“ಎಂಜಿಎಂ ಟ್ರಸ್ಟ್ ಮತ್ತು ವಿ ಎಸ್ ಎಜು಼ಕೇಷನ್ ಟ್ರಸ್ಟ್ ವತಿಯಿಂದ ರೋಗಿಗಳಿಗೆ ಸಹಾಯಧನ ವಿತರಣೆ.”
1 min read
ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ತಾಲ್ಲೂಕಿನ,ಎಂ.ಜಿ.ಎಂ ಟ್ರಸ್ಟ್ ಮತ್ತು ವಿ.ಎಸ್.ಎಜು಼ಕೇಷನ್ ಟ್ರಸ್ಟ್ ವತಿಯಿಂದ 3 ಜನ ರೋಗಿಗಳಿಗೆ ಸಹಾಯ ಧನ ವಿತರಿಸಿದರು.
ಎಂ.ಜಿ.ಎಂ ಟ್ರಸ್ಟ್ ನ ಕಾರ್ಯದರ್ಶಿಗಳಾದ ಶ್ರೀಯುತ ವೆಂಕಟೇಶ್ ಅವರು ಬಿ.ಜಿ.ಎಸ್. ಸ್ಕೂಲ್ ನ ದೈಹಿಕ ಶಿಕ್ಷಕರಾದ ಬಡಿಗೇರ್ ಎಂಬುವರಿಗೆ ಮೋಟರ್ ಸೈಕಲ್ನಲ್ಲಿ ಅಪಘಾತವಾಗಿದ್ದು ಕಾಲಿನ ಮೂಳೆ ಮುರಿದಿದ್ದು ಊರುಗೋಲಿನ ಸಹಾಯದಿಂದ ಓಡಾಡುತ್ತಿದ್ದಾರೆ ಅವರಿಗೆ ಎಂಜಿಎಂ ಟ್ರಸ್ಟ್ ವತಿಯಿಂದ 20000 ರೂ ಚೆಕ್ಕನ್ನು ವಿತರಿಸಿದರು ಹಾಗೂ ಅರುಣ್ ಚಕ್ರವರ್ತಿ ಎಂಬ ಮೂಡಿಗೆರೆಯ ಛತ್ರ ಮೈದಾನದ ವಾಸಿ, ಇವರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು ಅವರಿಗೂ ಸಹ 10000 ಗಳ ಚೆಕ್ಕನ್ನು ವಿತರಿಸಿದರು ಹಾಗೂ ಜಯಲಕ್ಷ್ಮಿ ಮಲ್ಲಂದೂರ್ ಇವರು ಸಹ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು ಅವರಿಗೂ 10 ಸಾವಿರ ರೂಗಳ ಚೆಕ್ಕನ್ನು ವಿತರಿಸಿದರು.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.





