“ನೆಟ್ವರ್ಕ್….ನೆಟ್ವರ್ಕ್…..ಟವರ್ ಇದ್ದರೂ ಸಿಗದ ನೆಟ್ವರ್ಕ್….ಸರಿ ಪಡಿಸಿದ ಅಧಿಕಾರಿಗಳು.”
1 min read
ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ತಾಲ್ಲೂಕಿನ,ಕೂವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರ್ಕಲ್ ಮತ್ತು ಕಾಗಿನಕೊಂಡದ ಸುತ್ತಮುತ್ತಲ ಗ್ರಾಮಸ್ಥರಿಗೆ ಹತ್ತು ದಿನಗಳಿಂದ ಸರಿಯಾಗಿ ಏರ್ಟೆಲ್ ನೆಟ್ವರ್ಕ್ ಸಂಪರ್ಕ ಸಿಗದಿದ್ದ ಕಾರಣ ದಿನಾಂಕ 26/10/2023ರ ಗುರುವಾರದಂದು ಗಬ್ಗಲ್ ಟವರ್ ಬಳಿ ಧರಣಿ ನಡೆಸಿದ್ದು,ಸ್ಥಳೀಯ ಪೊಲೀಸ್ ಠಾಣೆಗೆ ದೂರನ್ನು ನೀಡಿ ಸ್ಥಳಕೆ ಪೊಲೀಸ್ ಅಧಿಕಾರಿಗಳು ಬಂದು ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ ಟವರ್ ನಲ್ಲಿ ಇದ್ದ ಸಮಸ್ಯೆ ಹಾಗೂ ಮರ್ಕಲ್ ಗ್ರಾಮಕ್ಕೆ ಇದ್ದ ನೇರ ಸಂಪರ್ಕವನ್ನು ಸರಿಪಡಿಸಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಶಶಿಕುಮಾರ್,ವಿಠ್ಠಲ್ ಪೂಜಾರಿ,ಸಚಿನ್ ಮರ್ಕಲ್ ,ಅಶ್ವಥ್,ರಮೇಶ್ ಯಾದವ್ ಹಾಗೂ ಬ್ಯಾಂಡ್ ರವಿ,ನವೀನ್ ಹಾವಳಿ ಹಾಜರಿದ್ದರು.
🎙️ವರದಿ.🎙️
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.