*ಸ್ವಚ್ಚತಾ ಕಾರ್ಯಕ್ರಮ*
1 min read
*ಸೇವಾ ಮತ್ತು ಸಮರ್ಪಣ ಅಭಿಯಾನ*
ಹೆಮ್ಮೆಯ ಪ್ರಧಾನಿ ಶ್ರೀಯುತ
ನರೇಂದ್ರ ಮೋದಿಯವರ ಹುಟ್ಟುಹಬ್ಬ ಹಾಗೂ ದಿನ್ ದಯಾಳ್ ಉಪಾದ್ಯಯ್ ರವರ ಜಯಂತಿಯ ಅಂಗವಾಗಿ ಯುವ ಮೋರ್ಚಾ ಮಹಾಶಕ್ತಿ ಕೇಂದ್ರ ಬಣಕಲ್ ವತಿಯಿಂದ ಸೇವಾ ಮತ್ತು ಸಮರ್ಪಣಾ ಅಭಿಯಾನದ ಅಂಗವಾಗಿ ಇಂದು ಪಲ್ಗುಣಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಕೋವಿಡ್ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಯುವ ಮೋರ್ಚಾ ಮಹಾಶಕ್ತಿ ಕೇಂದ್ರದ ಅಧ್ಯಕ್ಷರು ಮಿಥುನ್, ರಾಜ್ಯ ಕಾರ್ಯಕರಿಣಿ ಸದಸ್ಯರು ಧನಿಕ್ ಗೌಡ, ಫಲ್ಗುಣಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕವೀಶ್, ಉಪಾಧ್ಯಕ್ಷರಾದ ನೇತ್ರಾ ಹರೀಶ್, ಸದಸ್ಯರಾದ ಸತೀಶ್, ಸರಿತಾ ಲೋಹಿತ್, ಶೀಲಾ, ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಭಾಜಪ ಬಣಕಲ್ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಶರತ್ ಪಲ್ಗುಣಿ, ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಂಡಲ ಯುವ ಮೋರ್ಚಾ ಉಪಾಧ್ಯಕ್ಷರು ನಯನ್ ಊರುಬಗೆ, ಪ್ರಧಾನ ಕಾರ್ಯದರ್ಶಿ ಚಿರಾಗ್ ಕೊಟ್ರಕೆರೆ, ಕಾರ್ಯದರ್ಶಿ ಸಚಿನ್ ಬಾನಳ್ಳಿ, ಬಣಕಲ್ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಸಂಜು ಹಾಗೂ ಪದಾಧಿಕಾರಿಗಳು, ಕಾರ್ಯಕರ್ತರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು..
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.