ಮೂಡಿಗೆರೆ ಜೆಸಿ ಭವನದಲ್ಲಿ, ಹಮ್ಮಿಕೊಂಡಿದ್ದ ವಿದ್ಯಾರ್ಥಿ ಮಿತ್ರ 2021 .
1 min read
*ವಿದ್ಯಾರ್ಥಿ ಮಿತ್ರ 2021*
*ಮೂಡಿಗೆರೆ*
26 -9 -2020 ರಂದು ಭಾನುವಾರ ಬೆಳಗ್ಗೆ 10-30ಕ್ಕೆ ಮೂಡಿಗೆರೆ ಜೆಸಿ ಭವನದಲ್ಲಿ, ಹಮ್ಮಿಕೊಂಡಿದ್ದ ವಿದ್ಯಾರ್ಥಿ ಮಿತ್ರ 2021 .
ವೃತ್ತಿ ಶಿಕ್ಷಣ ಮಾರ್ಗದರ್ಶನ ಕಾರ್ಯಾಗಾರ 2021. ಜೇಸಿ ಮೂಡಿಗೆರೆ ಹಾಗೂ ತೋಟಗಾರಿಕಾ ಮಹಾವಿದ್ಯಾಲಯ ಮೂಡಿಗೆರೆ, ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ನವ್ ಕಿಸ್ ಕಾಲೇಜ್ ಆಫ್ ಇಂಜಿನಿಯರಿಂಗ್ ಹಾಸನ. ಇವರ ಸಂಯುಕ್ತಾಶ್ರಯದಲ್ಲಿ,20-21 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳಿಗೆ ವೃತ್ತಿ ಶಿಕ್ಷಣ ಕೋರ್ಸ್ ಗಳ ಬಗ್ಗೆ ಮಾಹಿತಿ ಕಾರ್ಯಗಾರವನ್ನು ಏರ್ಪಡಿಸಲಾಗಿತ್ತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿ ಅಧ್ಯಕ್ಷರಾದ ಚಂದ್ರಶೇಖರ ಕುನ್ನಹಳ್ಳಿ ವಹಿಸಿದ್ದರು, ಸ್ವಾಗತವನ್ನು ಜೆಸಿ ನಿಕಟಪೂರ್ವ ಅಧ್ಯಕ್ಷರಾದ ರವಿಕುಮಾರ್ ಅವರು ಸ್ವಾಗತಿಸಿದರು, ಕಾರ್ಯಕ್ರಮದ ಪ್ರಾಸ್ತಾವಿಕ ನುಡಿ, ಜೇಸಿ ಪೂರ್ವ ಅಧ್ಯಕ್ಷರಾದ ಬಿ.ಎನ್. ಮನಮೋಹನ್ ಅವರು, ಕಾರ್ಯಗಾರದ ಉದ್ಘಾಟನೆಯನ್ನು ಜೇಸಿ ಪೂರ್ವ ಅಧ್ಯಕ್ಷರಾದ ಹೆಚ್. ಆರ್.ಪ್ರದೀಪ್ ದುಂಡಗ ಅವರು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಡಾಕ್ಟರ್ ಶಾಂಭವಿ, ಹಿರಿಯರು ವೈದ್ಯರು, ಎಂಜಿಎಂ ಆಸ್ಪತ್ರೆ ಮೂಡಿಗೆರೆ.
ಪ್ರೊಫೆಸರ್ ಸುರೇಶ್ ಸಿ ಇ ಟಿ ನೋಡಲ್ ಆಫೀಸರ್ ಹಾಸನ.
ಡಾಕ್ಟರ್ ಶಿವಕುಮಾರ್ ಸಹಾಯಕ ಪ್ರಾಧ್ಯಾಪಕರು ತೋಟಗಾರಿಕಾ ಮಹಾವಿದ್ಯಾಲಯ ಮೂಡಿಗೆರೆ.
ಡಾಕ್ಟರ್ ಮೈನಾ ಮುಖ್ಯಸ್ಥರು ಕಂಪ್ಯೂಟರ್ ಸೈನ್ಸ್ ವಿಭಾಗ, ನೌಕಿಸ್ ಕಾಲೇಜ್,ಹಾಸನ. ಎಂ ಎಸ್ ಅಶೋಕ್, ಆಂಗ್ಲಭಾಷಾ ಸಹಾಯಕ ಪ್ರಾಧ್ಯಾಪಕರು ತೋಟಗಾರಿಕೆ ಮಹಾವಿದ್ಯಾಲಯ ಮೂಡಿಗೆರೆ ಬಾಗವಹಿಸಿದ್ದರು.
ಕಾರ್ಯಗಾರದಲ್ಲಿ ಡಾಕ್ಟರ್ ಶಾಂಭವಿ ಯವರು ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣದ ಬಗ್ಗೆ ಮಾಹಿತಿಯನ್ನು ನೀಡಿದರು.
ಪ್ರೊಫೆಸರ್ ಸುರೇಶ್ , ಸಿಇಟಿ ನೋಡಲ್ ಆಫೀಸರ್ ಅವರು ವಿದ್ಯಾರ್ಥಿಗಳಿಗೆ ಇಂಜಿನಿಯರ್ ಶಿಕ್ಷಣದ ಬಗ್ಗೆ ಮಾಹಿತಿಯನ್ನು ನೀಡಿದರು.
ಡಾಕ್ಟರ್ ಶಿವಕುಮಾರ್ ಸಹಾಯಕ ಪ್ರಾಧ್ಯಾಪಕರು ತೋಟಗಾರಿಕೆ ಕೃಷಿ ಶಿಕ್ಷಣದ ಬಗ್ಗೆ ಮಾಹಿತಿಯನ್ನು ನೀಡಿದರು.
ಡಾಕ್ಟರ್ ಮೈನಾ ಅವರು ಕಂಪ್ಯೂಟರ್ ಸೈನ್ಸ್ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಿದರು.
ಎಂ.ಎಸ್ ಅಶೋಕ ರವರು ಉನ್ನತ ಶಿಕ್ಷಣ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ಜೆಸಿ ಜೆಸಿರೇಟ್ ಪೂರ್ವಾಧ್ಯಕ್ಷರು ಜೇಸಿರೇಟ್ ಅಧ್ಯಕ್ಷರಾದ ಸುಧಾ ಚಂದ್ರಶೇಖರ್ ಜೆಸಿ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಜೇಸಿ ಕಾರ್ಯದರ್ಶಿ ಜೆಸಿ ಶ್ರೇಷ್ಠಿ ವಂದಿಸಿದರು.
ವರದಿ.
ಮಗ್ಗಲಮಕ್ಕಿಗಣೇಶ್. ಬ್ಯೂರೋ ನ್ಯೂಸ್.