“ಭರವಸೆಯ ಶಾಸಕರಿಗೊಂದು ಸಾರ್ವಜನಿಕರ ಪತ್ರ.”
1 min read
ಮೂಡಿಗೆರೆ ಕ್ಷೇತ್ರದಲ್ಲಿ ಹೊಸ ಶಾಸಕರು ಚುನಾವಣೆಯಲ್ಲಿ ಗೆದ್ದು ಬಂದಿರುವುದು ತಿಳಿದು ಸಂತೋಷ ಆಯಿತು. ಅಭಿನಂದನೆಗಳು.
ಮೂಡಿಗೆರೆ ಸರಕಾರಿ ಕಚೇರಿಗಳನ್ನು ಶಾಸಕರು ಸಮಗ್ರವಾಗಿ ಜಾಲಾಡಬೇಕು. ತಾಲೂಕು ಕಚೇರಿ, ಜಿಲ್ಲಾ ಪಂಚಾಯತ್ ಕಚೇರಿ,ಪಿ.ಡಬ್ಲ್ಯೂ.ಡಿ, ಕ್ಷೇತ್ರ ಶಿಕ್ಷಣ ಇಲಾಖೆ, ತಾಪಂ, ಅರಣ್ಯ, ಪೊಲೀಸ್, ತೋಟಗಾರಿಕೆ, ಕೃಷಿ, ಅಬಕಾರಿ ಸಹಿತ ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಈಗಾಗಲೇ ಹಳೆ ಶಾಸಕರು ಇದ್ದಾಗ ಅವರಿಗೆ ಬೇಕಾದವರನ್ನು ಹಾಕಿಕೊಂಡು ಕೊಬ್ಬಿಸಿ ಬಿಟ್ಟಿದ್ದಾರೆ.
ಇವರಿಂದ ಇಲ್ಲಿನ ಪ್ರತಿ ಇಲಾಖೆ ಕಚೇರಿಗಳು ಕೂಡ ಲಂಚದ ಕೂಪವಾಗಿದೆ. ಸಾಮಾನ್ಯ ಜನರು ಯಾವುದೇ ಕಚೇರಿಗೆ ಹೋದರು ಸರಿಯಾಗಿ, ಸಮಯಕ್ಕೆ ಸರಿಯಾಗಿ ಯಾವ ಕೆಲಸಗಳು ನಡೆಯುವುದಿಲ್ಲ. ಅಲ್ಲದೇ ನಾಳೆ ಬನ್ನಿ, ನಾಳೆ ಬನ್ನಿ ಎನ್ನುವ ಸಿದ್ಧ ಉತ್ತರಗಳು ಸಿಗುತ್ತಿವೆ.
ಹೀಗಾಗಿ ಕ್ಷೇತ್ರದ ಸಕಲ ಇಲಾಖೆಗಳ ಹಿರಿಯ ಹಾಗೂ ಕಿರಿಯ ಅಧಿಕಾರಿಗಳನ್ನು ಸಾರ ಸಗಟಾಗಿ ವರ್ಗಾವಣೆ ಮಾಡುವ ಮೂಲಕ ಹೊಸ ಅಧಿಕಾರಿಗಳ ವರ್ಗಾವಣೆಯನ್ನು ಹೊಸ ಶಾಸಕರ ಅವಧಿಯಲ್ಲಿ ಮಾಡಬೇಕು. ಇದರಿಂದ ಕ್ಷೇತ್ರದ ಅಭಿವೃದ್ದಿ ಜತೆಗೆ ಜಡ್ಡುಗಟ್ಟಿ ಹೋಗಿರುವ ಅಧಿಕಾರಿಗಳು,ನೌಕರರು ಸ್ವಲ್ಪ ಸರಿಯಾಗಿ ಕರ್ತವ್ಯ ನಿರ್ವಹಿಸಬಹುದು ಎನ್ನುವ ಅಭಿಲಾಷೆ ಸಾರ್ವಜನಿಕರದ್ದಾಗಿದೆ.
ಇಲ್ಲದಿದ್ದರೆ ಹಳೆ ಶಾಸಕರ ಅಣತಿಯಂತೆ ಮಾಡಿರುವ ಕೆಲಸಗಳು ಮತ್ತೆ ಅದೇ ರೀತಿ ಮುಂದುವರಿಯುವ ಅಪಾಯವಿದೆ.
ಈ ವ್ಯವಸ್ಥೆಯನ್ನು ಸರಿಯಾಗಿ ನಿರ್ವಹಣೆ ಮಾಡಬೇಕು ಎಂದರೆ ಅಧಿಕಾರಿಗಳನ್ನು ಎತ್ತಂಗಡಿ ಮಾಡಿ,ಹೊಸ ಅಧಿಕಾರಿಗಳನ್ನು ತರಬೇಕು.ಇದು ಹೊಸ ಶಾಸಕರ ಕರ್ತವ್ಯ.
ಇದು ಸಾರ್ವಜನಿಕ ಅಭಿಪ್ರಾಯ ಮತ್ತು ಅವಿನ್ ಟಿವಿಯ ವಿಶೇಷ ಕಳಕಳಿ.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.






