*ಜನ ಪ್ರತಿನಿಗಳೆ ಎಲ್ಲಿದ್ದಿರಿ*
1 min read
*ಜನ ಪ್ರತಿನಿಗಳೆ ಎಲ್ಲಿದ್ದಿರಿ*
ಮೂಡಿಗೆರೆ.
ಬಾರಿ ಮಳೆಯಿಂದಾಗಿ ಅಂಗಡಿ ಮಳಿಗೆಯೊಳಗೆ ನುಗ್ಗಿದ ನೀರು
ಮಂಗಳವಾರ ಸಂಜೆ ಸುರಿದ ಧಾರಾಕಾರ ಮಳೆಯಿಂದಾಗಿ ಬಣಕಲ್ ಮುಖ್ಯ ರಸ್ತೆ ಬದಿಯ ಕೆಲ ಅಂಗಡಿಗಳಿಗೆ ಮಳೆ ನೀರು ನುಗ್ಗಿ ವರ್ತಕರು ಪರದಾಡುವಂತಾಯಿತು.ಮೂಡಿಗೆರೆ ಹ್ಯಾಂಡ್ ಪೋಸ್ಟ್ ನಿಂದ ಕೊಟ್ಟಿಗೆಹಾರದವರೆಗೆ ರಸ್ತೆ ಅಗಲೀಕಣ ಕಾಮಗಾರಿ ನಡೆಯುತ್ತಿದ್ದು ಬಣಕಲ್ ಪಟ್ಟಣದಲ್ಲಿ ರಸ್ತೆ ಇಬ್ಬದಿ ಬಾಕ್ಸ್ ಚರಂಡಿ ಕಾರ್ಯ ಪೂರ್ಣಗೊಳ್ಳದೆ ಇರುವುದರಿಂದ ಮಳೆ ನೀರು ರಸ್ತೆ ಬದಿಯ ಅಂಗಡಿಗಳಿಗೆ ನುಗ್ಗುತ್ತಿದೆ.
ಇದರಿಂದಾಗಿ ಮಳೆ ಬಂದಾಗ ಅಂಗಡಿಗಳ ವರ್ತಕರು ಪರದಾಡುವಂತಾಗಿದೆ.
ವರದಿ.
ಮಗ್ಗಲಮಕ್ಕಿಗಣೇಶ್. ಬ್ಯೂರೋ ನ್ಯೂಸ್