“ಕೋಟಿಯೇ ಸಿ.ಟಿ.ರವಿ ಸೋಲಿಗೆ ಕಾರಣ.”
1 min read
ಅಭಿವೃದ್ಧಿ ಹೆಸರಿನಲ್ಲಿ ನಡೆದ ವ್ಯಾಪಕ ಭ್ರಷ್ಟಾಚಾರವೇ ಮಾಜಿ ಶಾಸಕ ಸಿ .ಟಿ. ರವಿ ಸೋಲಿಗೆ ಕಾರಣ ಎಂದು ವಿಧಾನ ಪರಿಷತ್ ಸದಸ್ಯ ಎಸ್. ಎಲ್. ಭೋಜೇಗೌಡ ಆರೋಪಿಸಿದ್ದಾರೆ.
ನಮ್ಮ ವಾಹಿನಿಯೊಂದಿಗೆ ಮಾತನಾಡಿದ ಅವರು ಭ್ರಷ್ಟಾಚಾರಕ್ಕೆ ಬೆಂಬಲ,ಪೋಷಣೆ,ಸ್ವಜನ ಪಕ್ಷಪಾತ ಸೋಲಿಗೆ ಕಾರಣ ಎನ್ನುವುದನ್ನು ಮಾಜಿ ಶಾಸಕರು ಮೊದಲು ಮನಗಾಣಲಿ ಎಂದರು.
ದಂಟರಮಕ್ಕಿ ಕೆರೆ, ನಗರಸಭೆಯಲ್ಲಿ ನಡೆದಿರುವ ಕಾಮಗಾರಿಗಳಲ್ಲಿ ಅವ್ಯವಹಾರ ನಡೆದಿಲ್ಲವೇ ಎಂದು ಪ್ರಶ್ನಿಸಿ ಇದರ ತನಿಖೆ ನಡೆಸುವುದರಲ್ಲಿ ತಪ್ಪೇನಿದೆ ಎಂದು ಕೇಳಿದರು.
ಕಲ್ಯಾಣ ನಗರದಲ್ಲಿ ಮನೆಗಳನ್ನು ನಿರ್ಮಿಸಿ 20 ವರ್ಷಗಳಾದರೂ ಇನ್ನೂ ನಗರ ಸಭೆಗೆ ಹಸ್ತಾಂತರವಾಗಿಲ್ಲ, ಮಾಜಿ ಶಾಸಕರು ಏನು ಮಾಡುತ್ತಿದ್ದರು ಎಂದು ಪ್ರಶ್ನಿಸಿದ್ದಾರೆ.
ಅಭಿವೃದ್ಧಿ ಹೆಸರಿನಲ್ಲಿ ನಡೆದ ಅವ್ಯವಹಾರ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಈಗಾಗಲೇ ನೋಟಿಸ್ ವೇದಿಕೆ ಪ್ರಕ್ರಿಯೆ ಆರಂಭಗೊಂಡಿದೆ ಎಂದರು.
ಮಾಜಿ ಶಾಸಕರು ರಾಷ್ಟ್ರದ ಬಗ್ಗೆ ಮಾತನಾಡುವುದನ್ನು ಕಮ್ಮಿ ಮಾಡಿ ಸ್ಥಳೀಯ ವಿಷಯಗಳ ಬಗ್ಗೆ ಚರ್ಚಿಸಲಿ ಎಂದು ಸಲಹೆ ನೀಡಿ, ಮೊನ್ನೆ ಯಾವ ಪುರುಷಾರ್ಥಕ್ಕೆ ಬಿಜೆಪಿ ಕಾರ್ಯಕರ್ತರು ಮುಷ್ಕರ ನಡೆಸಿದರು ಎಂದು ಲೇವಡಿ ಮಾಡಿದರು .
ಕುವೆಂಪುರವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ವ್ಯಕ್ತಿಯನ್ನು ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷರಾಗಿ ಮಾಡಿದಾಗ, ನಾರಾಯಣ ಗುರುರವರ ವಿಚಾರಗಳನ್ನು ಪಠ್ಯದಿಂದ ಕೈ ಬಿಟ್ಟಾಗ ಮೌನ ವಹಿಸಿದ್ದರ ಅರ್ಥ ಏನೆಂದು ಹೇಳಿದರು.
ಗಿರಿ ಪ್ರದೇಶದ ಖಾಸಗಿ ಹೋಟೆಲ್ ಗೆ ತೆರಳಲು ಒಂದು ಕೋಟಿ ಅರವತ್ತು ಲಕ್ಷ ವೆಚ್ಚದಲ್ಲಿ ಶಾಸಕರ ಸಂಬಂಧಿಯಿಂದ ಕಾಂಕ್ರೀಟ್ ಕಾಮಗಾರಿ ನಡೆಯುತ್ತಿದ್ದರೂ ಪರಿಸರವಾದಿಗಳು ಮೌನವಾಗಿದ್ದಾರೆ, ಇದರಲ್ಲಿ ಮಾಜಿ ಶಾಸಕರ ಪಾತ್ರ ಇಲ್ಲವೇ ಎಂದು ಟೀಕಿಸಿದರು.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.






