ಶ್ರೀ ವಿದ್ಯಾ ಭಾರತಿ ಶಾಲೆಗೆ ಸತತ 11ನೇ ಬಾರಿ ಶೇಕಡಾ 100 ಫಲಿತಾಂಶ
1 min read
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಣಕಲ್ ನ ಶ್ರೀ ವಿದ್ಯಾ ಭಾರತಿ ಶಾಲೆಯಲ್ಲಿ ಸತತ 11ನೇ ಬಾರಿ ಶೇಕಡಾ 100 ಫಲಿತಾಂಶ ಬಂದಿದೆ.
2022 23ನೇ ಸಾಲಿನ ಎಸ್. ಎಲ್. ಸಿ. ವಾರ್ಷಿಕ ಪರೀಕ್ಷೆಗೆ ಶಾಲೆಯಲ್ಲಿ ಒಟ್ಟು 24 ವಿದ್ಯಾರ್ಥಿಗಳು ಹಾಜರಾಗಿದ್ದು ಇದರಲ್ಲಿ 24 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶಾಲೆಯು 11ನೇ ಬಾರಿ ಶೇಕಡಾ 100 ಫಲಿತಾಂಶ ಪಡೆದಿದೆ.
ಇದರಲ್ಲಿ A+ – 2. A – 4. B+ – 8. B – 7. C+ – 3.
ರಚನಾ ಸಿ.ಎಂ ಎಂಬ ವಿದ್ಯಾರ್ಥಿನಿಯು 625 ಅಂಕಗಳಿಗೆ 581 ಅಂಕಗಳನ್ನು ಪಡೆದು ಶೇಕಡ 92.96 ಫಲಿತಾಂಶದೊಂದಿಗೆ ಶಾಲೆಗೆ ಪ್ರಥಮ ಸ್ಥಾನವನ್ನು ಪಡೆದಿದ್ದಾಳೆ.

ಪ್ರತೀಕ್ ಬಿ.ಎ. ಎಂಬ ವಿದ್ಯಾರ್ಥಿಯು 625 ಅಂಕಗಳಿಗೆ 564 ಅಂಕಗಳನ್ನು ಪಡೆದು 90.24 ಶೇಕಡಾ ಫಲಿತಾಂಶದೊಂದಿಗೆ ಶಾಲೆಗೆ ದ್ವಿತೀಯ ಸ್ಥಾನವನ್ನು ಪಡೆದಿದ್ದಾನೆ

ಉತ್ತಮ ಫಲಿತಾಂಶದೊಂದಿಗೆ ಶಾಲೆಗೆ ಕೀರ್ತಿ ತಂದ ವಿದ್ಯಾರ್ಥಿಗಳನ್ನು ಹಾಗೂ ಶ್ರಮಿಸಿದ ಶಿಕ್ಷಕರನ್ನು ಶಾಲಾ ಆಡಳಿತ ಮಂಡಳಿಯ ಸರ್ವ ಸದಸ್ಯರು ಅಭಿನಂದಿಸಿದ್ದಾರೆ
ವರದಿ
ಮಗ್ಗಲ ಮಕ್ಕಿ ಗಣೇಶ್.
ಬ್ಯುರೋ ನ್ಯೂಸ್ ಅವಿನ್ ಟಿವಿ.

