लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
23/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

**ಅಭಿನಂದನೆ. ಪವನ್** ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ

1 min read
Featured Video Play Icon

ಅಭಿನಂದನೆ. ಪವನ್*

ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡಿದ ತರೀಕೆರೆ ಪಟ್ಟಣದ ಮತದಾರರಿಗೆ ಅನಂತ ದನ್ಯವಾದಗಳನ್ನು ಮತ್ತು ಪಕ್ಷದ ವತಿಯಿಂದ ಜಯಗಳಿಸಿದ ಹಾಗೂ ಸ್ಪರ್ದಿಸಿದ ಎಲ್ಲ ಅಭ್ಯರ್ಥಿಗಳಿಗೆ ಅಭಿನಂದನೆಗಳನ್ನು ಕರ್ನಾಟಕ ಪ್ರದೇಶ್ ಕಾಂಗ್ರೆಸ್ ಸಂಯೋಜಕ ಜಿ.ಬಿ.ಪವನ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದೇ ಸೆಪ್ಟೆಂಬರ್3 ರಂದು ನೆಡೆದ ತರೀಕೆರೆ ಪುರಸಭೆಯ 23 ಸ್ಥಾನಗಳ ಪೈಕಿ 17 ಸ್ಥಾನಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಜಯಗಳಿಸಿದ್ದು ಆಢಳಿತರೂಢ ಬಿಜೆಪಿ ಕೇವಲ ಒಂದು ಸ್ಥಾನ ಮಾತ್ರ ಬಂದಿರುವುದು ಸಂತಸ ತಂದಿದ್ದು ಇದು ಬಿಜೆಪಿ ಸರ್ಕಾರದ ಜನವಿರೋದಿ ನೀತಿಗಳಾದ ಕೋವಿಡ್ ನಿರ್ವಹಣೆಯಲ್ಲಿನ ವೈಪಲ್ಯ ಗ್ಯಾಸ್ ಪೆಟ್ರೋಲ್ ದಿನ ವಹಿ ಬಳಕೆ ವಸ್ತುಗಳ ಬೆಲೆ ಏರಿಕೆ,ರೈತ ವಿರೋದಿ ಕಾನೂನು ವ್ಯಾಪಾರಸ್ತರ ವಿರೋದಿ ಜಿ.ಎಸ್.ಟಿ ಹೇರಿಕೆಗಳಿಂದ ಬೇಸತ್ತಿರುವ ಜನರ ಆಕ್ರೋಷದ ಪ್ರತೀಕ ಎಂದಿದ್ದಾರೆ. ಈ ಆಕ್ರೋಶ ಮುಂದಿನ ದಿನಗಳಲ್ಲಿ ದೇಶಾದ್ಯಂತ ಮೊಳಗಲಿದ್ದು ರಾಜ್ಯದಲ್ಲಿ ಪ್ರದೇಶ್ ಕಾಂಗ್ರೇಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್,ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ವಿಧಾನ ಪರಿಷತ್ ವಿರೋದ ಪಕ್ಷದ ನಾಯಕರಾದ ಎಸ್.ಆರ್.ಪಾಟೀಲ್ ಮಲ್ಲಿಕಾರ್ಜುನ ಖರ್ಗೆ ಕೆ.ಹೆಚ್. ಮುನಿಯಪ್ಪ ದೇಶಪಾಂಡೆ ಸೇರಿದಂತೆ ಐದು ಕಾರ್ಯಾದ್ಯಕ್ಷರನ್ನೊಳಗೊಂಡ ಹಿರಿಯ ನಾಯಕರ ಮುಂದಾಳತ್ವದಲ್ಲಿ ಸಂಘಟನೆ ಮಾಡಿ ಬಿಜೆಪಿ ದುರಾಢಳಿತದ ವಿರುದ್ದ ಕಾಂಗ್ರೆಸ್ ಆಂದೋಲನವಾಗಿ ಹೊರಹೊಮ್ಮಲಿದೆ ಎಂದು ತಿಳಿಸಿದ್ದಾರೆ.
ಈ ಪ್ರಚಂಡ ಗೆಲುವು ತರೀಕೆರೆಯ ಸ್ಥಳೀಯ ನಾಯಕರು ಮತ್ತು ಕಾರ್ಯಕರ್ತರ ಒಗ್ಗಟ್ಟಿನ ಪರಿಶ್ರಮದ ಫಲವಾಗಿದ್ದು ಇದರ ಸಂಪೂರ್ಣ ಕ್ರೆಡಿಟ್ ಅವರುಗಳಿಗೆ ಸಲ್ಲಲಿದೆ ಎಂದಿದ್ದಾರೆ.
ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಬರುವ ಎಲ್ಲಾ ಚುನಾವಣೆಗಳಲ್ಲಿ ಪಕ್ಷ ಇದೇ ರೀತಿಯ ಫಲಿತಾಂಶ ಪಡೆದು ಬಿಜೆಪಿಯನ್ನು ಬಗ್ಗು ಬಡಿಯಲಿದೆ ಎಂದು ಹೇಳಿಕೆಯಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Career | job

Navachaitanya Old Age Home

About Author