“25ನೇ ವರ್ಷದ ಬೆಳ್ಳಿ ಹಬ್ಬ.”
1 min read
ಮೂಡಿಗೆರೆ ಚೈತನ್ಯ ಎ.ಎ.(ಆಲ್ಕೊಹಾಲಿಕ್ ಅನಾನಿಮಸ್) ಕೂಟದ 25.ನೆ ವರ್ಷದ ಬೆಳ್ಳಿ ಹಬ್ಬವನ್ನು ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ಪಟ್ಟಣದ ಜೇಸಿ ಭವನದಲ್ಲಿ ದಿನಾಂಕ 29/10/2023ರ ಭಾನುವಾರದಂದು ಆಚರಿಸಲಾಯಿತು.
ಉದ್ಘಾಟನೆಯನ್ನು ಮೂಡಿಗೆರೆ ಜೇಸಿ ಅಧ್ಯಕ್ಷರಾದ ಸವಿತಾರವಿ ನೆರವೆರಿಸಿದರು.
ಮುಖ್ಯ ಅತಿಥಿಗಳಾಗಿ ಮನೋವೈದ್ಯರಾದ ಪವಿತ್ರ.ಎನ್ ಚಿಕ್ಕಮಗಳೂರು,ದರ್ಪಣ ಪತ್ರಿಕೆಯ ಸಂಪಾದಕರಾದ ಪ್ರಸನ್ನ ಗೌಡಳ್ಳಿ ಭಾಗವಹಿಸಿದ್ದರು.
ಈ ಕಾರ್ಯಕ್ರಮಕ್ಕೆ ಕೇರಳ,ತಮಿಳುನಾಡು,ಬಿಜಾಪುರ,ಬೆಂಗಳೂರು,ಹೊಸದುರ್ಗ,ಮೈಸೂರು,ಹಾಸನ,ಕಡೂರು,ಶಿವಮೊಗ್ಗ,ಉಡುಪಿ,ಕಾರ್ಕಳ,ಮಂಗಳೂರು,ಸಕಲೇಶಪುರ,ಮಲೆನಾಡಿನ ಚಿಕ್ಕಮಗಳೂರು,ಕೊಪ್ಪ,ಶೃಂಗೇರಿ,ಬಾಳೆಹೊನ್ನೂರು,ಕಳಸ,ಬಾಳೆಹೊಳೆ,ಎನ್.ಆರ್.ಪುರ,ಮಾಗುಂಡಿ,ನಿಡುವಾಳೆ,ಜಯಪುರ ಮತ್ತು ಕರ್ನಾಟಕದ ವಿವಿದ ಊರುಗಳಿಂದ ಎ.ಎ.ಬಂಧುಗಳು ಆಗಮಿಸಿದ್ದರು.ಕಾರ್ಯಕ್ರಮದಲ್ಲಿ 300ಕ್ಕೂ ಹೆಚ್ಚು ಮದ್ಯಪಾನದಿಂದ ದೂರವಿದ್ದ ಎ.ಎ.ಬಂಧುಗಳು ಉಪಸ್ಥಿತರಿದ್ದರು.
ಕಾರ್ಕಳದ ಎಂ.ಪ್ರಕಾಶ್ ನಿರೂಪಣೆಯನ್ನು ಮಾಡಿದರು.ಸ್ವಾಗತವನ್ನು ಯುವರಾಜ್ ನೆರವೆರಿಸಿದರು.ನೆರಿದಿರುವ ಸರ್ವರಿಗೂ ಮಗ್ಗಲಮಕ್ಕಿ ಗಣೇಶ್ ವಂದನಾರ್ಪಣೆ ಮಾಡಿದರು.
🎙️ವರದಿ.🎙️
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.