ಶಾಲಾ ಮಕ್ಕಳಿಗೆ ಅದ್ಧೂರಿ ಸ್ವಾಗತ.
1 min read
2023 – 24ನೇ ಶೈಕ್ಷಣಿಕ ಸಾಲಿನ ಶಾಲಾ ಪ್ರಾರಂಭೋತ್ಸವ ದಿನಾಂಕ 31/05/2023ರ ಬುಧವಾರದಂದು ಎಲ್ಲಾ ಶಾಲೆಗಳಲ್ಲಿ ನಡೆಸಲಾಗಿದ್ದು. ಶ್ರೀ ವಿದ್ಯಾಭಾರತಿ ವಿದ್ಯಾ ಸಂಸ್ಥೆ ( ರಿ) ಬಣಕಲ್ ನಲ್ಲಿ ಶಾಲಾ ಪ್ರಾರಂಭೋತ್ಸವವು ಅದ್ಧೂರಿ ಹಾಗೂ ವಿಭಿನ್ನ ರೀತಿಯಲ್ಲಿ ಮಕ್ಕಳನ್ನು ಶಾಲೆಗೆ ಬರಮಾಡಿಕೊಳ್ಳಲಾಯಿತು.
ಶಾಲೆಗೆ ಆಗಮಿಸಿದ ಮಕ್ಕಳನ್ನು ಪನ್ನೀರು ಹಾಗೂ ಪುಷ್ಪಾರ್ಚನೆಯನ್ನು ಮಾಡುವ ಮೂಲಕ ಆರತಿ ಬೆಳಗಿ ಪೂರ್ಣಕುಂಭದೊಂದಿಗೆ ವಾದ್ಯಗೋಷ್ಠಿಯ ಮೂಲಕ ವಿದ್ಯಾರ್ಥಿಗಳನ್ನು ಶಾಲಾ ಶಿಕ್ಷಕರು ಮತ್ತು ಆಡಳಿತ ಮಂಡಳಿಯ ಪದಾಧಿಕಾರಿಗಳು ಅದ್ಧೂರಿ ಸ್ವಾಗತವನ್ನು ನೀಡಿ ಬರಮಾಡಿಕೊಂಡರು.

ಹೊಸ ಕನಸುಗಳನ್ನು ಹೊತ್ತು . ಹುಮ್ಮಸ್ಸಿನಿಂದ ಶಾಲೆಗೆ ಬಂದಂತಹ ವಿದ್ಯಾರ್ಥಿಗಳು ಶಾರದಾಮಾತೆಗೆ ಪುಷ್ಪಾರ್ಚನೆ ಮಾಡಿ,ಶಿಕ್ಷಕರಿಗೆ ನಮಿಸಿ ತರಗತಿಗಳನ್ನು ಪ್ರವೇಶಿಸಿದರು.

ಈ ಕಾರ್ಯಕ್ರಮದಲ್ಲಿ ಬಣಕಲ್ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಆತಿಕಾಭಾನು ಉಪಸ್ಥಿತರಿದ್ದು ಈ ಶೈಕ್ಷಣಿಕ ವರ್ಷಕ್ಕೆ ಶಾಲಾ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಶುಭಕೋರಿದರು.

ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಬಿ. ಶಿವರಾಮ ಶೆಟ್ಟಿ. ಉಪಾಧ್ಯಕ್ಷರಾದ ಬಿ.ಇ.ಸುಬ್ರಾಯ ಗೌಡ . ಪೂರ್ವ ಅಧ್ಯಕ್ಷರಾದ ಬಿ. ರಮೇಶ್. ಕಾರ್ಯದರ್ಶಿಗಳಾದ ಬಿ.ಪಿ.ಲಿಂಗಪ್ಪ ಹಾಗೂ ಮುಖ್ಯ ಶಿಕ್ಷಕರಾದ ಮಾಲತಿ ಟಿ.ಆರ್,ನಾಗರಾಜು ಸಿ. ಶಿಕ್ಷಕರಾದ ವಸಂತ್ ಹಾರ್ಗೋಡು. ಭಕ್ತೇಶ್. ಮನಮೋಹನ್. ಗೀತಾ. ಕುಸುಮ. ಎಸ್. ಶೆಟ್ಟಿ. ಶ್ವೇತಾ. ಪದ್ಮಶ್ರೀ. ಲಿಂಗರಾಜು. ಲೋಕೇಶ್. ಪ್ರತಾಪ್. ಅಶ್ವಿತಾ. ರಂಜಿತಾ. ಅನುಷಾ. ಆಶಾ. ಪಲ್ಲವಿ. ಶಾಲಾ ಅಡುಗೆ ಸಿಬ್ಬಂದಿ ಶಾಲಾ ವಿದ್ಯಾರ್ಥಿಗಳ ಪೋಷಕರು ಉಪಸ್ಥಿರಿದ್ದರು.
ಬರಹ ಕೃಪೆ.
ವಸಂತ್ ಹಾರ್ಗೋಡು.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.






