“ಸಾರ್ವಜನಿಕರಿಗೆ ಸ್ಪಂದಿಸದ ತಾಲ್ಲೂಕು ಆಡಳಿತ ವ್ಯವಸ್ಥೆ : ಎಂ.ಕೆ.ಹಕೀಂ.”
1 min read
ತಾಲ್ಲೂಕಿನಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಆಗುತ್ತಿಲ್ಲ. ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಅದನ್ನು ಕೂಡ ಜನಪ್ರತಿನಿಧಿಗಳು ಪ್ರಶ್ನಿಸುತ್ತಿಲ್ಲ. ಹೀಗೆಯೇ ಮುಂದುವರೆದರೆ ತಾಲೂಕು ಯಾವುದೇ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ ಎಂದು ಕರ್ನಾಟಕ ರಾಷ್ಟ್ರಸಮಿತಿ ಪಕ್ಷದ ತಾಲ್ಲೂಕು ಅಧ್ಯಕ್ಷ ಎಂ.ಕೆ.ಹಕೀಂ ಹೇಳಿದರು.
ಅವರು ದಿನಾಂಕ 17/10/2023ರ ಮಂಗಳವಾರದಂದು ವಾಹಿನಿಯೊಂದಿಗೆ ಮಾತನಾಡಿ, ಮೂಡಿಗೆರೆ ಸಮೀಪದ ಹ್ಯಾಂಡ್ಪೋಸ್ಟ್ ಸರ್ಕಲ್ ಸಂಪೂರ್ಣ ಕಿರಿದಾಗಿದ್ದರಿಂದ ವಾಹನ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗಿದ್ದು, ಅದನ್ನು ದ್ವಿಪಥ ರಸ್ತೆಯನ್ನಾಗಿ ಮಾಡಬೇಕು. ಆ ಸರ್ಕಲ್ನಲ್ಲಿ ರಾತ್ರಿ ವಿದ್ಯುತ್ ದೀಪ ಯಾವಾಗಲೂ ಕೆಟ್ಟು ಹೋಗುತ್ತಿರುವುದರಿಂದ ಪ್ರಯಾಣಿಕರು ಕತ್ತಲಲ್ಲಿ ನಿಲ್ಲುವಂತಹ ಪರಿಸ್ಥಿತಿ ಎದುರಾಗಿದೆ. ಹಾಗಾಗಿ ಗುಣಮಟ್ಟದ ಬಲ್ಪನ್ನು ಗುತ್ತಿಗೆದಾರರು ಹಾಕಬೇಕು ಎಂದ ಅವರು, ದಾರದಹಳ್ಳಿ ಮತ್ತು ಹಳೆಮೂಡಿಗೆರೆ ಗ್ರಾ.ಪಂ.ಯಲ್ಲಿ ಜನರ ಯಾವುದೇ ಕೆಲಸವಾಗುತ್ತಿಲ್ಲ. ಪಿಡಿಒಗಳು ಮನ ಬಂದತೆ ಕಚೇರಿಗೆ ಬರುತ್ತಾರೆ. ಈ ಬಗ್ಗೆ ಅವರನ್ನು ಪ್ರಶ್ನಿಸಿದರೆ ಉಡಾಫೆಯ ಉತ್ತರ ನೀಡುತ್ತಾರೆ. ಸಾರ್ವಜನಿಕರಿಗೆ ಕೆಲಸ ಮಾಡದ ಪಿಡಿಒಗಳು ಅಗತ್ಯವಿಲ್ಲ. ಅವರನ್ನು ಇಲ್ಲಿಂದ ವರ್ಗಾವಣೆ ಮಾಡಬೇಕೆಂದು ಒತ್ತಾಯಿಸಿದರು.
ದಾರದಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಕಿತ್ತಲೆಗಂಡಿ ಮಸೀದಿ ಸಮೀಪ ವಿದ್ಯುತ್ ತಂತಿ ಕೈಗೆ ಎಟುಕುವಂತೆ ನೇತಾಡುತ್ತಿದೆ. ಈ ಬಗ್ಗೆ ಮೆಸ್ಕಾಂ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ಅಲ್ಲಿ ಒಂದು ವಿದ್ಯುತ್ ಕಂಬ ಹಾಕಿ ತಂತಿ ಕೈಗೆಟುಕದಂತೆ ಕ್ರಮ ವಹಿಸಬೇಕು. ಆ ಸ್ಥಳದಲ್ಲಿ ಮಕ್ಕಳು ಅಥವಾ ಸಾರ್ವಜನಿಕರಿಗೆ ವಿದ್ಯುತ್ ತಂತಿ ತಗುಲಿ ಅವಘಡ ಸಂಭವಿಸಿದರೆ ಮೆಸ್ಕಾಂ ಅಧಿಕಾರಿಗಳೆ ಹೊಣೆ ಹೊತ್ತುಕೊಳ್ಳಬೇಕೆಂದು ಆಗ್ರಹಿಸಿದರು.
🎙️ವರದಿ.🎙️
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.