“ತೆನೆ” ಬಿಟ್ಟು “ಕಮಲ” ಹಿಡಿದ ಜೆಡಿಎಸ್ ಕಾರ್ಯಕರ್ತರು.
1 min read
ಭಾರತೀಯ ಜನತಾ ಪಾರ್ಟಿಯ ಸಿದ್ದಂತಾವನ್ನು ಒಪ್ಪಿ, ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ವಿಧಾನಸಭಾ ಕ್ಷೇತ್ರದ,ಆಲ್ದೂರು ಮಂಡಲ ಹಾಗೂ ಮೂಡಿಗೆರೆ ಮಂಡಲದ ಜೆಡಿಎಸ್ ನ ಹಲವಾರು ಕಾರ್ಯಕರ್ತರು ವಿಧಾನ ಪರಿಷತ್ ಉಪ ಸಭಾಪತಿಗಳಾದ ಎಂ.ಕೆ.ಪ್ರಾಣೇಶ್ ಅವರ ಸಮ್ಮುಖದಲ್ಲಿ ದಿನಾಂಕ 01/05/2023ರ ಸೋಮವಾರದಂದು ಬಿಜೆಪಿ ಪಕ್ಷ ಸೇರಿದರು.


ಈ ಸಂದರ್ಭದಲ್ಲಿ ಮೂಡಿಗೆರೆ ಮಂಡಲದ ಅಧ್ಯಕ್ಷರಾದ ಜೆ.ಎಸ್.ರಘು ಜನ್ನಾಪುರ,ತರುವೆ ಗಜೇಂದ್ರ,ಕೊಣಗೆರೆ ಸುಂದರೇಶ್,ಬ್ರಿಜೇಶ್,ಅನುಕುಮಾರ್ (ಪುಟ್ಟಣ್ಣ)ಪಟ್ಟದೂರು ಹಾಗೂ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.