“ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ.”
1 min read
ಮಿಲ್ಲತ್ ಪೋಲ್ ಬನ್ ನರ್ಸರಿ ಶಾಲೆ ಆಲ್ದೂರು ವತಿಯಿಂದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ಮಕ್ಕಳಿಗೆ ಪ್ರಶಸ್ತಿ ಪುರಸ್ಕಾರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಸಿ.ಸಿ. ಸುರೇಶ್ ಆಗಮಿಸಿದ್ದರು.

ಆಲ್ದೂರು ಠಾಣಾಧಿಕಾರಿಯಾದ ಸಜಿತ್ ಕುಮಾರ್ ಹಾಗೂ ವೈದ್ಯಾಧಿಕಾರಿ ಮಹದೇವಸ್ವಾಮಿ ಹಾಗೂ ನದೀಮ್ ಅಹಮದ್ ಆಲ್ದೂರು ಗ್ರಾಮ ಪಂಚಾಯತಿ ಅಧ್ಯಕ್ಷರಾದ ನಾಗರತ್ನ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಶಂಷುನ್ ನಹಾರ್ ಸದಸ್ಯರಾದ ಡಿ.ಬಿ.ಅಶೋಕ್,ಹೆಚ್.ಎಸ್.ಕೃಷ್ಣೇಗೌಡ ,ಲಿಯಾಖತ್ ,ಬಾಬುಲಾ ಹಾಗೂ ಆಲ್ದೂರಿನ ಎಲ್ಲಾ ಶಾಲೆಯ ಮುಖ್ಯೋಪಾಧ್ಯಾಯರು ಆಗಮಿಸಿದ್ದರು.


ಮಕ್ಕಳಿಗೆ ಪ್ರಶಸ್ತಿ ಪುರಸ್ಕಾರವನ್ನು ಕೊಟ್ಟು ಸನ್ಮಾನಿಸಲಾಯಿತು ಮತ್ತು ಎಂ ಬಿ ಬಿ ಎಸ್ ಪದವಿ ಪಡೆದಿರುವ ಡಾ. ರೂಮಾ ರೆಹಮಾನ್, ಡಾ ಶಾಗಿಲ್ ರವರನ್ನು ಕೂಡ ಸನ್ಮಾನಿಸಲಾಹಿತು ಮಿಲ್ಲತ್ ಪೋಲ್ ಬನ್ ನರ್ಸರಿ ಶಾಲೆಯ ಕಮಿಟಿಯ ಅಧ್ಯಕ್ಷರು ಮೊಹಮ್ಮದ್ ಇಕ್ಬಾಲ್ ಉಪಾಧ್ಯಕ್ಷರು ನಜಿಬ್ ಅನ್ಸರ್ , ಮನ್ಸೂರ್ ಅಹಮದ್ ಕಾರ್ಯದರ್ಶಿ ನಾಸಿರ್ ಹುಸೇನ್ ಹಾಗೂ ಸಹ ಕಾರ್ಯದರ್ಶಿ ಕುತುಬುದ್ದೀನ್,ಅಫ್ತಾಬ್ ಖಜಾಂಚಿಯಾದ ಇಮ್ರಾನ್, ಶಫೀಕ್ ಅಹಮದ್,ರಫೀಕ್,ಮುಜೀಬ್,ಷರೀಫ್, ಮತ್ತಿತರಿದ್ದರು.ಶಾಲೆಯ ಶಿಕ್ಷಕಿಯಾದ ಶಾಹಿರ ಬಾನು ಮತ್ತು ಜುಬೇದಾ ಇವರೆಲ್ಲರು ಉಪಸ್ಥಿತರಿದ್ದರು.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.






