ಸೋಲುತ್ತಿದ್ದ ಸೌತ್ ಆಫ್ರಿಕಾಕ್ಕೆ ಬಹುಮಾನ ತಂದುಕೊಟ್ಟ ಬವುಮಾ”.
1 min read
“ಸೋಲುತ್ತಿದ್ದ ಸೌತ್ ಆಫ್ರಿಕಾಕ್ಕೆ ಬಹುಮಾನ ತಂದುಕೊಟ್ಟ ಬವುಮಾ”. ಕ್ರೀಡಾ ಕ್ಷೇತ್ರದಲ್ಲಿ ಮೀಸಲಾತಿ ಏಕೆ? ಎಂದು ಕೇಳುವವರಿಗೆ ಉತ್ತರವೆಂಬಂತೆ!! ಮೀಸಲಾತಿಯಿಂದ ಅವಕಾಶವನ್ನು ಪಡೆದು ಕ್ರಿಕೆಟ್ ಕ್ರೀಡೆಯಲ್ಲಿದಕ್ಷಿಣ ಆಫ್ರಿಕಾವನ್ನು ಚೋಕರ್ಸ್ ಎಂದು 27 ವರ್ಷದಿಂದ ಕರೆಯುತ್ತಿದ್ದ ವಿಶ್ವದ ಕ್ರಿಕೆಟ್ ಅಭಿಮಾನಿಗಳಿಗೆ ಐ.ಸಿ.ಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಬವುಮಾ ರವರ ನಾಯಕತ್ವದಲ್ಲಿ ಐ.ಸಿ.ಸಿ ಟೆಸ್ಟ್ ಪ್ರಶಸ್ತಿಯನ್ನು ಗೆಲ್ಲುವುದರ ಮೂಲಕ ವಿಶ್ವದ ಕ್ರಿಕೆಟ್ ಪ್ರೇಮಿಗಳು ದಕ್ಷಿಣ ಆಫ್ರಿಕಾದ ಕಡೆಗೆ ತಿರುಗಿ ನೋಡುವಂತೆ ಮಾಡಿದ್ದು ಬವುಮಾ……. ……………… ಯಾಕೆ? ಇಷ್ಟೆಲ್ಲಾ ಈ ಮಾಹಿತಿ ಬರೆಯಬೇಕೆಂದರೆ, ದಕ್ಷಿಣ ಆಫ್ರಿಕಾದಲ್ಲಿ ಶತಮಾನಗಳಿಂದಲೂ ವರ್ಣಬೇಧ ನೀತಿಯಿಂದಾಗಿ ಆ ದೇಶದಲ್ಲಿ ಬುಡಕಟ್ಟು (ಮೂಲ ನಿವಾಸಿಗಳು) ಸಮುದಾಯಗಳು ಹೀನಾಯ ಸ್ಥಿತಿಯಲ್ಲಿ ಜೀವನವನ್ನು ಸಾಗಿಸುತ್ತಿದ್ದರು ಆ ನೀತಿಯ ಪರಿಣಾಮವಾಗಿ ಭಾರತದಿಂದ ದಕ್ಷಿಣ ಆಫ್ರಿಕಕ್ಕೆ ಹೋಗಿ ಲೀಗಲ್ ಅಡ್ವೈಸರ್ ಆಗಿ ವೃತ್ತಿ ಜೀವನ ಆರಂಭಿಸಿದ ಗಾಂಧೀಜಿಯವರನ್ನು ಕಪ್ಪು ವರ್ಣದವರು ಎಂಬಾ ಕಾರಣಕ್ಕೆ ರೈಲಿನ ಬೋಗಿಯಿಂದ ಹೊರ ಹಾಕಿದ್ದನ್ನು ಕಾಣಬಹುದು. ಈ ವಿಷಯ ಚರಿತ್ರೆಯಲ್ಲಿ ದಾಖಲಾಗಿದೆ. ….ಅಂತೆಯೇ ವರ್ಣಭೇದ ನೀತಿಯ ವಿರುದ್ಧ ಹೋರಾಟ ಮಾಡಿದಂತಹ ನೆಲ್ಸನ್ ಮಂಡೇಲಾ ಅವರು 27 ವರ್ಷಗಳ ಕಾಲ ಸೆರೆವಾಸ ಅನುಭವಿಸಿದರು. ಜೈಲಿನಿಂದ ಬಿಡುಗಡೆಯಾದ ನಂತರ ದಕ್ಷಿಣ ಆಫ್ರಿಕದ ಅಧ್ಯಕ್ಷರಾಗಿ ಆಳ್ವಿಕೆ ಮಾಡಿದ್ದು ಚರಿತ್ರೆಯಲ್ಲಿ ದಾಖಲಾಗಿದೆ. ಅಂದರೆ ಕಪ್ಪುವರ್ಣದ ಜನ ಕನಿಷ್ಠ ಎಂಬಾ ನೀತಿಯಿಂದಾಗಿ ಆ ದೇಶದಲ್ಲಿ ಕೀಳುಮಟ್ಟದಿಂದ ಕಾಣಲಾಗುತ್ತಿತ್ತು. ಆದರೆ ನೆಲ್ಸನ್ ಮಂಡೇಲಾ ಅವರ ಹೋರಾಟದ ಪ್ರತಿಫಲವಾಗಿ ಕಪ್ಪು ವರ್ಣದವರಿಗೂ ಎಲ್ಲಾ ಕ್ಷೇತ್ರದಲ್ಲೂ ಅವಕಾಶಗಳು ಒದಗಿ ಬಂದವು. ಅಂತೆಯೇ ಕ್ರೀಡಾ ಕ್ಷೇತ್ರದಲ್ಲೂ ಕಪ್ಪು ವರ್ಣದವರಿಗೆ ಮೀಸಲಾತಿಯನ್ನು ಕಲ್ಪಿಸಲಾಗಿದೆ. ಆ ಭಾಗವಾಗಿ ದಕ್ಷಿಣ ಆಫ್ರಿಕಾದ ಕ್ರಿಕೆಟ್ ತಂಡದಲ್ಲಿ ಕಪ್ಪು ವರ್ಣದ ಬವುಮಾ ಅವರನ್ನು ನಾಯಕರಾಗಿ ನೇಮಿಸಿದ ತಕ್ಷಣ ಇಡೀ ವಿಶ್ವದ ಕ್ರಿಕೆಟ್ ಆಟಗಾರರು ಗೇಲಿ ಮಾಡಿದ್ದೆ ಹೆಚ್ಚು ಏಕೆಂದರೆ ಬವುಮಾ 5.3 ಅಡಿ ಇರುವ ಕುಬ್ಜ ವ್ಯಕ್ತಿಯಾಗಿದ್ದಾರೆ. ಹಾಗೆಯೇ ಕಪ್ಪು ವರ್ಣದ ವ್ಯಕ್ತಿ ಆಗಿರುವ ಕಾರಣ ಆತ ಕ್ರಿಕೆಟ್ ಆಡಲು ಯೋಗ್ಯನಲ್ಲ ಎಂದವರೆ ಹೆಚ್ಚು. ಮಾತೃ ದೇಶದಲ್ಲಿಯೇ ಅನೇಕ ಮಂದಿ ಆತನನ್ನು ಅನೇಕ ರೀತಿಯಲ್ಲಿ ಜರಿದರೂ ಕೂಡ, ಬವುಮಾ ಎದೆಗುಂದದೆ ಕ್ರಿಕೆಟ್ ಆಟವನ್ನು ಶ್ರದ್ಧೆಯಿಂದ ಆಡಿದರು. ಆ ಭಾಗವಾಗಿ ಮೊನ್ನೆ ಐ.ಸಿ.ಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ದಕ್ಷಿಣ ಆಫ್ರಿಕಾದ ಟೆಸ್ಟ್ ಕ್ರಿಕೆಟ್ ತಂಡದ ನಾಯಕರಾಗಿ ಯಶಸ್ವಿಯಾಗಿ ಮುನ್ನಡೆಸಿ ಪ್ರಥಮ ಇನ್ನಿಂಗ್ಸ್ ನಲ್ಲಿ 36 ರನ್ ಗಳಿಸಿದರೆ, ಎರಡನೇ ಇನ್ನಿಂಗ್ಸ್ ನಲ್ಲಿ 66 ರನ್ ಗಳಿಸಿ, 27 ವರ್ಷಗಳಿಂದ ದಕ್ಷಿಣ ಆಫ್ರಿಕಾ ಐ.ಸಿ.ಸಿ ಕ್ರಿಕೆಟ್ ಪ್ರಶಸ್ತಿಯನ್ನು ಗೆಲ್ಲದೆ ಚೋಕರ್ಸ್ ಎಂಬಾ ಹಣೆ ಪಟ್ಟಿಯನ್ನು ಕಳಚಿ ಪ್ರಶಸ್ತಿ ಗೆಲ್ಲುವಂತೆ ಪ್ರಮುಖ ಪಾತ್ರ ವಹಿಸಿದ್ದಾರೆ. ಬವುಮಾ ನಾಯಕತ್ವದಲ್ಲಿ ದಕ್ಷಿಣ ಆಫ್ರಿಕಾ 10 ಟೆಸ್ಟ್ ಪಂದ್ಯಗಳನ್ನು ಆಡಿ ದೆ ಅದರಲ್ಲಿ 9 ಗೆಲುವನ್ನು ಪಡೆದರೆ 01 ಪಂದ್ಯವನ್ನು ಡ್ರಾ ಮಾಡಿಕೊಂಡಿದೆ ಅಂದರೆ ಬುಡಕಟ್ಟು ಜನಾಂಗದಿಂದ ಬಂದಂತಹ ಬವುಮಾ ವಿಶ್ವದ ಗಮನ ಸೆಳೆದು ಇಂದು ವಿಶ್ವ ಕ್ರಿಕೆಟ್ ನಲ್ಲಿ ದಕ್ಷಿಣ ಆಫ್ರಿಕಾ ನಂಬರ್ ಒನ್ ಸ್ಥಾನ ಪಡೆಯಲು ಕಾರಣಭೂತರಾಗಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ಬುಡಕಟ್ಟು ಜನಾಂಗದ ಬಗ್ಗೆ ಇದ್ದ ತಿರಸ್ಕಾರ ಮನೋಭಾವನೆ ಒಂದಿಷ್ಟು ದೂರವಾಗಿದೆ………. ಭಾರತದ ಲ್ಲಿಯೂ ಅನೇಕ ಬುಡಕಟ್ಟು ಜನಾಂಗದಲ್ಲಿ ಬವುಮಾ ರಂತಹ ನಾಯಕತ್ವ ನೀಡುವ ಅನೇಕ ಕ್ರೀಡಾಪಟುಗಳಿದ್ದಾರೆ, ಭಾರತದ ಜಾತಿ ವ್ಯವಸ್ಥೆ ಅಂತಹ ಪ್ರತಿಭಾವಂತರಿಗೆ ಅವಕಾಶ ನೀಡದೆ, ಬುಡಕಟ್ಟು ಜನಾಂಗದವರನ್ನು ಹೊರಗಿಟ್ಟ ಕಾರಣ ಇನ್ನೂ ಸಹ ಒಲಿಂಪಿಕ್ಸ್ ಸ್ಪರ್ಧೆಗಳಲ್ಲಿ ಭಾರತ ಕೆಲವೊಂದು ಕ್ರೀಡೆಗಳಲ್ಲಿ ಅರ್ಹತೆ ಸಹ ಪಡೆಯಲು ಸಾಧ್ಯವಾಗಿಲ್ಲ. ಜಪಾನ್ ನಂತಹ ಪುಟ್ಟ ರಾಷ್ಟ್ರ ಬುಡಕಟ್ಟು ಜನಾಂಗದ ಪ್ರತಿಭಾ ವಂತರಿಗೆ ಒಲಿಂಪಿಕ್ಸ್ ಸ್ಪರ್ಧೆಗಳಲ್ಲಿ ಅವಕಾಶ ಕಲ್ಪಿಸಿ ದ ಭಾಗವಾಗಿ ಅನೇಕ ಪ್ರಶಸ್ತಿಗಳನ್ನು ಪಡೆಯುತ್ತಿದ್ದಾರೆ. ಭಾರತದಲ್ಲಿಯೂ ಸಹ ಬವುಮಾ ರಂತಹ ವಿಶ್ವ ಶ್ರೇಷ್ಠ ಆಟಗಾರರಿದ್ದಾರೆ ಅವರನ್ನು ಸಹ ಗುರುತಿಸುವ ಪ್ರಯತ್ನ ನಡೆಯಲಿ….. ಭಾರತದ ಎಲ್ಲಾ ಮಾದರಿಯ ಕ್ರೀಡಾ ಕ್ಷೇತ್ರದಲ್ಲಿ “ಮೀಸಲಾತಿ ಜಾರಿಯಾಗಲಿ”… ಭಾರತದಲ್ಲಿರುವ ವಿವಿಧ ಬುಡಕಟ್ಟು ಜನಾಂಗದಲ್ಲಿಯೂ ಸಹ ಅನೇಕ ಬವುಮಾ ರಂತಹ ಮಹಾನ್ ಆಟಗಾರರು ಕ್ರೀಡಾ ಕ್ಷೇತ್ರದಲ್ಲಿ ಅನೇಕ ಬಹುಮಾನಗಳನ್ನು ಗಳಿಸುವಂತಾಗಲಿ..🥇🥇🥇🥇🥇🥇. ” ಜಾತಿ ಬಿಡಿ ಮತಬಿಡಿ ಪ್ರತಿಭಾವಂತರಿಗೆ ಅವಕಾಶ ಕೊಡಿ”…… ✍️ ಹರೀಶ್ ನಲ್ಕೆ ಸಂಶೋಧನಾ ಬರಹಗಾರರು.