“ಮೂಡಿಗೆರೆ ಬದಲಾಗಬೇಕಾದರೆ ವಜ್ರದ ಗುರುತಿಗೆ ಮತ ನೀಡಿ : ರುದ್ರೇಶ್ ಕಹಳೆ.”
1 min read
ಪ್ರಜಾಕೀಯ ಪಕ್ಷದ ಸಿದ್ಧಾಂತವನ್ನು ಇಟ್ಟುಕೊಂಡು ಮೂಡಿಗೆರೆ ವಿಧಾನಸಭಾ ಕ್ಷೇತ್ರವನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಮೂಡಿಗೆರೆ ವಿಧಾನಸಭಾ ಕ್ಷೇತ್ರದ 2023ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ ಆದ್ದರಿಂದ ಮತದಾರ ಪ್ರಭುಗಳು ನನಗೆ ಮಾತೇ ನೀಡುವುದರ ಮೂಲಕ ನನ್ನನ್ನು ಗೆಲ್ಲಿಸಿ ಎಂದು ದಿನಾಂಕ 08/05/2023ರ ಸೋಮವಾರದಂದು ನಮ್ಮ ವಾಹಿನಿಯ ಮೂಲಕ ಪಕ್ಷೇತರ ಅಭ್ಯರ್ಥಿ ರುದ್ರೇಶ್ ಕಹಳೆಯವರು ಮತದಾರರಲ್ಲಿ ಮನವಿ ಮಾಡಿದರು.
ನನ್ನನ್ನು ನೀವುಗಳು ಗೆಲ್ಲಿಸಿದ್ದೇ ಆದರೆ ಯುವಕರ ನಿರುದ್ಯೋಗ ಸಮಸ್ಯೆ ನಿವಾರಿಸಲು ಒಂದು ವರ್ಷದಲ್ಲಿ ಎರಡು ಬಾರಿ ಉದ್ಯೋಗ ಮೇಳ ಮತ್ತು ಬಡವರಿಗೆ ಆರೋಗ್ಯ ತಪಾಸಣಾ ಶಿಬಿರಗಳು,ಭ್ರಷ್ಟಾಚಾರ ನಿರ್ಮೂಲನೆ, ಸುಸಜ್ಜಿತವಾದ ಆಸ್ಪತ್ರೆ,ಸುಸಜ್ಜಿತವಾದ ತಾಲ್ಲೂಕು ಕಚೇರಿ ನಿರ್ಮಾಣ,ಸಮರ್ಪಕವಾದ ಸರ್ಕಾರಿ ಬಸ್ ವ್ಯವಸ್ಥೆ ಇವುಗಳನ್ನು ಕಲ್ಪಿಸುವುದೇ ನನ್ನ ಧ್ಯೇಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಭಿಷೇಕ್ ಹುಯಿಲು ಮನೆ, ಧರ್ಮೇಂದ್ರ ಆಚಾರ್ ಕಿರುಗುಂದ,ಪ್ರದೀಪ್ ಕಾಡುಮನೆ,ಸಂದೇಶ್ ಗೌಡ,ಕರುನಾಡು ರಕ್ಷಣಾ ವೇದಿಕೆ ತುಮಕೂರು ಜಿಲ್ಲಾಧ್ಯಕ್ಷರಾದ ಧನಂಜಯ ಗೌಡ ಉಪಸ್ಥಿತರಿದ್ದರು.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.

