**ಕಾಂಗ್ರೆಸ್ ಜವಬ್ದಾರಿ**ಯುವಕಾಂಗ್ರೇಸ್ ಪದಾಧಿಕಾರಿಗಳು ಪಕ್ಷದ ಸಾಂಸ್ಥಿಕ ಚುನಾವಣೆ ಮೂಲಕ ಆಯ್ಕೆ
1 min read
*ಕಾಂಗ್ರೆಸ್ ಜವಬ್ದಾರಿ*
ಯುವಕಾಂಗ್ರೇಸ್ ಪದಾಧಿಕಾರಿಗಳು ಪಕ್ಷದ ಸಾಂಸ್ಥಿಕ ಚುನಾವಣೆ ಮೂಲಕ ಆಯ್ಕೆ ಆದಂತವರು. ಶ್ರೀ ರಾಹುಲ್ ಗಾಂಧಿಯವರ ದೂರದೃಷ್ಟಿಯ ಫಲವಾಗಿ ಇಂದು ಯುವಕಾಂಗ್ರೆಸ್ ದೇಶದಲ್ಲಿ ಒಂದು ಪ್ರಬಲ ಶಕ್ತಿಯಾಗಿ ಹೊರಹೊಮ್ಮಿದೆ.ಯುವಕರು ತಮಗೆ ನೀಡಿದ ಜವಾಬ್ದಾರಿಯನ್ನು ಶ್ರದ್ದೆಯಿಂದ ನಿರ್ವಹಿಸಿದಾಗ ಮಾತ್ರ ಒಳ್ಳೆಯ ನಾಯಕರಾಗಿ ಬೆಳೆಯಲು ಸಾಧ್ಯ ಆಗುತ್ತೆ. ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ತಿಳಿಸಿದರುಪಕ್ಷ ಕೊಟ್ಟ ಜವಾಬ್ದಾರಿಯಂತೆ ಯುವ ಕಾಂಗ್ರೆಸ್ ಯುವ ಪದಾಧಿಕಾರಿಗಳ ಪಡೆಯನ್ನು ರಚಿಸಲಾಗಿದೆ.ಪಕ್ಷದ ಹಿರಿಯರ ಮಾರ್ಗದರ್ಶನದಲ್ಲಿ ಆಯಾ ಬೂತ್ ಮಟ್ಟದಲ್ಲಿ ಯುವಕರು ಪಕ್ಷವನ್ನು ಬೇರು ಮಟ್ಟದ ಕಾರ್ಯಕರ್ತರೊಂದಿಗೆ ಬಲಿಷ್ಠವಾಗಿ ಕಟ್ಟಲು ಕಾರ್ಯಪ್ರವೃತ್ತರಾಗಬೇಕು ಎಂದು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ದೀಕ್ಷಿತ್ ಕಣಚೂರು ತಿಳಿಸಿದರು.ಮೂಡಿಗೆರೆ ಬ್ಲಾಕ್ ಯೂತ್ ಕಾಂಗ್ರೆಸ್ ಅಧ್ಯಕ್ಷರಾದ ದೀಕ್ಷಿತ್ ಕಣಚೂರು, ಯೂಥ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಅನಿಲ್, ಮಾಜಿ ಬ್ಲಾಕ್ ಅಧ್ಯಕ್ಷರಾದ ಹೇಮ ಶೇಖರ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಸಂತೋಷ್, ಜಿಲ್ಲಾ ಕಾಂಗ್ರೆಸ ಕಾರ್ಯದರ್ಶಿ ಎಂ ಎಸ್ ಅನಂತ್, ಪಟ್ಟಣ ಪಂಚಾಯತಿ ಸದಸ್ಯರಾದ ಹಂಝ, ಹೊಸ್ಕೆರೆ ರಮೇಶ್, ನಿಕಟಪೂರ್ವ ಯೂತ್ ಅಧ್ಯಕ್ಷರಾದ MLಅಭಿಜಿತ್ , ನಿಕಟಪೂರ್ವ ಯೂಥ್ ಪ್ರಧಾನ ಕಾರ್ಯದರ್ಶಿ ಅಜ್ಮಲ್ ಅಜ್ಜು, ಹೋಬಳಿ ಅಧ್ಯಕ್ಷರಾದ CBಶಂಕರ್, TMಸುಬ್ರಹ್ಮಣ್ಯ, sc ಸೆಲ್ ಅಧ್ಯಕ್ಷರಾದ H Sಸುಧೀರ್, ಬ್ಲಾಕ್ ಪ್ರಧಾನ ಕಾರ್ಯದರ್ಶಿಗಳಾದ ಸಂಪತ್ ಮುಗ್ರಹಳ್ಳಿ, ದೇವರಾಜ್ ಸಬ್ಲಿ ಹಾಗೂ ಬ್ಲಾಕ್ ಕಾಂಗ್ರೆಸ್ ಮತ್ತು ಯುತ್ ಕಾಂಗ್ರೆಸ್ಸಿನ ಕಾರ್ಯಕರ್ತ ಮುಖಂಡರು ಭಾಗವಹಿಸಿದ್ದರುಇತ್ತೀಚಿಗೆ ಗ್ರಾಮ ಪಂಚಾಯತ್ ಗೆ ನಡೆದ ಚುನಾವಣೆಯಲ್ಲಿ ಬಹುತೇಕ ಯುವಕ ಯುವತಿಯರು ಸದಸ್ಯರಾಗಿ ಆಯ್ಕೆ ಆಗಿರುವುದು ಹೆಮ್ಮೆಯ ವಿಷಯವಾಗಿದೆ. ದೇಶದ ರಾಜಕೀಯ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆ ಉದ್ದೇಶ ದಿಂದ ಮತದಾರರು ಯುವಕರ ಮೇಲೆ ಭರವಸೆ ಇಟ್ಟು ಗೆಲ್ಲಿಸಿದ್ದಾರೆ. ಮತದಾರರ ಆಶಯಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಯುವಕರು ಕೆಲಸ ಮಾಡಬೇಕಿದೆ. ಕಾಂಗ್ರೆಸ್ ಪಕ್ಷ ಕೂಡ ಯುವಕರಿಗೆ ನಾಯಕತ್ವ ನೀಡಿ ಗುರುತಿಸಿದೆ. ಯುವಕರು ಅದನ್ನು ಸದ್ಭಳಕೆ ಮಾಡಿಕೊಂಡು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಶಕ್ತಿ ಮೀರಿ ಶ್ರಮಿಸುವಂತೆ ಜಿಲ್ಲಾ ಕಾರ್ಯದರ್ಶಿ ಎಂ ಎಸ್ ಅನಂತ್ ಕರೆ ನೀಡಿದರು
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.