AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

“ಸುದ್ದಿ ಮಾಧ್ಯಮಗಳು ಸಮಾಜದಲ್ಲಿರುವ ಡೊಂಕುಗಳನ್ನು ತಿದ್ದುವ ಮತ್ತು ಜನಪ್ರತಿನಿಧಿಗಳನ್ನು ಪ್ರಶ್ನಿಸುವ ಹಾಗೂ ಜನಸಾಮಾನ್ಯರ ಸಮಸ್ಯೆಗಳ ಧ್ವನಿಯಾಗಬೇಕು:ಎಂ.ಕೆ.ಪ್ರಾಣೇಶ್.”

1 min read
ಮೂಡಿಗೆರೆ : ಮಾಧ್ಯಮಗಳು ಸಮಾಜದ ಪರಿವರ್ತನೆ ಮತ್ತು ಜನಜಾಗೃತಿಗೆ ಪೂರಕವಾದ ಸುದ್ದಿಗಳಿಗೆ ಹೆಚ್ಚು ಮಹತ್ವ ನೀಡಬೇಕೆಂದು ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಹೇಳಿದರು.
ಅವರು ದಿನಾಂಕ 04/07/2026ರ ಶನಿವಾರದಂದು ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಲ್ಲಿ ಪತ್ರಕರ್ತರ ಸಂಘದ ವತಿಯಿಂದ ನಡೆದ ಪತ್ರಿಕಾ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಚಿತ್ರಕಲೆ ಸ್ಪರ್ಧೆ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಸುದ್ದಿ ಮಾಧ್ಯಮಗಳು ಸಮಾಜದ 4ನೇ ಅಂಗವಾಗಿದ್ದು, ಸಾಮಾಜಿಕ ಸಮಸ್ಯೆಗಳನ್ನು ಬೆಳಕಿಗೆ ತರುವ ಜತೆಗೆ ಆಡಳಿತ ಕಾರ್ಯ ವೈಖರಿಯನ್ನು ಎಚ್ಚರಿಸುವ ಕೆಲಸ ಮಾಡಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಕೆಲ ಮಾಧ್ಯಮಗಳು ಇತರೇ ಮಾಧ್ಯಮಕ್ಕೆ ಸ್ಪರ್ಧೆ ನೀಡುವ ಭರಾಟೆಯಲ್ಲಿ ಅಗತ್ಯವಿಲ್ಲದ ಸುದ್ದಿಗಳನ್ನು  ಹೆಚ್ಚಾಗಿ ಪ್ರಸಾರ ಮಾಡುತ್ತಿರುವುದರಿಂದ ಮಾಧ್ಯಮಗಳ ಮೇಲೆ ಜನರು ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ. ಇದು ಆಗಬಾರದೆಂದು ಸಲಹೆ ನೀಡಿದರು.
ಇದಕ್ಕೂ ಮುನ್ನ ಚಿತ್ರಕಲೆ ಸ್ಪರ್ಧೆ ವೀಕ್ಷಣೆಗೆ ಆಗಮಿಸಿದ್ದ ಮಾಜಿ ಸಚಿವ ಬಿ.ಬಿ.ನಿಂಗಯ್ಯ ಮಾತನಾಡಿ, ಶಾಲೆಗಳಲ್ಲಿ ಪಠ್ಯೇತರ ವಿಷಯಗಳಿಗೆ ಹೆಚ್ಚು ಒತ್ತು ಕೊಡದ ಕಾರಣ, ಮಕ್ಕಳಲ್ಲಿರುವ ಪ್ರತಿಭೆಗಳು ಬೆಳಕಿಗೆ ಬಾರದಂತಾಗಿದೆ. ಹಾಗಾಗಿ ಮಕ್ಕಳ ಪ್ರತಿಭೆಗಳು ಅನಾವರಣಗೊಳ್ಳುವಂತಹ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕು. ಇಲ್ಲಿ ಚಿತ್ರಕಲೆಗೆ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯ ಹೋರಾಟಗಾರರ ಹಾಗೂ ರಾಷ್ಟ್ರ ನಾಯಕರ ಭಾವಚಿತ್ರ ಬಿಡಿಸಲು ಕೊಟ್ಟಿರುವ ವಿಷಯ ನಿಜಕ್ಕೂ ಶ್ಲಾಘನೀಯ. ಇದರಿಂದ ವಿದ್ಯಾರ್ಥಿಗಳಲ್ಲಿ ದೇಶದ ಮೇಲೆ ಇನ್ನಷ್ಟು ಭಕ್ತಿ ಮೂಡಿಸಿದಂತಾಗಿದೆ ಎಂದು ಹೇಳಿದರು.
ಚಿತ್ರಕಲೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಎಂಇಎಸ್ ಶಾಲೆಯ ವಿದ್ಯಾರ್ಥಿ ಅಂಗದ್ ಅವಿನಾಶ್‍ಭಟ್, ದ್ವಿತೀಯ ಬಣಕಲ್ ವಿದ್ಯಾಭಾರತಿ ಶಾಲೆಯ ಬಿ.ಎಲ್.ಲೋಚನ್, ತೃತೀಯ ಸ್ಥಾನ ಬಣಕಲ್ ವಿದ್ಯಾಭಾರತಿ ಶಾಲೆಯ ಬಿ.ಎಸ್.ಸಾತ್ವಿಕಾ ಪಡೆದರು. ಸಮಾಧಾನಕ ಬಹುಮಾನವನ್ನು ಬೆಥನಿ ಶಾಲೆಯ ಕೆ.ಆರ್.ಐಶ್ವರ್ಯ, ಜಿ.ಜಿ.ಸಿಂಚನ, ನಳಂದ ಶಾಲೆಯ ವಿಶ್ರುತ್‍ರಾಜ್, ಬಣಕಲ್ ಶಾಲೆಯ ಕೆ.ಎಸ್.ವೇಧ, ವುಡ್‍ಬ್ರಿಡ್ಜ್ ಶಾಲೆಯ ಬಿ.ವೈ.ಧನ್‍ವೀರ್, ಬಣಕಲ್ ನಝರತ್ ಶಾಲೆಯ ಮೇಲ್ರಿಕ್ ಡಿಸೋಜಾ, ರಿವರ್ ವ್ಯೂವ್ ಶಾಲೆಯ ಆರ್.ಚೇತಸ್ ಪಡೆದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪತ್ರಕರ್ತರ ಸಂಘದ ಅಧ್ಯಕ್ಷ ಸಂತೋಷ್ ಅತ್ತಿಗೆರೆ ವಹಿಸಿದ್ದರು.  ತಾ.ಪಂ. ಮಾಜಿ ಅಧ್ಯಕ್ಷ ಕೆ.ಸಿ.ರತನ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಟಿ.ಮಂಜಪ್ಪ, ದೀಪಕ್ ದೊಡ್ಡಯ್ಯ, ಭರತ್ ಬಾಳೂರು, ಬಿ.ಎಂ. ಸತೀಶ್, ವಿಕ್ರಂ ಬಣಕಲ್, ಮದುಕುಮಾರ್, ಬಿ.ಆರ್.ಬಾಲಕೃಷ್ಣ, ಡಿ.ಕೆ.ಲಕ್ಷ್ಮಣ್‍ಗೌಡ, ಪ್ರಸನ್ನ ಕುಮಾರ್, ಸುನಿಲ್, ಬ್ರಿಜೇಶ್ ಕಡಿದಾಳು, ಮಂಜುನಾಥ್ ಬೆಟ್ಟಗೆರೆ, ಪೂರ್ಣೇಶ್ ಮತ್ತಾವರ, ಡಾ. ಅವಿನಾಶ್ ಮತ್ತಿತರರಿದ್ದರು.

ಕಾರ್ಯಕ್ರಮದ ಕುರಿತು ಯುರೇಕಾ ಅಕಾಡೆಮಿಯ ಸ್ಥಾಪಕರಾದ ದೀಪಕ್ ದೊಡ್ಡಯ್ಯ ಮಾತಾನಾಡಿದರು.

ನಯನ ತಳವಾರ, ನಂದೀಶ್ ಬಂಕೇನಹಳ್ಳಿ ಕಾರ್ಯಕ್ರಮ ನಿರೂಪಿಸಿದರು. ಪ್ರಸನ್ನ ಗೌಡಹಳ್ಳಿ ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಪ್ರಸನ್ನ ತಳವಾರ ವಂದಿಸಿದರು. ಪತ್ರಕರ್ತರಾದ ಉದಯಶಂಕರ್, ಆನಂದ ಕಣಚೂರು, ಎಂ.ಹೆಚ್. ಅಮರನಾಥ್, ಉಮಾಶಂಕರ್, ಪ್ರಕಾಶ್ ಬಕ್ಕಿ, ಪುನಿತ್ ಕಡಿದಾಳು, ಕಿರಣ್ ಬೆಟ್ಟಗೆರೆ ಮುಂತಾದವರಿದ್ದರು.

✍🏻ಬರಹ ಕೃಪೆ.✍🏻

ಸಿದ್ದಿಕ್ ಚಕ್ಕಮಕ್ಕಿ.

ಬ್ಯೂರೋ ನ್ಯೂಸ್,ಅವಿನ್ ಟಿವಿ.

🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.

ಸ್ಥಾನಿಕ ಸಂಪಾದಕರು,

ಬ್ಯೂರೋ ನ್ಯೂಸ್, ಅವಿನ್ ಟಿವಿ.

About Author

Leave a Reply

Your email address will not be published. Required fields are marked *

You may have missed