“ನೀವೇನಂತೀರಿ.”
1 min read
ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಮುಂಬರುವ ಲೋಕಸಭಾ ಚುನಾವಣೆ ವೇಳೆಗೆ ಗ್ಯಾರೆಂಟಿ ಜಾರಿ ಸಂಪೂರ್ಣ ಗೊಳಿಸಿ ಮುನ್ನಡೆದರೆ 20 ಕ್ಕಿಂತಲೂ ಅಧಿಕ ಸ್ಥಾನ ಗಳಿಸಲು ಯಾವುದೇ ಅಡ್ಡಿಯೂ ಎದುರಾಗದು.
ಎಲ್ಲಾ ತಾಲ್ಲೂಕು ಪಂಚಾಯತ್.ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಅತ್ಯದಿಕ ಮತ ಪಡೆಯಬಹುದು.
ಅಲ್ಲದೆ ಇತರೆ ರಾಜ್ಯಗಳಲ್ಲಿ ಕೂಡ ಇದರ ಲಾಭ ಪಡೆಯಬಹುದು.
ಬಿಜೆಪಿ ಆಡಳಿತ ಇರುವ ಯಾವುದೇ ರಾಜ್ಯಗಳಲ್ಲಿಯೂ ಚುನಾವಣಾ ಪೂರ್ವ ಭರವಸೆಗಳು ಸಂಪೂರ್ಣ ಈಡೇರಿಕೆ ಆಗಿಲ್ಲ. ದೇಶದಲ್ಲಿ ಕೂಡ ಕಳೆದ ಪಾರ್ಲಿಮೆಂಟ್ ಚುನಾವಣೆ ವೇಳೆ ನೀಡಿದ ಅನೇಕ ಭರವಸೆಗಳು ಈಡೇರಿಕೆ ಭಾಗ್ಯ ಕಂಡಿಲ್ಲ. ಹೀಗಿರುವಾಗ ಅವರ ಭರವಸೆ ಹುಸಿಯಾಗಿರುವುದನ್ನು ಕಾಂಗ್ರೆಸ್ ಜನ ಸಾಮಾನ್ಯರಿಗೆ ನೆನಪಿಸುವ ಪ್ರಯತ್ನ ಮಾಡಿದರೆ ಸಫಲ ಆಗಬಹುದು.
ಅಲ್ಲದೆ ಯಾರ್ಯಾರ ಅವಧಿಯಲ್ಲಿ ಎಷ್ಟೆಷ್ಟು ವಿದೇಶಿ ಸಾಲ ಪಡೆಯಲಾಗಿದೆ ಎಂಬುದನ್ನು ಬಹಿರಂಗಪಡಿಸಬೇಕು. ದೇಶವನ್ನು ಯಾರು ಸಾಲದ ಕೂಪದೊಳಗೆ ಮುಳುಗಿಸುತ್ತಿದ್ದಾರೆ ಎಂಬುದು ಜನರಿಗೆ ಗೊತ್ತಾಗಬೇಕು. ಇದರ ಕುರಿತಾಗಿ ಚರ್ಚೆಗಳು ನಡೆಯಬೇಕು. ಭರವಸೆ ಈಡೇರದ ಕುರಿತು ಬಹಿರಂಗ ಸಭೆಗಳಲ್ಲಿ ಜನರನ್ನು ತಲುಪಬೇಕು. ಕೇವಲ 50 ದಿನಗಳಲ್ಲಿ ವಿದೇಶದಿಂದ ಕಪ್ಪು ಹಣ ತರುವುದರಿಂದ ಹಿಡಿದು ಪ್ರತಿ ಅಕೌಂಟ್ ಗೆ ಹದಿನೈದು ಲಕ್ಷ ಹಾಕುವ ತನಕ ಮತ್ತು ಮಲ್ಯನನ್ನೂ ಜೈಲಿಗೆ ಕಳಿಸುತ್ತೇವೆ ಎಂದವರ ಬಗ್ಗೆ ಚರ್ಚೆಗಳು ಸಾಮಾನ್ಯ ಜನರಲ್ಲಿ ನಡೆಯಬೇಕು. ಆಗ ಫಲಪ್ರದ ಬೆಳವಣಿಗೆ ಕಾಣಬಹುದು.
ಬರಹ ಕೃಪೆ.
ಅಜೀಜ್ ಕಿರಗುಂದ.
ಮೂಡಿಗೆರೆ.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.






