लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
19/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

“ಕ್ಷೇತ್ರದ ಕಲ್ಯಾಣಕ್ಕಾಗಿ ಪೂಜೆ ಪ್ರಾರ್ಥನೆ ಸಂಕಲ್ಪ,ಶ್ರೀ ಫಲಾಹಾರಸ್ವಾಮಿ ಮಠಕ್ಕೆ ಎಚ್ ಡಿ ತಮ್ಮಯ್ಯ ಭೇಟಿ.”

1 min read

ದುಷ್ಟ ಶಕ್ತಿಗಳು ತೊಲಗಿಸಿ ಭ್ರಷ್ಟಾಚಾರ ನೆಲಸಮಮಾಡಲು ದಕ್ಷ ಮತ್ತು ಪ್ರಾಮಾಣಿಕ ರಾಜಕಾರಣಿಗಳು ಹೊರ ಹೊಮ್ಮಬೇಕಾಗಿದೆ ಎಂದು ಶ್ರೀ ಆದಿಗುರು ಫಲಾಹಾರಸ್ವಾಮಿ ಮಠದ ಉತ್ತರಾಧಿಕಾರಿಗಳಾದ ಮುರುಘೇoದ್ರಸ್ವಾಮಿಯವರು ವರ್ತಮಾನದ ರಾಜಕಾರಣಗಳ ಬಗ್ಗೆ, ಅದರಲ್ಲೂ ವಿಶೇಷವಾಗಿ ಚಿಕ್ಕಮಗಳೂರು ಜಿಲ್ಲಾ ರಾಜಕಾರಣದ ಬಗ್ಗೆ ಅನೇಕ ಆತಂಕಗಳೊಟ್ಟಿಗೆ ವಿಶೇಷವಾಗಿ ಭಾವೈಕತೆ ನಾಡಾಗಿರುವ ಚಿಕ್ಕಮಗಳೂರು ಜಿಲ್ಲೆಯಲಿ ಆಗಿ ಹೋಗುತ್ತಿರುವ ರಾಜಕೀಯ ನಡವಳಿಕೆ ಬಗ್ಗೆ ವಿಷಾದ ವ್ಯಕ್ತಪಡಿಸಿ, ಮುತ್ಸದ್ದಿ ರಾಜಕಾರಣವು ಈ ನೆಲದಲ್ಲಿ ಸಮಾಧಿಯಾಗದಂತೆ ನೋಡಿಕೊಳ್ಳಬೇಕಾಗಿದೆ ಎಂದು ಎಚ್ಚರಿಸಿದರು, ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹೆಚ್ ಡಿ ತಮ್ಮಯ್ಯ ಚಂದ್ರದ್ರೋಣ ಪರ್ವತದ ತಪ್ಪಲಿನಲ್ಲಿರುವ ಶ್ರೀ ಆದಿಗುರು ಫಲಾಹಾರ ಸ್ವಾಮಿ ಮಠಕ್ಕೆ ದಿನಾಂಕ 01/05/2023ರ ಸೋಮವಾರದಂದು ಭೇಟಿಕೊಟ್ಟು, ಪೂಜೆ ಪ್ರಾರ್ಥನೆ ಮಾಡಿ ಆಶೀರ್ವಾದ ಪಡೆಯುವ ಸಂದರ್ಭದಲ್ಲಿ ಮಠದ ಉತ್ತರಾಧಿಕಾರಿಗಳಾದ ಶ್ರೀ ಮುರಘೇಂದ್ರಸ್ವಾಮಿ ಅವರು ಹೆಚ್ ಡಿ ತಮ್ಮಯ್ಯ ಅವರನ್ನು ಆಶೀರ್ವದಿಸಿ,ಚಿಕ್ಕಮಗಳೂರು ಜಿಲ್ಲೆಗೆ ಅದು ವಿಶೇಷವಾಗಿ ಈ ಕ್ಷೇತ್ರಕ್ಕೆ ಪೌರಾಣಿಕವಾದ ಐತಿಹಾಸಿಕವಾದ ಒಂದು ನೆಲ ಮೂಲದ ಸಂಸ್ಕಾರ ಮತ್ತು ಸಂಸ್ಕೃತಿ ಇದೆ, ಇದು ಒಂದು ತಪೋಭೂಮಿ, ಶ್ರೀ ಸಿದ್ಧಪುರುಷರ ಕ್ಷೇತ್ರ, ಭಾವೈಕ್ಯತೆಯ ನೆಲ, ದಲಿತರ ದಮನಿತರ ನೊಂದವರ ಶೋಷಿತರ ಪರವಾಗಿ ಧರ್ಮ ಮತ್ತು ಜಾತಿಯನ್ನು ಮೀರಿ ದಯೆಯ ನೆಲೆಗಟ್ಟಿನಲ್ಲಿ ಗಿರಿ ತಪ್ಪಲಿನಲ್ಲಿರುವ ಎಲ್ಲ ಧಾರ್ಮಿಕ ಕ್ಷೇತ್ರಗಳು ತಮ್ಮ ಸೇವೆಯನ್ನು ಕೊಡ ಮಾಡುತ್ತಾ ಬರುತ್ತಿವೆ, ಭ್ರಷ್ಟ ರಾಜಕಾರಣವು ಈ ನೆಲದ ಪಾವಿತ್ರತೆಗೆ ದಕ್ಕೆ ಉಂಟು ಮಾಡುತ್ತಿರುವುದು ಕಾಣುತ್ತಿದೆ, ಇದು ವಿಷಾದ ಮತ್ತು ಅಪಾಯದ ಸಂಕೇತ, ಇಂತಹ ಭ್ರಷ್ಟ ರಾಜಕಾರಣ ತೊಲಗಿ, ಒಂದು ಧರ್ಮ ಸಂಸತ್ತು ಸ್ಥಾಪನೆಯಾಗಲಿ ಎಂದು ಮಂತ್ರಾಕ್ಷತೆಗಳೊಂದಿಗೆ ಆಶೀರ್ವಾದಮಾಡಿ, ಸನ್ಮಾನ ಮಾಡಿ,ಶ್ರೀ ಫಲಾಹಾರಸ್ವಾಮಿ ಮಠದ ವತಿಯಿಂದ ಚುನಾವಣಾ ಖರ್ಚಿಗಾಗಿ ದೇಣಿಗೆ ನೀಡಿ ಆಶೀರ್ವದಿಸಿದರು.

ಈ ಸಂದರ್ಭದಲ್ಲಿ ಶ್ರೀಮಠದ ಆಶೀರ್ವಾದ ಮತ್ತು ದೇಣಿಗೆ ಪಡೆದ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಡಿ. ತಮ್ಮಯ್ಯ ಅವರು,ನಾಡಿನ ನಿಜವಾದ ಕಲ್ಯಾಣಕ್ಕಾಗಿ ಒಂದು ಹೊಸ ಸಂಕಲ್ಪದೊಂದಿಗೆ ಈ ಕ್ಷೇತ್ರವನ್ನು ಭಾವೈಕ್ಯತೆಯ ನಾಡಾಗಿ – ಶಾಂತಿಯ ತವರೂರಾಗಿ ನಿರ್ಮಾಣ ಮಾಡಬೇಕಾಗಿದೆ, ಇಂದು ಈ ಕ್ಷೇತ್ರದ ಜನತೆ ಪ್ರತಿಕ್ಷಣ ದಿನನಿತ್ಯ ಅನೇಕ ಆತಂಕಗಳೊಟ್ಟಿಗೆ ಉಸಿರುಗಟ್ಟುವ ವಾತಾವರಣದಲ್ಲಿ ಬದುಕು ಸಾಗಿಸುತ್ತಿದ್ದಾರೆ, ಇಂತಹ ಉಸಿರುಗಟ್ಟಿಸುವ ವಾತಾವರಣದಿಂದ ಈ ಕ್ಷೇತ್ರವನ್ನು ಮುಕ್ತಗೊಳಿಸಬೇಕಾಗಿದೆ, ಹಾಗಾಗಿ ಈ ಕ್ಷೇತ್ರದ ಜನರ ಸಂಪೂರ್ಣ ಆಶೀರ್ವಾದ ನನ್ನ ಗೆಲುವಿನ ಮೂಲಕ ದೊರೆಯಲಿ ಎಂದು ಸಂಕಲ್ಪ ಮತ್ತು ಪ್ರಾರ್ಥನೆ ಸಲ್ಲಿಸಲು ಶ್ರೀ ಮಠಕ್ಕೆ ಬಂದಿದ್ದೇನೆ ಎಂದರು, ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದಗಾಯತ್ರಿ ಶಾಂತೇಗೌಡ ಮತ್ತು ಮಹಡಿಮನೆ ಸತೀಶ್ ಅವರನ್ನು ಶ್ರೀ ಮಠದ ವತಿಯಿಂದ ಸನ್ಮಾನಿಸಿಲಾಯಿತು.

ಈ ಸಂದರ್ಭದಲ್ಲಿ ಶ್ರೀಮಠದ ಆಡಳಿತಕಾಧಿಕಾರಿಗಳಾದ ಎಂ.ವಿ.ಗಿರೀಶ್,ಕಾಂಗ್ರೆಸ್ ಪಕ್ಷದ ಮುಖಂಡರಾದ ಕೆ.ಮೊಹಮ್ಮದ್,ಎಂ.ಬಿ ಕಲ್ಲೇಶ್, ಜೆ.ಬಿ ಮಹೇಶ್,ನಟರಾಜ್ ಎಸ್. ಕೊಪ್ಪಲು,ಅಕ್ಕಿ ಗಿರಿ,ಇಟ್ಟಿಗೆ ಗಣೇಶ್,ಮುಗುಳವಳ್ಳಿ ಉಮೇಶ್,ವಿಜಯ್ ಕುಮಾರ್, ಈಶ್ವರ್,ಕಾಂತರಾಜ್,ಸಿ.ಎಸ್ ಅಶೋಕ್,ಮಲ್ಲೇನಹಳ್ಳಿ ಜಯರಾಮ್,ಎನ್.ಹೆಚ್ ಮೋಹನ್,ದಿವಾಕರ್,ಡಿ.ಎಂ.ಮಂಜುನಾಥ ಸ್ವಾಮಿ ಹಾಗೂ ಮುಂತಾದವರು ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *