ ಸಂದರ್ಭದಲ್ಲಿ:- ಮಾತನಾಡಿದ ತೇಜಸ್ವಿ ಕುಮಾರ್ ಪಾಟೀಲ್ ರವರು ವಿಷ್ಣುವರ್ಧನ್ ಪುತ್ಥಳಿಯನ್ನು ಅದೇ ಜಾಗದಲ್ಲಿ ನಿರ್ಮಿಸಿ ಮತ್ತು ಭಗ್ನಗೊ ಗಳಿಸಿದ ಕಿಡಿಗೇಡಿಗಳನ್ನು ಶೀಘ್ರವೇ ಬಂಧಿಸಬೇಕೆಂದು ಈ ಕುಕೃತ್ಯ ದಿಂದ ಕರ್ನಾಟಕ ಜನತೆಗೆ ಬಹಳ ನೋವು ಉಂಟಾಗಿದೆ ಹಾಗೂ ಕನ್ನಡ ಜನತೆಗಳ ಸ್ವಾಭಿಮಾನವನ್ನು ಕೆಣಕುವ ಕೆಲಸವನ್ನು ಎಂದಿಗೂ ಮಾಡಬೇಡಿ ಎಂದು ಕಿಡಿಗೇಡಿಗಳಿಗೆ ಎಚ್ಚರಿಕೆ ನೀಡುವುದರೊಂದಿಗೆ ಸಂಬಂಧಪಟ್ಟ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಬೇಕೆಂದು ಬೆಂಗಳೂರು ನಗರ ಪೊಲೀಸ್ ಕಮೀಷನರ್ ಅವರಿಗೆ ಮನವಿ ಮಾಡಿಕೊಂಡರು..
ಈ ಸಂದರ್ಭದಲ್ಲಿ :- ಕನ್ನಡಸೇನೆ ಹುಣಸೂರು ತಾಲೂಕು ಅಧ್ಯಕ್ಷರಾದ ಶ್ರೀ ಸಿದ್ದಲಿಂಗ ಮೂರ್ತಿ, ವಿಷ್ಣು ಅಭಿಮಾನಿ ಬಳಗದ ಅಧ್ಯಕ್ಷರಾದ ಶ್ರೀ ನಾಗರಾಜ್ ನಾಯಕ್, ಲೋಹಿತ್ ಅರಸ್, ಪವನ್ ಮತ್ತು ಸಹಸ್ರಾರು ಅಭಿಮಾನಿಗಳು ಪಾಲ್ಗೊಂಡಿದ್ದರು…,