*ಕಂದಕಕ್ಕೆ ಉರುಳಿದ ಕಾರು ಪ್ರಾಣಾಪಾಯದಿಂದ ಪಾರು*
1 min read
ಚಿಕ್ಕಮಗಳೂರು ಜಿಲ್ಲೆಯ
ಮೂಡಿಗೆರೆ ತಾಲೂಕಿನ,
ಐತಿಹಾಸಿಕ ಪ್ರವಾಸಿ ತಾಣ ದೇವರಮನೆ ಪ್ರವಾಸಕ್ಕೆ ಬಂದಿದ್ದ ಹಾಸನ ಮೂಲದ ಪ್ರವಾಸಿಗರ ಕಾರೊಂದು ದೇವರ ಮನೆಯಿಂದ ಬಣಕಲ್ ಮಾರ್ಗವಾಗಿ ಬರುವಾಗ ಗುಡ್ಡೇತೋಟ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ.
ವಾರಕ್ಕೆ ಒಂದು ಅಪಘಾತವಾಗುವ ಸ್ಥಳ. ಘಟನಾ ಸ್ಥಳದಲ್ಲಿ ವಾರಕ್ಕೊಮ್ಮೆ ಸರಣಿ ಅಪಘಾತಗಳು ನಡೆಯುತ್ತಿದ್ದು ಇಲ್ಲಿ ಇರುವ ಕುರುಹುಗಳೇ ಸಾಕ್ಷಿ ಹೇಳುತ್ತಿವೆ.
ತಡೆಗೋಡೆ ನಿರ್ಮಾಣಕ್ಕೆ ಆಗ್ರಹ.
ದೇವರಮನೆ ಹಾಗೂ ಬಣಕಲ್ ನಡುವೆ ಈ ಘಟನೆ ನಡೆಯುವ ಸ್ಥಳಕ್ಕೆ ತಡೆಗೋಡೆ ನಿರ್ಮಾಣ ಮಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ ನೂರಾರು ಅಪಘಾತಗಳು ನಡೆದರು ಸಂಬಂಧಪಟ್ಟ ಇಲಾಖೆ ಶಾಶ್ವತ ಪರಿಹಾರ ಮಾಡುವಲ್ಲಿ ವಿಫಲವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.