“ಮಾಜಿ ಶಾಸಕರ ಮೇಲೆ ಹಲ್ಲೆ,ಮನೆ ಲೂಟಿ.”
1 min read
ತರೀಕೆರೆ ಮಾಜಿ ಶಾಸಕ ಎಸ್.ಎಂ. ನಾಗರಾಜು ಅವರ ತೋಟದ ಮನೆಗೆ ನುಗ್ಗಿರುವ ದರೋಡೆಕೋರರ ತಂಡ ಚಿನ್ನಾಭರಣ, ನಗದು ದರೋಡೆ ಮಾಡಿ ಪರಾರಿಯಾಗಿದೆ.ಬಂದೂಕು, ಮಚ್ಚಿನೊಂದಿಗೆ ಬಂದಿದ್ದ ದುಷ್ಕರ್ಮಿಗಳು ಮಾಜಿ ಶಾಸಕರ ಮನೆಗೆ ನುಗ್ಗಿ ದರೋಡೆ ಮತ್ತು ಹಲ್ಲೆ ಮಾಡಿರುವ ಘಟನೆ ನಡೆದಿದೆ.ತಂಡದಲ್ಲಿ 15 ಕ್ಕೂ ಹೆಚ್ಚು ದುಷ್ಕರ್ಮಿಗಳು ಇದ್ದರೆಂದು ಹೇಳಲಾಗುತ್ತಿದೆ. ಎಸ್.ಎಂ.ನಾಗರಾಜ್ ಅವರ ಮನೆಯ ಬಾಗಿಲು ಮುರಿದು ಒಳ ಪ್ರವೇಶಿಸಿದ ದರೋಡೆಕೋರರು ಮನೆಯಲ್ಲಿದ್ದ ನಾಗರಾಜು ಮತ್ತು ಅವರ ಕುಟುಂಬದವರ ಮೇಲೆ ಹಲ್ಲೆ ನಡೆಸಿ. 1ಕೆಜಿಗೂ ಅಧಿಕ ಚಿನ್ನಾಭರಣ,ಹಣ ದರೋಡೆ ಮಾಡಿದ್ದಾರೆ.ಅಜ್ಜಂಪುರ ತಾಲೂಕಿನ ಗಡಿಹಳ್ಳಿಯ ತೋಟದ ಮನೆಯಲ್ಲಿ ಘಟನೆ ನಡೆದಿದೆ.ಚುನಾವಣೆ ಸಮಯದಲ್ಲಿ ಈ ದರೋಡೆ ಪ್ರಕರಣ ಹಲವು ಅನುಮಾನ ಮೂಡಿಸಿದೆ. ರಾಜಕೀಯ ದ್ವೇಷದಿಂದ ಈ ಕೃತ್ಯ ನಡೆಸಲಾಗಿದೆಯಾ ? ಅಥವಾ ದರೋಡೆಕೋರರ ಕೃತ್ಯವಾ ? ಎಂಬುದು ಇನ್ನಷ್ಟೇ ಸ್ಪಷ್ಟವಾಗಬೇಕಾಗಿದೆ.ಘಟನಾ ಸ್ಥಳಕ್ಕೆ ಎಸ್ಪಿ ಉಮ ಪ್ರಶಾಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದುಷ್ಕರ್ಮಿಗಳ ಶೋಧಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.

