ಕಾಂಗ್ರೆಸ್ ಗೆ ನೈತಿಕತೆ ಇದ್ದರೆ ದಲಿತರನ್ನು ಸಿ.ಎಂ ಮಾಡಲಿ : ಲೋಕವಳ್ಳಿ ರಮೇಶ್
1 min read
ಈ ಬಾರಿ ಚುನಾವಣೆಯಲ್ಲಿ 90%ದಲಿತರ ಓಟನ್ನು ಪಡೆದುಕೊಂಡು ಬಹುಮತ ಪಡೆದುಕೊಂಡಿರುವ ಕಾಂಗ್ರೆಸ್, ಚುನಾವಣಾ ಪ್ರಚಾರದ ವೇಳೆ ದಲಿತರ ಓಟು ಬಿ ಎಸ್ ಪಿ ಗೆ ಅಥವಾ ಬೇರೆ ಪಕ್ಷಗಳಿಗೆ ನೀಡಿದರೆ ಬಿ ಜೆ ಪಿ ಗೆಲ್ಲುತ್ತದೆ ಎಂದು ದಲಿತರ ಮನೆ ಮನೆಗೆ ತೆರಳಿ ಅಪಪ್ರಚಾರ ಮಾಡಿಕೊಂಡು ಗೆದ್ದ ಕಾಂಗ್ರೇಸ್ ಮುಖ್ಯಮಂತ್ರಿ ಅನ್ನೋ ವಿಚಾರದಲ್ಲಿ ಕುರುಬ ಸಮುದಾಯದ ಸಿದ್ದರಾಮಯ್ಯ ಹಾಗೂ ಒಕ್ಕಲಿಗ ಸಮುದಾಯದ ಡಿ ಕೆ ಶಿವಕುಮಾರ್ ಹೆಸರುಗಳು ಮಾತ್ರ ಕೇಳಿ ಬರುತ್ತಿರುವುದು ಬೇಸರ ಉಂಟಾಗಿದೆ.
ಹಾಗಾದ್ರೆ ದಲಿತ ಸಮುದಾಯದಿಂದ ಗೆದ್ದಿರುವ ಯಾವ ನಾಯಕರಿಗೂ ಯೋಗ್ಯತೆ ಇಲ್ವಾ ಎಂದು ಬಿ ಎಸ್ ಪಿ ಮೂಡಿಗೆರೆ ಅಧ್ಯಕ್ಷ ಲೋಕವಳ್ಳಿ ರಮೇಶ್ ಹೇಳಿದರು, ಓಟು ಕೇಳಿ ವಾಮ ಮಾರ್ಗದ ಮೂಲಕ ಗೆದ್ದ ಕಾಂಗ್ರೇಸ್ ನ ನಾಯಕರೆಲ್ಲ ಬೀದಿಗಿಳಿದು ಕೇಳಿ ನಮ್ಮ ದಲಿತರಿಗೂ ಮುಖ್ಯಮಂತ್ರಿ ಮಾಡಿ ಎಂದು ಲೋಕವಳ್ಳಿ ರಮೇಶ್ ನಮ್ಮ ವಾಹಿನಿಯ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.




