“ಬಿಟ್ಟಿ ಭಾಗ್ಯ ಕೊಡುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲ : ದಿನೇಶ್ ದೇವವೃಂದ.”
1 min read
ಕಾಂಗ್ರೆಸ್ ಸರಕಾರ ಬಿಟ್ಟಿ ಭಾಗ ಘೋಷಣೆ ಮಾಡಿ, ಅದನ್ನು ಜನರಿಗೆ ತಲುಪಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಕಿಸಾನ್ ಮೋರ್ಚಾ ಕಾರ್ಯಕಾರಿಣಿ ಸದಸ್ಯ ದಿನೇಶ್ ದೇವವೃಂದ ದೂರಿದರು.
ಅವರು ದಿನಾಂಕ 17/10/2023ರ ಮಂಗಳವಾರದಂದು ಬಿಜೆಪಿ ಪಕ್ಷದಿಂದ ಕಾಂಗ್ರೆಸ್ ದುರಾಡಳಿತವನ್ನು ಖಂಡಿಸಿ ಪಟ್ಟಣದಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದರು. ಕಾಂಗ್ರೆಸ್ ಸರಕಾರದ ದುರಾಡಳಿತದಿಂದ ಪರಿಸರ ಕೂಡ ಬೇಸರ ವ್ಯಕ್ತಪಡಿಸಿ ರಾಜ್ಯದಲ್ಲಿ ಬರ ಆವರಿಸಿಕೊಳ್ಳುವಂತಾಗಿದೆ. 5 ರಾಜ್ಯದಲ್ಲಿ ನಡೆಯುವ ಚುನಾವಣೆಗೆ ಕಾಂಗ್ರೆಸ್ನ ಹೈಕಮಾಂಡ್ ನಿರ್ದೇಶನದಂತೆ ಜನರ ತೆರಿಗೆ ಹಣವನ್ನು ಚುನಾವಣೆಗಾಗಿ ನಮ್ಮ ರಾಜ್ಯದಿಂದ 1.ಸಾವಿರ ಕೋಟಿ ಹಣ ನೀಡಲು ರಾಜ್ಯ ಸರಕಾರ ಮುಂದಾಗಿದೆ. ಬಿಜೆಪಿ ಆಡಳಿತದಲ್ಲಿದ್ದಾಗ ರೈತರು ಒತ್ತುವರಿ ಮಾಡಿದ ಕೃಷಿ ಭೂಮಿಯನ್ನು ಗುತ್ತಿಗೆ ಆಧಾರದ ಮೇಲೆ ನೀಡಲು ಮುಂದಾಗಿತ್ತು. ಆದರೆ ಆ ಭೂಮಿಯನ್ನು ಕಾಂಗ್ರೆಸ್ ಸರಕಾರ ಕಿತ್ತುಕೊಳ್ಳಲು ಮುಂದಾಗಿದೆ. ಇಂತಹ ಅನೇಕ ಜನಪರ ಯೋಜನೆಗಳೆಲ್ಲಾ ಕಾಂಗ್ರೆಸ್ ಸರಕಾರ ಹೊಸಕು ಹಾಕಿ ಜನರ ಮೇಲೆ ಸವಾರಿ ಮಾಡುತ್ತಿದೆ ಎಂದು ದೂರಿದರು.
ಬಿಜೆಪಿ ಜಿಲ್ಲಾ ವಕ್ತಾರ ದೀಪಕ್ ದೊಡ್ಡಯ್ಯ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಭಾರತವನ್ನು ಬಲಿಷ್ಟ ದೇಶವನ್ನಾಗಿ ಮಾಡುತ್ತಿದ್ದರೆ, ಕಾಂಗ್ರೆಸ್ನವರು ದೇಶವನ್ನು ದಿವಾಳಿಯನ್ನಾಗಿ ಮಾಡಲು ಮುಂದಾಗಿದ್ದಾರೆ. 5 ಬಿಟ್ಟಿ ಭಾಗ್ಯ ಯೋಜನೆ ಘೋಷಿಸಿ, ಜನರಿಗೆ ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದಿದ್ದಾರೆ. ಗೃಹಲಕ್ಷಿ ಯೋಜನೆ 2ಸಾವಿರ ಹಣ ಶೇ.50 ರಷ್ಟು ಮಹಿಳೆಯರಿಗೆ ಇನ್ನೂ ಸಿಕ್ಕಿಲ್ಲ. ಅನ್ನಭಾಗ್ಯ ಯೋಜನೆ ಜಾರಿ ಮಾಡಲು ವಿಫಲರಾಗಿದ್ದಾರೆ. ಬಿಜೆಪಿ ಶೇ.40 ಪರ್ಸಂಟೇಜ್ ಎನ್ನುವವರು ಈಗ ಅವರದೇ ಪಕ್ಷದವರ ಮನೆಯಲ್ಲಿ ಕೋಟ್ಯಾಂತರ ರೂ ಹಣ ಐಟಿ ದಾಳಿಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳು ಸ್ಪಷ್ಟನೆ ನೀಡಬೇಕು. ಅಲ್ಲದೇ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.
ಬಿಜೆಪಿ ತಾಲೂಕು ಅಧ್ಯಕ್ಷ ಜೆ.ಎಸ್.ರಘು ಮಾತನಾಡಿ, ಜಿಲ್ಲೆಯಲ್ಲಿ ಈ ಹಿಂದೆ 56 ಮಾರ್ಗಗಳಿಗೆ ಕೆಎಸ್ಆರ್ಟಿಸಿ ಬಸ್ ಓಡಾಡುತ್ತಿತ್ತು. ಮಹಿಳೆಯರಿಗೆ ಉಚಿತ ಪ್ರಯಾಣದ ಯೋಜನೆಯಿಂದ ಕಾಂಗ್ರೆಸ್ ಆಡಳಿತಕ್ಕೆ ಬಂದ ನಂತರ 36 ಮಾರ್ಗಗಳಿಗೆ ಮಾತ್ರ ಬಸ್ ಸಂಚಾರ ನಿಗದಿಪಡಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳು ತೊಂದರೆ ಅಮನುಭವಿಸುಂತಾಗಿದೆ ಎಂದು ಹೇಳಿದರು.
ಪ.ಪಂ. ಸದಸ್ಯ ಅನುಕುಮಾರ್, ಬಿಜೆಪಿ ತಾಲೂಕು ಅಧ್ಯಕ್ಷ ಜೆ.ಎಸ್.ರಘು, ಮುಖಂಡರಾದ ಗಜೇಂದ್ರ ಕೊಟ್ಟಿಗೆಹಾರ, ಧನಿಕ್ ಕೋಡದಿಣ್ಣೆ, ಮನೋಜ್ ಹಳೆಕೋಟೆ, ಸರೋಜಾ ಸುರೇಂದ್ರ, ಸುಧಾ ಯೊಗೇಶ್, ನಯನ ತಳವಾರ, ಎಂಎಸ್.ಸುಜಿತ್, ಪ್ರಶಾಂತ್, ಚಂದ್ರೇಶ್ ಮತ್ತಿತರರಿದ್ದರು.
🎙️ವರದಿ.🎙️
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.