“ಹೊಸ ಸರ್ಕಾರ ಪಠ್ಯ ಪುಸ್ತಕ ಪರಿಷ್ಕರಣೆ ಮಾಡಲೇಬೇಕು.”
1 min read
ನಾವು ಹಳ್ಳಿಗಾಡಿನ ಬರಹಗಾರರು. ವಿಶ್ವವಿದ್ಯಾಲಯದಲ್ಲಿದ್ದುಕೊಂಡು ಒಳ್ಳೆಯ ಪಠ್ಯ,ಸಂಶೋಧನೆ, ಬರಹಮಾಡಿಕೊಂಡು ಗೌರವದಿಂದ ಸೇವೆ ಮುಗಿಸಿದವರು.ಪಠ್ಯ ಪುಸ್ತಕ ಸಮಿತಿ,ರಾಜ್ಯ ಹಾಗೂ ರಾಷ್ಟ್ರೀಯ ಸಮಿತಿಗಳಲ್ಲೂ ಕೆಲಸ ಮಾಡಿದವರು.ಈಗ ಆಗುವಂತೆ ಯಾವ ತೊಡಕು ಇರಲಿಲ್ಲ. ಒಳ್ಳೆಯದನ್ನು ಒಳ್ಳೆಯದು ಎಂದು ಹೇಳುವ ತಾಕತ್ತು ಇತ್ತು.ಪಠ್ಯ ಪುಸ್ತಕ ಸಮಿತಿಯಲ್ಲಿ ಅಧ್ಯಕ್ಷ ರಾದವರೇ ನಾಡ ಗೀತೆಯನ್ನುಲೇವಡಿ ಮಾಡುವ ಪರಿಸ್ಥಿತಿ ಬರಬಾರದಿತ್ತು.ತನಗೆ ಅರ್ಹತೆ ಇಲ್ಲ ಎನ್ನುವುದಾದರೆ ತಾನೂ ರಾಜೀನಾಮೆ ಕೊಡಬೇಕಾಗಿತ್ತು ಮತ್ತು ಉಳಿದ ಸದಸ್ಯರಾದರೂ ಅದನ್ನು ಮಾಡಬಹುದಿತ್ತು.
ಒಟ್ಟಾರೆ ಅವರನ್ನು ನೇಮಕ ಮಾಡಿದ ಸರ್ಕಾರ ಸಾಹಿತಿಗಳು ಮತ್ತು ಸಾರ್ವಜನಿಕ ಅಭಿಪ್ರಾಯಕ್ಕೆ ಮಣಿದು ಸಮಿತಿಯನ್ನು ರದ್ದು ಮಾಡಬೇಕಿತ್ತು.ಇದು ಪಠ್ಯ ಪುಸ್ತಕ ಚರಿತ್ರೆಗೆ ಒಂದು ಕಪ್ಪು ಅಧ್ಯಾಯ.
ಬರಹ ಕೃಪೆ.
ಶ್ರೀಕಂಠ ಕೂಡಿಗೆ.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.






