“ಭೀಕರ ಅಪಘಾತ.”
1 min read

ಚಿಕ್ಕಮಗಳೂರು ಜಿಲ್ಲೆಯ, ಮೂಡಿಗೆರೆ ತಾಲೂಕಿನ, ಬಣಕಲ್ ಹೋಬಳಿಯ,ಮಂಗಳೂರು -ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ ಫಲ್ಗುಣಿ ರಸ್ತೆಯ ತಿರುವಿನಲ್ಲಿ ಎರಡು ಕಾರುಗಳ ನಡುವೆ ಅಪಘಾತ ಸಂಭವಿಸಿದ್ದು ಪ್ರಯಾಣಿಕರ ಸ್ಥಿತಿ ಗಂಭೀರವಾಗಿದೆ.ಕೋಲಾರದಿಂದ ಧರ್ಮಸ್ಥಳದ ಕಡೆಗೆ ಹೋಗುತ್ತಿದ್ದ ಕಾರು ಮತ್ತು ಮಂಗಳೂರಿನಿಂದ ಬೆಂಗಳೂರಿಗೆ ಹೋಗುತ್ತಿದ್ದ ಎರಡು ಕಾರು ಜಖಂಗೊಂಡಿದೆ.
ಈ ಅಪಘಾತದಲ್ಲಿ ಕೊಟ್ಟಿಗೆಹಾರ ಸಮೀಪದ ಬಿನ್ನಡಿ ಗ್ರಾಮದ ಸುಮಿತ್ರ ಎಂಬುವವರ ಬೈಕ್ ಕೂಡ ನಜ್ಜುಗುಜ್ಜಾಗಿದ್ದು ಸುಮಿತ್ರ ಹಾಗೂ ಅವರ ಮಗಳ ಸ್ಥಿತಿ ಗಂಭೀರವಾಗಿದೆ,ಅವರನ್ನು ಅಂಬುಲೆನ್ಸ್ ವಾಹನದಲ್ಲಿ ಮಂಗಳೂರಿಗೆ ಕಳುಹಿಸಿದ್ದಾರೆ. ಕಾರಿನಲ್ಲಿದ್ದ ಗಾಯಾಳುಗಳನ್ನು ಸ್ಥಳೀಯರಾದ ಸಬ್ಬೇನಹಳ್ಳಿ ಹಸನಬ್ಬ ಮತ್ತು ಇನ್ನಿತರರು ಸೇರಿ ಬಿ.ಎಸ್.ಪಿ.ಪಕ್ಷದ ಮತ ಪ್ರಚಾರದ ವಾಹನದಲ್ಲಿ ಮೂಡಿಗೆರೆಯ ಎಂ.ಜಿ.ಎಂ.ಆಸ್ಪತ್ರೆಗೆ ಕಳುಹಿಸಿದ್ದಾರೆ.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.