*ಬಾಳೆಹೊಳೆ ಭಾಸ್ಕರ್ ಸಾಹಸಿ ಹಾಗೂ ಆಪತ್ಬಾಂಧವ*
1 min read
*ಬಾಳೆಹೊಳೆ ಭಾಸ್ಕರ್ ಸಾಹಸಿ ಹಾಗೂ ಆಪತ್ಬಾಂಧವ* : ಮೂಡಿಗೆರೆ ತಾಲೂಕಿನ -ಬಾಳೆಹೊಳೆಯ ತಲಗೋಡು ನಿವಾಸಿಯಾದ ಇವರು ಒಬ್ಬರು ಕಡು ಬಡತನದ ಮನೆಯವರಾಗಿದ್ದು ಕೂಲಿ ಕೆಲಸ ಮಾಡಿ ಬದುಕುವಂತಹ ಪರಿಸ್ಥಿತಿ ಇವರದ್ದಾಗಿದೆ. ಇವರಿಗೆ 3 ಜನಹೆಣ್ಣುಮಕ್ಕಳು ಇವರು ವಾಸಮಾಡುವ ಮನೆಯ ಚಿತ್ರಣ ಈ ಕೆಳಗೆ ಇದೆ. ಇವರು ಇದುವರೆಗೆ 80 ರಿಂದ 90 ಜನರು ನೀರಿನಿಂದ ಮುಳುಗಿ ಸತ್ತವರ ಶವಗಳನ್ನು ಮೇಲೆತ್ತಿದ ಇತಿಹಾಸ ಇದೆ. ಇಷ್ಟೆಲ್ಲಾ ಸಮಾಜ ಸೇವೆ ಮಾಡಿರುವ ಇವರ ಮನೆಯ ಪರಿಸ್ಥಿತಿ ಆರ್ಥಿಕ ಪರಿಸ್ಥಿತಿಯನ್ನು ನೋಡಿದರೆ ಹೇಳತೀರದು. ಆದರೂ ಸಹ ತಮ್ಮ ಮನೆಯ ಪರಿಸ್ಥಿತಿ ತನ್ನ ಕುಟುಂಬದ ಕಷ್ಟವನ್ನು ಲೆಕ್ಕಿಸದೆ ಇನ್ನೊಬ್ಬರ ಕುಟುಂಬದ ಕಷ್ಟಪರಿಸ್ಥಿತಿಯಲ್ಲಿ ನೋವಿನ ಸಂದರ್ಭದಲ್ಲಿ ಯಾವುದೇ ಆಸೆಯನ್ನು ಹಾಗು ಷರತ್ತುಗಳನ್ನು ಹೇಳದೆ ಸಹಾಯ ಮಾಡಬೇಕೆಂಬ ಇವರ ಮನಸ್ಥಿತಿಗೆ ನನ್ನದೊಂದು ಸಲಾಂ. ಇವರಿಗೆ ನೀರಿನಲ್ಲಿ ಮುಳುಗಿ ಈಜಲು ಸರಿಯಾದ ಯಾವುದೇ ಒಂದು ಸುರಕ್ಷತಾ ಮುಂಜಾಗ್ರತಾ ಸಲಕರಣೆ ಇಲ್ಲದಿರುವುದು ಇವರ ದೌರ್ಭಾಗ್ಯ. ಸರ್ಕಾರ ದಯವಿಟ್ಟು ಇಂಥವರನ್ನು ಗುರುತಿಸಿ ಅವರಿಗೆ ಯಾವುದೇ ಒಂದು ರೀತಿಯಲ್ಲಿ ಜೀವನಕ್ಕಾಗಲಿ ಜೀವಕ್ಕಾಗಲೀ ಒಂದು ನೆಲೆ ಮಾಡಿಕೊಡಬೇಕೆಂದು ಈ ಮೂಲಕ ನನ್ನದೊಂದು ಮನವಿ. ಇವರಿಗೆ ಅಲ್ಲದಿದ್ದರೂ ಇವರ 3ಜನ ಹೆಣ್ಣುಮಕ್ಕಳಿಗಾದರೂ ಮುಂದಿನ ಜೀವನಕ್ಕಾಗಿ ಸಹಾಯ ಮಾಡಬೇಕು ದಯವಿಟ್ಟು ದುಡಿದು ತಿನ್ನುವ ಜೀವಗಳಿವು. 🙏 ವರದಿ.ಮಗ್ಗಲಮಕ್ಕಿಗಣೇಶ್. ಬ್ಯೂರೋ ನ್ಯೂಸ್.