लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
20/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

“ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಭರವಸೆ ಶಾಸಕಿ ನಯನ ಮೋಟಮ್ಮನವರಿಗೆ ಅಭಿನಂದನೆ ಕಾರ್ಯಕ್ರಮ.”

1 min read

ನೂತನ ಶಾಸಕರಾದ ಶ್ರೀಮತಿ ನಯನ ಮೊಟಮ್ಮ ರವರಿಗೆ ಅಭಿನಂದಿಸಲು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಹಾಗೂ ಮೂಡಿಗೆರೆ ತಾಲೂಕು ಘಟಕದ ಮತ್ತು ಕಸಬಾ ಹೋಬಳಿ ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರು ನೂತನ ಶಾಸಕಿಯವರ ಕಚೇರಿಯಲ್ಲಿ ಅಭಿನಂದಿಸಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಭರವಸೆಯ ಶಾಸಕಿ ನಯನ ಮೋಟಮ್ಮ ಅವರು ಮಾತನಾಡಿ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಭವನಕ್ಕೆ ಅನುದಾನ ನೀಡಿ ಕಟ್ಟಡ ನಿರ್ಮಾಣಕ್ಕೆ ನಿವೇಶನ ಕೊಡಿಸುವುದಾಗಿ ಭರವಸೆ ನೀಡಿದರು.ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆಸಲು ಜಿಲ್ಲೆಯ ಐದು ಶಾಸಕರು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.ಮೂಡಿಗೆರೆ ತಾಲ್ಲೂಕಿನಲ್ಲಿ ನಡೆಯುವ ತಾಲ್ಲೂಕು ಸಮ್ಮೇಳನ ಹಾಗೂ ಇತರೆ ಕನ್ನಡದ ಕಾರ್ಯಕ್ರಮಗಳಿಗೆ ಸ್ಪಂದನೆ ನೀಡುವುದಾಗಿ ತಿಳಿಸಿದರು.

ಚಿಕ್ಕಮಗಳೂರು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷರಾದ ಶ್ರೀ ಸೂರಿ ಶ್ರೀನಿವಾಸ್, ಮತ್ತು ತಾಲ್ಲೂಕು ಅಧ್ಯಕ್ಷರಾದ ಶ್ರೀಯುತ ಶಾಂತಕುಮಾರ್ ಹೆಚ್.ಎಂ, ಜಿಲ್ಲಾ ಪ್ರಧಾನ ಸಂಚಾಲಕರಾದ ಶ್ರೀ ಮಗ್ಗಲಮಕ್ಕಿ ಗಣೇಶ್,ಜಿಲ್ಲಾ ಸಂಚಾಲಕರಾದ ವಿಶಾಲ ನಾಗರಾಜ್,ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬಕ್ಕಿ ಮಂಜುನಾಥ್,ಜಿಲ್ಲಾ ಮಹಿಳಾ ಘಟಕದ ಗೌರವಾಧ್ಯಕ್ಷರಾದ ನಿರ್ಮಲ ಮಂಚೇಗೌಡ,ಮೂಡಿಗೆರೆ ತಾಲ್ಲೂಕು ಸಂಚಾಲಕರಾದ ಡಿ.ಕೆ. ಲಕ್ಷ್ಮಣ್ ಗೌಡ ತಾಲೂಕು ಘಟಕದ ಗೌರವ ಕಾರ್ಯದರ್ಶಿಗಳಾದ ಪ್ರಕಾಶ್.ಆರ್ ಮತ್ತು ವಿ.ಪಿ.ನಾರಾಯಣ್,ಶ್ರೀಮತಿ ನಾಗರತ್ನಮ್ಮ,ಮೂಡಿಗೆರೆ ಹೋಬಳಿ ಘಟಕದ ಕೋಶಾಧ್ಯಕ್ಷರಾದ ಹಸೈನಾರ್ ,ಮೂಡಿಗೆರೆ ಕಸಬಾ ಕನ್ನಡ ಸಾಹಿತ್ಯ ಪರಿಷತ್ತಿನ ಹೋಬಳಿ ಘಟಕದ ಗೌರವ ಕಾರ್ಯದರ್ಶಿಗಳಾದ ನವೀನ್ ಬಿ.ಆರ್,ಮಹಿಳಾ ಘಟಕದ ಸಂಚಾಲಕರುಗಳಾದ ಕಲಾವತಿ ರಾಜಣ್ಣ,ಪವಿತ್ರ ರತೀಶ್,ಸಮಾಜ ಸೇವಕರಾದ ಶಂಶು ಬಿಳಗುಳ, ಸಿರಾಜ್ ಬಿಳಗುಳ,ಅಬ್ದುಲ್ ರೆಹಮಾನ್ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವರದಿ.

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ.

9448305990.

About Author

Leave a Reply

Your email address will not be published. Required fields are marked *