लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
22/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಕರ್ನಾಟಕ ಜಾನಪದ ಪರಿಷತ್ತು (ರಿ)ಬೆಂಗಳೂರು ಇದರ ವತಿಯಿಂದ ಚಿಕ್ಕಮಗಳೂರು ಜಿಲ್ಲಾ ಘಟಕದ 4ನೇ ಚಿಕ್ಕಮಗಳೂರು ಜಿಲ್ಲಾ ಜಾನಪದ ಸಮ್ಮೇಳನವು ದಿನಾಂಕ 20/10/2023ರ ಶುಕ್ರವಾರದಂದು ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ನಡೆಯಲಿದೆ.

ಜಾನಪದ ಸಮ್ಮೇಳನದ ಸಮ್ಮೇಳನಾಧ್ಯಕ್ಷರಾಗಿ ಜಾನಪದ ಸಿರಿ ಪ್ರಶಸ್ತಿ ಪುರಸ್ಕೃತರಾದ ಬೆಳವಾಡಿ ಶ್ರೀ.ಬಿ.ಪಿ.ಪರಮೇಶ್ವರಪ್ಪ ಅವರು ಭಾಗವಹಿಸುತ್ತಿದ್ದಾರೆ.

ಸಮ್ಮೇಳನದ ಧ್ವಜಾರೋಹಣವು ಬೆಳಿಗ್ಗೆ 8.00ಗಂಟೆಗೆ ನಡೆಯಲಿದೆ.ನಂತರದಲ್ಲಿ ಪಟ್ಟಣದಲ್ಲಿ ಸಮ್ಮೇಳನಾಧ್ಯಕ್ಷರ ಮೆರವಣಿಗೆಯು ಚಿಕ್ಕಮಗಳೂರು ತಾಲ್ಲೂಕು ಕಚೇರಿ ಆವರಣದಿಂದ ಎಂ.ಜಿ.ರಸ್ತೆಯ ಮೂಲಕ ಕುವೆಂಪು ಕಲಾಮಂದಿರದವರೆಗೆ ನಡೆಯಲಿದೆ. ಮೆರವಣಿಗೆಯಲ್ಲಿ ಪೂರ್ಣಕುಂಭ ಹಾಗೂ ವಾದ್ಯಗಳೊಂದಿಗೆ ಜನಪದ ಕಲಾತಂಡಗಳು ಭಾಗವಹಿಸಲಿವೆ. ಮೆರವಣಿಗೆಯ ಉದ್ಘಾಟನೆಯನ್ನು ಚಿಕ್ಕಮಗಳೂರು ತಾಲ್ಲೂಕಿನ ಶಾಸಕರಾದ ಶ್ರೀಯುತ ಹೆಚ್.ಡಿ.ತಮ್ಮಯ್ಯ ನೆರವೇರಿಸಲಿದ್ದಾರೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಬೆಳಿಗ್ಗೆ.10.30.ಕ್ಕೆ. ಇಂಧನ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀಯುತ ಕೆ.ಜೆ.ಜಾರ್ಜ್ ಅವರು ನೆರವೇರಿಸಲಿದ್ದಾರೆ

ಸಮ್ಮೇಳನದಲ್ಲಿ ಜಾನಪದ ಸಿರಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದ್ದು,ಗೀತ ಮಾಧುರ್ಯ ಶೀರ್ಷಿಕೆಯೊಂದಿಗೆ ಜನಪದ ಗೀತ ಗಾಯನ ಕಾರ್ಯಕ್ರಮವನ್ನು ಶ್ರೀಮತಿ ಜ್ಯೊತಿ ವಿನೀತ್ ಕುಮಾರ್,ಶ್ರೀಮತಿ ಹರಿಣಾಕ್ಷಿ ಹಾಗೂ ಶ್ರೀ ಬಕ್ಕಿರವಿ ತಂಡದವರಿಂದ ನಡೆಯಲಿದೆ.

ಸಾಂಸ್ಕೃತಿಕ ಕಲಾ ವೈಭವ ಎಂಬ ಶೀರ್ಷಿಕೆಯೊಂದಿಗೆ ಜನಪದ ಗೀತ ಗಾಯನ ಮತ್ತು ನೃತ್ಯಗಳು ನಡೆಯಲಿದ್ದು ಡಾ||ಅಪ್ಪಗೆರೆ ತಿಮ್ಮರಾಜು ತಂಡದವರು ನಡೆಸಿಕೊಡಲಿದ್ದಾರೆ.

ಈ ಸಮ್ಮೇಳನದಲ್ಲಿ ಮಧ್ಯಾಹ್ನ 1:30ಕ್ಕೆ ಜಾನಪದ ಗೋಷ್ಠಿ ನಡೆಯಲಿದೆ.

ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಉತ್ತರ ಕರ್ನಾಟಕ ಜಾನಪದ ಸಾಂಸ್ಕ್ರತಿಕ ಚಿಲುಮೆ ನಡೆಯಲಿದೆ.

ಸಮ್ಮೇಳನದ ಸಮಾರೋಪ ಸಮಾರಂಭವು ಸಂಜೆ 3:30ಕ್ಕೆ ನೆರವೇರಲಿದ್ದು ಅಧ್ಯಕ್ಷತೆಯನ್ನು ಚಿಕ್ಕಮಗಳೂರು ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಶ್ರೀಯುತ ಜೆ.ಬಿ.ಸುರೇಶ್ ವಹಿಸಲಿದ್ದಾರೆ.

🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ.

9448305990.

About Author

Leave a Reply

Your email address will not be published. Required fields are marked *